ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ, ಗಿಡಕ್ಕೆ ಕಾಡುತ್ತಿದೆ ರೋಗ

ಕೃಷಿಕನಿಗೆ ನಿಲುಕದ ಬಸಳೆ, ಸೋರೆಕಾಯಿ

Team Udayavani, Nov 14, 2022, 12:48 PM IST

9

ಬಜಪೆ: ಪ್ರತೀ ತರಕಾರಿಗೂ ಮಾರುಕಟ್ಟೆಗೆ ಬರಲು ಅದರದ್ದೇ ಆದ ಸಮಯವಿರುತ್ತದೆ. ಈ ವೇಳೆ ಗ್ರಾಹಕರ ಬೇಡಿಕೆಯ ಲೆಕ್ಕಾಚಾರ ಹಾಕಿಕೊಂಡು ಕೃಷಿಕ ತರಕಾರಿ ಬೆಳೆಸಬೇಕಾಗುತ್ತದೆ. ಯಾವ ತರಕಾರಿ ಯಾವ ಸಮಯದಲ್ಲಿ ಹೆಚ್ಚು ದರ ಸಿಗಬಹುದು ಎಂಬುದು ಒಂದೆಡೆ. ಆದರೆ ಅದಕ್ಕೆ ಹವಾಮಾನ ಹೇಗೆ ಕೈಗೂಡುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗಿರುತ್ತದೆ.

ಈ ತರಕಾರಿಗಳು ಮಾರುಕಟ್ಟೆಗೆ ಬರುವ ಮೊದಲೇ ಅದಕ್ಕೆ ಎಲ್ಲಿಲ್ಲದ ಬೇಡಿಕೆ ಆರಂಭವಾಗುತ್ತದೆ. ಅವುಗಳ ದರ ಎಷ್ಟೇ ಅಧಿಕವಿರಲಿ, ಅದನ್ನು ಖರೀದಿಸಿ ಸವಿಯನ್ನು ಅನುಭವಿಸಲು ಗ್ರಾಹಕರು ಇಷ್ಟಪಡುತ್ತಾರೆ.

ಹಾಗೇಯೇ ಮಾರುಕಟ್ಟೆಯಲ್ಲಿ ಇದೀಗ ಬಸಳೆಯ ಸಮಯ. ಇದಕ್ಕೆ ಈಗ ಭಾರೀ ಬೇಡಿಕೆಯೂ ಇದೆ. ಮಳೆ ಕಡಿಮೆಯಾಗಿ, ಸೆಕೆ ಜಾಸ್ತಿಯಾದರೆ ಬಸಳೆ ಬೇಗ ಬೆಳೆಯುತ್ತದೆ ಎಂಬುದು ಕೃಷಿಕನ ಚಿಂತನೆ. ಮುಂಗಾರು ಭತ್ತದ ಬೇಸಾಯ ಕಟಾವು ಆಯಿತು. ಹಬ್ಬ ಮುಗಿದು ತುಳಸಿ ಪೂಜೆಯ ಸಮಯದಲ್ಲಿ ಎಲ್ಲೆಡೆ ಬಸಳೆ ಕೃಷಿ ಆರಂಭವಾಗುತ್ತದೆ.

ಮಾರುಕಟ್ಟೆಯಲ್ಲಿ ಬೇಗ ಸಿಗುವ ಬಸಳೆಯನ್ನು ಹೆಚ್ಚು ದರಕೊಟ್ಟು ಕೊಂಡುಹೋಗುತ್ತಾರೆ. ಇದರಿಂದ ಈಗ ಬಸಳೆ ಪದಾರ್ಥಕ್ಕಿಂತ ಜಾಸ್ತಿ, ಮನೆ, ಮನೆಯಲ್ಲಿ ಈ ಬಳ್ಳಿಯನ್ನು ನೆಡಲು ಕೊಂಡೋಗುವವರೇ ಜಾಸ್ತಿ.

