ಪೆರ್ಮುದೆಯಲ್ಲಿ ಜಿಲ್ಲೆಯ ಪ್ರಥಮ ಬೀಕನ್‌ ಲೈಬ್ರೆರಿ

ಅಂಧರಿಗೂ ಬಂತು ಗ್ರಂಥಾಲಯ!

Team Udayavani, May 26, 2022, 9:51 AM IST

librery

ಬಜಪೆ: ಅಂಧರ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಪ್ರತೀ ತಾಲೂಕಿನ ಒಂದು ಗ್ರಾಮ ಪಂಚಾಯತ್‌ನ ಗ್ರಂಥಾಲಯವನ್ನು ಡಿಜಿಟಲ್‌ ಆಧಾರಿತ ‘ಬೀಕನ್‌ ಗ್ರಂಥಾಲಯ’ವನ್ನಾಗಿ ಅಭಿವೃದ್ಧಿ ಪಡಿಸುವುದಾಗಿ 2021-22ರ ಆಯವ್ಯಯದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು. ಅದರಂತೆ ಮಂಗ ಳೂರು ತಾಲೂಕಿನ ಪೆರ್ಮುದೆ ಗ್ರಾ.ಪಂ.ನ ಗ್ರಂಥಾಲಯವನ್ನು ಬೀಕನ್‌ ಗ್ರಂಥಾಲಯವನ್ನಾಗಿ ಅಭಿವೃ ದ್ಧಿ ಪಡಿಸಿದ್ದು, ಇದು ಜಿಲ್ಲೆಯ ಪ್ರಥಮ ಬೀಕನ್‌ ಗ್ರಂಥಾಲಯ ಎನಿಸಿದೆ.

ಪೆರ್ಮುದೆ ಗ್ರಾ.ಪಂ. ತನ್ನ ಶೇ. 5ರ ಅಂಗವಿಕಲರ ಕಲ್ಯಾಣ ಅನುದಾನದಿಂದ 54 ಸಾವಿರ ರೂ.ಗಳನ್ನು ಮೂಲಸೌಕರ್ಯಕ್ಕೆ ವಿನಿಯೋಗಿಸಿ ಪುಸ್ತಕಗಳ ರ್ಯಾಕ್‌, ಶ್ರವಣ ಸಾಧನಗಳನ್ನು ಖರೀದಿಸಿದೆ. ಕೆನರಾ ಬ್ಯಾಂಕ್‌ ಪೆರ್ಮುದೆ ಶಾಖೆ 2 ಕಂಪ್ಯೂಟರ್‌, ಟೇಬಲ್‌ಗ‌ಳನ್ನು ನೀಡಿದೆ.

ಆರು ಮಂದಿಗೆ ಆಸನ ವ್ಯವಸ್ಥೆ, ಬ್ರೈಲ್‌ ಲಿಪಿಯ ಪುಸ್ತಕಗಳು ಹಾಗೂ ಸಿಡಿಗಳು ಪ್ರಸ್ತುತ ಲಭ್ಯವಿವೆ. ಸಾಮಾನ್ಯ ವಿಜ್ಞಾನ, ಇತಿಹಾಸ, ಆರೋಗ್ಯ, ಸಂವಿಧಾನ, ಕನ್ನಡ ಸಾಹಿತ್ಯ ಸಮೀಕ್ಷೆ, ಕವನಗಳು, ಕಾದಂಬರಿ, ಮೂಲ ಭೂತ ಹಕ್ಕು/ ಕರ್ತವ್ಯಗಳು, ಜ್ಞಾನಪೀಠ, ನೊಬೆಲ್‌ ಪ್ರಶಸ್ತಿ ಪುರಸ್ಕೃತರ ವ್ಯಕ್ತಿಚಿತ್ರಗಳು, ನೀತಿ ಕಥೆಗಳು, ಅರ್ಥಶಾಸ್ತ್ರ, ಪೌರಾಣಿಕ ಪುಸ್ತಕಗಳು, ಪಂಚತಂತ್ರ ಕಥೆಗಳು, ಕುವೆಂಪು, ಬಸವಣ್ಣ, ಸರ್‌.ಎಂ. ವಿಶ್ವೇಶ್ವರಯ್ಯ ಮೊದಲಾದವರ ಕುರಿತ ಪುಸ್ತಕಗಳು ಇಲ್ಲಿವೆ. ಸಿಡಿ ರೂಪದಲ್ಲಿರುವ ಶ್ರಾವ್ಯ ಪುಸ್ತಕಗಳೂ ಇವೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಅಧಿಕಾರಿ ಗ್ರಾಯತ್ರಿ ಅವರ ಮಾರ್ಗದರ್ಶನದಲ್ಲಿ ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಗ್ರಂಥಾಲಯವನ್ನು ಸಿದ್ಧಪಡಿಸಿದೆ. ಜನಸಾಮಾನ್ಯರ ಜ್ಞಾನ ದಾಹ ಇಂಗಿಸಲು ಅಲ್ಲಲ್ಲಿ ಗ್ರಂಥಾಲಯಗಳಿವೆ. ಆದರೆ ಅಲ್ಲಿರುವ ಪುಸ್ತಕ, ಪತ್ರಿಕೆಗಳನ್ನು ಓದಲು ಅಸಮರ್ಥರಾಗಿರುವ ಅಂಧರಿಗಾಗಿಯೇ ವಿಶೇಷ ಗ್ರಂಥಾಲಯ ನಮ್ಮ ಪಂಚಾಯತ್‌ನಲ್ಲಿ ಆಗುತ್ತಿರುವುದು ವಿಶೇಷ ಎಂದು ಪೆರ್ಮುದೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಪ್ರಸಾದ್‌ ಎನ್‌. ಅಂಚನ್‌ ತಿಳಿಸಿದ್ದಾರೆ.

