ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ, ಗಿಡಕ್ಕೆ ಕಾಡುತ್ತಿದೆ ರೋಗ

ಕೃಷಿಕನಿಗೆ ನಿಲುಕದ ಬಸಳೆ, ಸೋರೆಕಾಯಿ

Team Udayavani, Nov 14, 2022, 12:48 PM IST

9

ಬಜಪೆ: ಪ್ರತೀ ತರಕಾರಿಗೂ ಮಾರುಕಟ್ಟೆಗೆ ಬರಲು ಅದರದ್ದೇ ಆದ ಸಮಯವಿರುತ್ತದೆ. ಈ ವೇಳೆ ಗ್ರಾಹಕರ ಬೇಡಿಕೆಯ ಲೆಕ್ಕಾಚಾರ ಹಾಕಿಕೊಂಡು ಕೃಷಿಕ ತರಕಾರಿ ಬೆಳೆಸಬೇಕಾಗುತ್ತದೆ. ಯಾವ ತರಕಾರಿ ಯಾವ ಸಮಯದಲ್ಲಿ ಹೆಚ್ಚು ದರ ಸಿಗಬಹುದು ಎಂಬುದು ಒಂದೆಡೆ. ಆದರೆ ಅದಕ್ಕೆ ಹವಾಮಾನ ಹೇಗೆ ಕೈಗೂಡುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗಿರುತ್ತದೆ.

ಈ ತರಕಾರಿಗಳು ಮಾರುಕಟ್ಟೆಗೆ ಬರುವ ಮೊದಲೇ ಅದಕ್ಕೆ ಎಲ್ಲಿಲ್ಲದ ಬೇಡಿಕೆ ಆರಂಭವಾಗುತ್ತದೆ. ಅವುಗಳ ದರ ಎಷ್ಟೇ ಅಧಿಕವಿರಲಿ, ಅದನ್ನು ಖರೀದಿಸಿ ಸವಿಯನ್ನು ಅನುಭವಿಸಲು ಗ್ರಾಹಕರು ಇಷ್ಟಪಡುತ್ತಾರೆ.

ಹಾಗೇಯೇ ಮಾರುಕಟ್ಟೆಯಲ್ಲಿ ಇದೀಗ ಬಸಳೆಯ ಸಮಯ. ಇದಕ್ಕೆ ಈಗ ಭಾರೀ ಬೇಡಿಕೆಯೂ ಇದೆ. ಮಳೆ ಕಡಿಮೆಯಾಗಿ, ಸೆಕೆ ಜಾಸ್ತಿಯಾದರೆ ಬಸಳೆ ಬೇಗ ಬೆಳೆಯುತ್ತದೆ ಎಂಬುದು ಕೃಷಿಕನ ಚಿಂತನೆ. ಮುಂಗಾರು ಭತ್ತದ ಬೇಸಾಯ ಕಟಾವು ಆಯಿತು. ಹಬ್ಬ ಮುಗಿದು ತುಳಸಿ ಪೂಜೆಯ ಸಮಯದಲ್ಲಿ ಎಲ್ಲೆಡೆ ಬಸಳೆ ಕೃಷಿ ಆರಂಭವಾಗುತ್ತದೆ.

ಮಾರುಕಟ್ಟೆಯಲ್ಲಿ ಬೇಗ ಸಿಗುವ ಬಸಳೆಯನ್ನು ಹೆಚ್ಚು ದರಕೊಟ್ಟು ಕೊಂಡುಹೋಗುತ್ತಾರೆ. ಇದರಿಂದ ಈಗ ಬಸಳೆ ಪದಾರ್ಥಕ್ಕಿಂತ ಜಾಸ್ತಿ, ಮನೆ, ಮನೆಯಲ್ಲಿ ಈ ಬಳ್ಳಿಯನ್ನು ನೆಡಲು ಕೊಂಡೋಗುವವರೇ ಜಾಸ್ತಿ.

ಕೃಷಿಕರಿಗೆ 50 ರೂ. ಮಾರುಕಟ್ಟೆಯಲ್ಲಿ 80 ರೂ.