ಕೃಷಿಕರಿಗೆ 50 ರೂ. ಮಾರುಕಟ್ಟೆಯಲ್ಲಿ 80 ರೂ.

ಕೃಷಿಕರಿಗೆ ಒಂದು ಕಟ್ಟು ಬಸಳೆಗೆ 50 ರೂ. ಸಿಗುತ್ತಿದೆ. ಆದರೆ ಮಾರುಕಟ್ಟೆ 70 ರಿಂದ 80 ರೂ. ತನಕ ಮಾರುತ್ತಿದ್ದಾರೆ. ಕಳೆದ ಬಾರಿ ಒಂದು ಕಟ್ಟಿಗೆ 40 ರೂ.ಸಿಗುತ್ತಿತ್ತು. ಮಾರುಕಟ್ಟೆಯಲ್ಲಿ 60 ರೂ.ಗೆ ಮಾರುತ್ತಿದ್ದರು. ಮೊದಮೊದಲಿಗೆ ಮಾತ್ರ ಈ ಬೆಲೆ ಸಿಗುತ್ತದೆ. ಎಲ್ಲೆಡೆ ಬಸಳೆ ಸಿಗುವಾಗ ಒಮ್ಮೆಲೇ ಬೇಡಿಕೆ ಕಡಿಮೆಯಾಗಿ ದರ ಕಡಿಮೆಯಾಗುತ್ತದೆ. ಮಳೆಯ ಅನಿಶ್ಚಿತತೆಯಿಂದ ಈಗ ಬಸಳೆ ಬೆಳೆಯಲು ಜನರು ಕೊಂಚ ಹಿಂಜರಿಕೆ ತೋರಿದ್ದಾರೆ. ಬೆಂಡೆ, ಹೀರೆಕಾಯಿಯಲ್ಲಿ ಪೆಟ್ಟು ತಿಂದ ಕೆಲ ಕೃಷಿಕರು ಬಸಳೆಯಲ್ಲಿಯಾದರೂ ಕೈಗೂಡಬಹುದು ಎಂಬ ಆಶಯದಲ್ಲಿದ್ದಾರೆ.

ಸೋರೆಗೆ ಬಳ್ಳಿ ಬಾಡುವ ರೋಗ

ಸೋರೆ ಕಾಯಿ ಬಳ್ಳಿ ಬಾಡುವ ಮೂಲಕ ಅದು ಸತ್ತು ಹೋಗುವ ರೋಗ ಶುರುವಾಗಿದೆ. ಬೆಳಗ್ಗೆ ಬಳ್ಳಿಗಳು ಆರೋಗ್ಯ ವಾಗಿರುತ್ತದೆ. ಮಧ್ಯಾಹ್ನ ಬಳ್ಳಿಯ ಅರ್ಧದಷ್ಟು ಬಾಡಿ ಹೋಗುತ್ತದೆ. ಬಳಿಕ ಅದು ಸತ್ತು ಹೋಗುತ್ತದೆ. ಇದರಿಂದ ನಷ್ಟವಾಗಿದೆ. ಈ ಬಗ್ಗೆ ಹಲವಾರು ಮದ್ದುಗಳನ್ನು ಉಪಯೋಗಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಕೃಷಿಕರು ಹೇಳಿತ್ತಾರೆ. ನಾವು ಒಂದು ಸೋರೆಕಾಯಿಗೆ 30 ರೂ.ನ ಹಾಗೆ ಮಾರುಕಟ್ಟೆಯಲ್ಲಿ ಮಾರುತ್ತೇವೆ. ವ್ಯಾಪಾರಿಗಳು ಕೆ.ಜಿ. 30ರಿಂದ 40 ರೂ. ಹಾಗೆ ಮಾರುತ್ತಿದ್ದಾರೆ.

