ಐಟಿ : ಸರಕಾರ ಸ್ಪಂದಿಸಿದರೆ ಆರ್ಥಿಕ ಪ್ರಗತಿ , ಉದ್ಯೋಗ ಸೃಷ್ಟಿ

ಐಟಿ ಕ್ಷೇತ್ರ; ನೆರವಿನ ನಿರೀಕ್ಷೆಯಲ್ಲಿ ದ. ಕ. ಆರ್ಥಿಕತೆ; ಸರಕಾರ ಏನು ಮಾಡಬೇಕು ?

Team Udayavani, Jul 14, 2020, 9:23 AM IST

ಐಟಿ : ಸರಕಾರ ಸ್ಪಂದಿಸಿದರೆ ಆರ್ಥಿಕ ಪ್ರಗತಿ , ಉದ್ಯೋಗ ಸೃಷ್ಟಿ

ಕೋವಿಡ್ ವೈರಸ್‌ ಎಲ್ಲ ಕ್ಷೇತ್ರಗಳ ಮೇಲೆ ತೀವ್ರ ಹೊಡೆತವನ್ನು ನೀಡಿದೆ. ಇದಕ್ಕೆ ಐಟಿ ಕ್ಷೇತ್ರವೂ ಹೊರತಾಗಿಲ್ಲ. ಐಟಿ ಕ್ಷೇತ್ರ ವರ್ಕ್‌ ಫ್ರಂ ಹೋಂ ವ್ಯವಸ್ಥೆ ಕಲ್ಪಿಸಿಕೊಂಡಿದ್ದರಿಂದ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದೆ ಎನ್ನಬಹುದು. ಈ ಕ್ಷೇತ್ರ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಒದಗಿಸುತ್ತಿರುವುದರಿಂದ ವಿದೇಶಿ ವಿನಿಮಯವೂ ದೊಡ್ಡ ಮಟ್ಟದಲ್ಲಿದೆ. ರಾಜ್ಯದ ಎರಡನೇ ಐಟಿ ಹಬ್‌ ಆಗುವ ಎಲ್ಲ ಅರ್ಹತೆ ಮತ್ತು ಅವಕಾಶ ಹೊಂದಿರುವ ಮಂಗಳೂರು ಈ ಕ್ಷೇತ್ರಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗಬೇಕಿದೆ.

ಮಂಗಳೂರು: ಕೋವಿಡ್ ವೈರಸ್‌ ಉದ್ಯೋಗಾವಕಾಶಗಳ ಮೇಲೆ ತೀವ್ರ ಹೊಡೆತ ನೀಡಿದೆ. ಆರ್ಥಿಕತೆಯ ಆಧಾರಸ್ತಂಭಗಳು ಹಿನ್ನಡೆ ಅನುಭವಿಸಿವೆ. ಈ ಪರಿಸ್ಥಿತಿಯಲ್ಲಿ ಆರ್ಥಿಕತೆಯ ಸುಧಾರಣೆ ಹಾಗೂ ಉದ್ಯೋಗಾವಕಾಶ ಕ್ಷೇತ್ರಗಳತ್ತ ಒತ್ತು ನೀಡುವುದು ಅವಶ್ಯ. ಐಟಿಬಿಟಿ ಗಣನೀಯ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತಿರುವ ಕ್ಷೇತ್ರ. ದೇಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿದೇಶಿ ವಿನಿಮಯವನ್ನು ತರುತ್ತಿದೆ. ಸದ್ಯಕ್ಕೆ ಸ್ವಲ್ಪ ಸ್ಲೋಡೌನ್‌ ಇದೆಯಾದರೂ ವ್ಯವಹಾರಗಳು ಹೆಚ್ಚು ಡಿಜಿಟಿಲೀಕರಣದತ್ತ ಪರಿವರ್ತನೆಗೊಳ್ಳುವುದು ಅನಿವಾರ್ಯ ಎನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ವೇಗವನ್ನು ಪಡೆದುಕೊಳ್ಳಲಿದೆ.

ಮಂಗಳೂರಿನಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್‌ ಸೇರಿದಂತೆ 30 ರಿಂದ 2,500ರ ವರೆಗೆ ಉದ್ಯೋಗಿಗಳು ಕೆಲಸ ಮಾಡುವ 100 ಕ್ಕೂ ಅಧಿಕ ಐಟಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಸ್ವದೇಶದಲ್ಲದೆ ಅಮೆರಿಕ, ಯರೋಪ್‌, ಮಧ್ಯಪ್ರಾಚ್ಯ ದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಪ್ರಸ್ತುತ ಚೀನದಿಂದ ಕೆಲವು ದೇಶಗಳು ಭಾರತದತ್ತ ವಲಸೆ ಬರಲು ಒಲವು ತೋರ್ಪಡಿಸುತ್ತಿವೆ. ಇದು ಸಾಧ್ಯವಾದರೆ ಭಾರತ ಔದ್ಯೋಗಿಕವಾಗಿ ಪ್ರಗತಿ ಸಾಧಿಸಲಿದೆ. ಇವುಗಳಿಗೆ ಪೂರಕವಾಗಿ ಅನೇಕ ಉಪ ಉದ್ದಿಮೆಗಳು ಪ್ರವರ್ಧಮಾನಕ್ಕೆ ಬರಲಿವೆ. ಇದರಲ್ಲಿ ಐಟಿ ಉದ್ಯಮವು ಸೇರಿದೆ. ಇದರ ಲಾಭವನ್ನು ಮಂಗಳೂರು ಕೂಡ ಪಡೆಯಲು ಪೂರಕವಾದ ವ್ಯವಸ್ಥೆ ರೂಪುಗೊಳ್ಳಬೇಕಾಗಿದೆ.

ಕೋವಿಡ್ ಹಾವಳಿ ಕಾಣಿಸಿಕೊಂಡ ಬಳಿಕ ಐಟಿ ಕಂಪೆನಿಗಳು ವರ್ಕ್‌ ಫ್ರಂ ಹೋಂ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಕಂಪೆನಿಗಳು ಈ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲು ಒಲವು ತೋರ್ಪಡಿಸುತ್ತಿವೆ. ಕೊರೊನಾ ಪರಿಣಾಮದಿಂದ ಐಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತಲ್ಲಣ ಕಾಣಿಸಿಕೊಂಡಿವೆ. ಹೆಚ್ಚು ರಾಷ್ಟ್ರಗಳು ಐಟಿ ಬಜೆಟ್‌ಗಳನ್ನು ಕಡಿಮೆ ಮಾಡುತ್ತಿವೆ. ಅಧ್ಯಯನ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ ಐಟಿ ಕಂಪೆನಿಗಳು ಶೇ.10 ರಿಂದ 15ರಷ್ಟು ಪ್ರಗತಿ ಸಾಧಿಸುತ್ತಾ ಬಂದಿವೆ. ಆದರೆ ಈ ವರ್ಷ ಕೊರೊನಾದಿಂದಾಗಿ ಇದು ಶೇ. 5 ಅಥವಾ ಶೇ. ಮೈನಸ್‌ 5 ಆಗಬಹುದು ಎಂದು ಅಂದಾಜಿಸಲಾಗಿದೆ.

ಐಟಿ ಬಜೆಟ್‌ಗಳಲ್ಲಿ ಕಡಿಮೆ ಆದರೂ ಮೂಲ ಕೆಲಸಗಳನ್ನು ಮಾಡಲೇಬೇಕಾಗುತ್ತದೆ. ವಿದೇಶಿ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ವೆಚ್ಚ ಇರುವುದರಿಂದ ಇವುಗಳು ಭಾರತದ ಪಾಲಾಗಬಹುದು ಎಂಬ ಲೆಕ್ಕಚಾರವೂ ಇದೆ.

ಬೆಂಗಳೂರು ಬಿಟ್ಟರೆ ರಾಜ್ಯದ 2ನೇ ಐಟಿ ಹಬ್‌ ಆಗುವ ಎಲ್ಲ ಅರ್ಹತೆ ಮತ್ತು ಅವಕಾಶಗಳನ್ನು ಮಂಗಳೂರು ಹೊಂದಿದೆ. ಇನ್ಫೋಸಿಸ್‌, ಕಾಗ್‌°ನಿಜೆಂಟ್‌ ಗ್ಲೋಬಲ್‌ ಸರ್ವಿಸಸ್‌ ಪ್ರೈ.ಲಿ., ದಿಯಾ ಸಿಸ್ಟಮ್ಸ್‌ ಪ್ರೈ.ಲಿ., ಎಂಸೋರ್ಸ್‌ ಲಿ., ಎಂಪಾಸಿಸ್‌, ಇನ್‌ವೆಂಜರ್‌ ಟೆಕ್ನಾಲಜೀಸ್‌ ಪ್ರೈ.ಲಿ., ಬೋಳಾಸ್‌ ಇಂಟೆಲ್ಲಿ ಸೊಲ್ಯೂಶನ್‌ ಪ್ರೈ.ಲಿ., ಅಟ್ಲಾಂಟಿಕ್‌ ಡಾಟಾ ಬ್ಯೂರೋ ಸರ್ವಿಸಸ್‌ ಪ್ರೈ.ಲಿ. ಮುಂತಾದವುಗಳು ಮಂಗಳೂರಿನ ಪ್ರಮುಖ ಐಟಿ ರಫ್ತು ಕಂಪೆನಿಗಳಾಗಿವೆ. ಮುಡಿಪು ಪ್ರದೇಶದಲ್ಲಿ ಇನ್ಫೋಸಿಸ್‌ ವಿಶಾಲ ಮತ್ತು ಸುಸಜ್ಜಿತ ಘಟಕವನ್ನು ಹೊಂದಿದೆ.