ಯಾರಿಗೆ ಪ್ರಯೋಜನ?

ಮಂಗಳೂರು ತಾಲೂಕು ವ್ಯಾಪ್ತಿಯ ಎಲ್ಲ ಪಂಚಾಯತ್‌ಗಳ ಅಂಧ ನಾಗರಿಕರು ಗ್ರಂಥಾಲಯದ ಉಪಯೋಗ ಪಡೆಯಬಹುದು. ಪೆರ್ಮುದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಇಬ್ಬರು ಅಂಧರು ಹಾಗೂ ಐವರು ದೃಷ್ಟಿ ದೋಷವುಳ್ಳವರ ಸಹಿತ ಮಂಗಳೂರು ತಾಲೂಕಿನಲ್ಲಿ 203 ಮಂದಿ ಅಂಧರು, 224 ಮಂದಿ ದೃಷ್ಟಿದೋಷ ಉಳ್ಳವರು ಇದ್ದಾರೆ. ಎಲ್ಲ ಅಂಧರಿಗೆ ಬ್ರೈಲ್‌ ಲಿಪಿಯ ತರಬೇತಿ ನೀಡಿದರೆ ಈ ಗ್ರಂಥಾಲಯದಿಂದ ಅವರಿಗೆ ಹೆಚ್ಚು ಪ್ರಯೋಜನವಾಗಬಹುದು.

ಜ್ಞಾನಾರ್ಜನೆಗೆ ವಿಶೇಷ ವ್ಯವಸ್ಥೆ

ಗ್ರಾ.ಪಂ. ಗ್ರಂಥಾಲಯದ ಒಂದು ಕೊಠಡಿಯನ್ನು ಬೀಕನ್‌ ಗ್ರಂಥಾಲಯವನ್ನಾಗಿ ಮಾರ್ಪಡಿಸಲಾಗಿದೆ. 150ಕ್ಕೂ ಹೆಚ್ಚು ಬ್ರೈಲ್ ಲಿಪಿಯ ಗ್ರಂಥಗಳಿವೆ. ಲಿಪಿಯ ಜ್ಞಾನವಿಲ್ಲದವರಿಗಾಗಿ ಸಿಡಿ ರೂಪಕ್ಕೆ ಪರಿವರ್ತಿಸಿರುವ 170ಕ್ಕೂ ಹೆಚ್ಚು ಗ್ರಂಥಗಳಿದ್ದು, ಅವುಗಳನ್ನು ಹೆಡ್‌ಫೋನ್‌ ಧರಿಸಿಕೊಂಡು ಆಲಿಸಬಹುದಾಗಿದೆ. ಈ ಮೂಲಕ ಮಂಗಳೂರು ತಾಲೂಕಿನ ಅಂಧರು ಮತ್ತು ದೃಷ್ಟಿ ದೋಷವುಳ್ಳವರಿಗೂ ಜ್ಞಾನಾರ್ಜನೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. -ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

ಟಾಪ್ ನ್ಯೂಸ್

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.