ಬಸಳೆಯನ್ನು 70 ರೂ. ಕೊಟ್ಟು ತಂದ ಕೃಷಿಕ

ಕಳೆದ ಬಾರಿ ಕೃಷಿಕರಲ್ಲಿಯೇ ಬಸಳೆಯ ಬಳ್ಳಿಗಳು ಇದ್ದವು, ಅದರೆ ಈ ಬಾರಿ ಭಾರೀ ಮಳೆಯಿಂದಾಗಿ ಎಲ್ಲವೂ ಮಾಯವಾಯಿತು. ಬಸಳೆಯನ್ನು ನೆಡಲು ಒಂದು ಬಳ್ಳಿಗೆ 70 ರೂ. ಕೊಟ್ಟು ಒಂದು ತಿಂಗಳ ಹಿಂದೆ ತಂದಿದ್ದೇನೆ. ಇದರಿಂದಾಗಿ ಈಗ ಬಸಳೆ ಸಿಗಲು ಆರಂಭವಾಗಿದೆ ಎಂದು ಇಲ್ಲಿನ ಅಡ್ಕಬಾರೆಯ ಕೃಷಿಕ ಲಾನ್ಸಿ ಡಿ’ಸೋಜಾ ಹೇಳುತ್ತಾರೆ.

-ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು

MLA Vedavyasa Kamath

ಪಾಲಿಕೆ ವ್ಯಾಪ್ತಿಯ ಅನುದಾನ ತಡೆಯಿಂದ ತೀವ್ರ ಸಮಸ್ಯೆ: ಶಾಸಕ ವೇದವ್ಯಾಸ ಕಾಮತ್

nalin kumar kateel

ಗ್ಯಾರಂಟಿ ಯೋಜನೆಗೆ ಹಣದ ಕ್ರೋಢೀಕರಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ನಳಿನ್ ಕಟೀಲ್

manish sisodia

Manish Sisodia ರಿಗೆ ಮಧ್ಯಂತರ ಪರಿಹಾರ; ಪತ್ನಿ ಭೇಟಿಗೆ ಕೋರ್ಟ್ ಅನುಮತಿ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nalin kumar kateel

ಗ್ಯಾರಂಟಿ ಯೋಜನೆಗೆ ಹಣದ ಕ್ರೋಢೀಕರಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ನಳಿನ್ ಕಟೀಲ್

2-mangaluru

Mangaluru: ಮೂಡ ಕಚೇರಿ ಸಿಬ್ಬಂದಿ ಸ್ಟೋರ್ ರೂಮ್ ನಲ್ಲೇ ಆತ್ಮಹತ್ಯೆ

ಕಡಲಿಗಿಳಿಯುವ ನಾಡದೋಣಿಗಳಿಗೆ ಇನ್ನೆರಡು ತಿಂಗಳು ಸುಗ್ಗಿ!

ಕಡಲಿಗಿಳಿಯುವ ನಾಡದೋಣಿಗಳಿಗೆ ಇನ್ನೆರಡು ತಿಂಗಳು ಸುಗ್ಗಿ!

Someshwara Beach ನೈತಿಕ ಪೊಲೀಸ್ ಗಿರಿ ಪ್ರಕರಣ: ಐವರು ಪೊಲೀಸ್ ವಶಕ್ಕೆ

Someshwara Beach ನೈತಿಕ ಪೊಲೀಸ್ ಗಿರಿ ಪ್ರಕರಣ: ಐವರು ಪೊಲೀಸ್ ವಶಕ್ಕೆ

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-WWQEWQ

Harapanahalli ಮೂವರು ಅಂತರ್ ರಾಜ್ಯ ಕಳ್ಳರ ಬಂಧನ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು

ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಹಂಗಾಮಿ ಅಧ್ಯಕ್ಷರಾಗಿ ಸುರೇಶ ಸಜ್ಜನ್

ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಹಂಗಾಮಿ ಅಧ್ಯಕ್ಷರಾಗಿ ಸುರೇಶ ಸಜ್ಜನ್