ಕೃಷಿಕರಿಗೆ ಒಂದು ಕಟ್ಟು ಬಸಳೆಗೆ 50 ರೂ. ಸಿಗುತ್ತಿದೆ. ಆದರೆ ಮಾರುಕಟ್ಟೆ 70 ರಿಂದ 80 ರೂ. ತನಕ ಮಾರುತ್ತಿದ್ದಾರೆ. ಕಳೆದ ಬಾರಿ ಒಂದು ಕಟ್ಟಿಗೆ 40 ರೂ.ಸಿಗುತ್ತಿತ್ತು. ಮಾರುಕಟ್ಟೆಯಲ್ಲಿ 60 ರೂ.ಗೆ ಮಾರುತ್ತಿದ್ದರು. ಮೊದಮೊದಲಿಗೆ ಮಾತ್ರ ಈ ಬೆಲೆ ಸಿಗುತ್ತದೆ. ಎಲ್ಲೆಡೆ ಬಸಳೆ ಸಿಗುವಾಗ ಒಮ್ಮೆಲೇ ಬೇಡಿಕೆ ಕಡಿಮೆಯಾಗಿ ದರ ಕಡಿಮೆಯಾಗುತ್ತದೆ. ಮಳೆಯ ಅನಿಶ್ಚಿತತೆಯಿಂದ ಈಗ ಬಸಳೆ ಬೆಳೆಯಲು ಜನರು ಕೊಂಚ ಹಿಂಜರಿಕೆ ತೋರಿದ್ದಾರೆ. ಬೆಂಡೆ, ಹೀರೆಕಾಯಿಯಲ್ಲಿ ಪೆಟ್ಟು ತಿಂದ ಕೆಲ ಕೃಷಿಕರು ಬಸಳೆಯಲ್ಲಿಯಾದರೂ ಕೈಗೂಡಬಹುದು ಎಂಬ ಆಶಯದಲ್ಲಿದ್ದಾರೆ.

ಸೋರೆಗೆ ಬಳ್ಳಿ ಬಾಡುವ ರೋಗ

ಸೋರೆ ಕಾಯಿ ಬಳ್ಳಿ ಬಾಡುವ ಮೂಲಕ ಅದು ಸತ್ತು ಹೋಗುವ ರೋಗ ಶುರುವಾಗಿದೆ. ಬೆಳಗ್ಗೆ ಬಳ್ಳಿಗಳು ಆರೋಗ್ಯ ವಾಗಿರುತ್ತದೆ. ಮಧ್ಯಾಹ್ನ ಬಳ್ಳಿಯ ಅರ್ಧದಷ್ಟು ಬಾಡಿ ಹೋಗುತ್ತದೆ. ಬಳಿಕ ಅದು ಸತ್ತು ಹೋಗುತ್ತದೆ. ಇದರಿಂದ ನಷ್ಟವಾಗಿದೆ. ಈ ಬಗ್ಗೆ ಹಲವಾರು ಮದ್ದುಗಳನ್ನು ಉಪಯೋಗಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಕೃಷಿಕರು ಹೇಳಿತ್ತಾರೆ. ನಾವು ಒಂದು ಸೋರೆಕಾಯಿಗೆ 30 ರೂ.ನ ಹಾಗೆ ಮಾರುಕಟ್ಟೆಯಲ್ಲಿ ಮಾರುತ್ತೇವೆ. ವ್ಯಾಪಾರಿಗಳು ಕೆ.ಜಿ. 30ರಿಂದ 40 ರೂ. ಹಾಗೆ ಮಾರುತ್ತಿದ್ದಾರೆ.

ಬಸಳೆಯನ್ನು 70 ರೂ. ಕೊಟ್ಟು ತಂದ ಕೃಷಿಕ

ಕಳೆದ ಬಾರಿ ಕೃಷಿಕರಲ್ಲಿಯೇ ಬಸಳೆಯ ಬಳ್ಳಿಗಳು ಇದ್ದವು, ಅದರೆ ಈ ಬಾರಿ ಭಾರೀ ಮಳೆಯಿಂದಾಗಿ ಎಲ್ಲವೂ ಮಾಯವಾಯಿತು. ಬಸಳೆಯನ್ನು ನೆಡಲು ಒಂದು ಬಳ್ಳಿಗೆ 70 ರೂ. ಕೊಟ್ಟು ಒಂದು ತಿಂಗಳ ಹಿಂದೆ ತಂದಿದ್ದೇನೆ. ಇದರಿಂದಾಗಿ ಈಗ ಬಸಳೆ ಸಿಗಲು ಆರಂಭವಾಗಿದೆ ಎಂದು ಇಲ್ಲಿನ ಅಡ್ಕಬಾರೆಯ ಕೃಷಿಕ ಲಾನ್ಸಿ ಡಿ’ಸೋಜಾ ಹೇಳುತ್ತಾರೆ.

-ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.