ಬೆಂಗಳೂರಿಗೆ ಹೋಲಿಸಿದರೆ ಮಂಗಳೂರಿ ನಲ್ಲಿ ಮಾನವ ಸಂಪನ್ಮೂಲ ವೆಚ್ಚ ( ವೇತನ ಹಾಗೂ ಇತರ ಸವಲತ್ತುಗಳು) ಶೇ.30ರಷ್ಟು ಕಡಿಮೆ. ಉತ್ತಮ ಟೆಲಿಕಾಂ ಸೌಲಭ್ಯಗಳು, ಡಾಟಾ ಕಮ್ಯೂನಿಕೇಶನ್‌ ಸೌಲಭ್ಯಗಳಿವೆ. ವಿಮಾನ ನಿಲ್ದಾಣ, ರೈಲು ,ರಸ್ತೆ ಸೇರಿದಂತೆ ಉತ್ತಮ ಸಂಚಾರ ಸೌಕರ್ಯಗಳಿವೆ. ಐಟಿ ಉದ್ಯಮಗಳಿಗೆ ಉತ್ತೇಜನ ನೀಡಲು ಸಾಫ್ಟ್‌ವೇರ್‌ ಪಾರ್ಕ್‌ ಟೆಕ್ನಾಲಜಿ ಪಾರ್ಕ್ಸ್ ಆಫ್‌ ಇಂಡಿಯಾ (ಎಸ್‌ಟಿಪಿಐ) ಕೇಂದ್ರ ಕಾರ್ಯಾಚರಿಸುತ್ತಿದೆ.

ವಸ್ತುಸ್ಥಿತಿ
ಐಟಿ ಕ್ಷೇತ್ರದ ಪರಿಣಿತರು ಮಂಗಳೂರಿನತ್ತ ಆಕರ್ಷಿಸುವ ನಿಟ್ಟಿನಲ್ಲಿ ಐಟಿ ಇಕೋ ವ್ಯವಸ್ಥೆ ಹಾಗೂ ಐಟಿ ಪಾರ್ಕ್‌ ಸ್ಥಾಪನೆಗೊಳ್ಳಬೇಕಿದೆ. ಮಂಗಳೂರಿನ ಮೇರಿಹಿಲ್‌ ಕಿಯೊನಿಕ್ಸ್‌ಗೆ ಸೇರಿದ ಜಾಗವಿದೆ. ಇಲ್ಲಿ ಐಟಿ ಪಾರ್ಕ್‌ನ್ನು ಸ್ಥಾಪಿಸುವ ಪ್ರಸ್ತಾವ ರೂಪುಗೊಳ್ಳುತ್ತಿದೆ. ನಮ್ಮ ಜಿಲ್ಲೆಯವರಾದ ಹರಿಕೃಷ್ಣ ಬಂಟ್ವಾಳ ಪ್ರಸ್ತುತ ಕಿಯೋನಿಕ್ಸ್‌ ಅಧ್ಯಕ್ಷರಾಗಿದ್ದು, ಈ ಅವಕಾಶವನ್ನು ಬಳಸಿಕೊಳ್ಳಬಹುದು. ಐಟಿ ಪಾರ್ಕ್‌ ಸ್ಥಾಪನೆಯಾದರೆ ಇಲ್ಲಿ ಆನೇಕ ಐಟಿ ಕಂಪೆನಿಗಳಿಗೆ ತಮ್ಮ ಘಟಕಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ.

ಆಗಬೇಕಾಗಿರುವುದು
ಮಂಗಳೂರಿನಲ್ಲಿ ಐಟಿ ಇಕೋ ವ್ಯವಸ್ಥೆ ಬೆಳೆದರೆ ಪ್ರಮುಖ ಕಂಪೆನಿಗಳು ಐಟಿ ಉಪಕೇಂದ್ರಗಳಲ್ಲಿ ಇದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಮಂಗಳೂರಿನಲ್ಲಿ ತಮ್ಮ ಉಪಕಚೇರಿಗಳನ್ನು ಸ್ಥಾಪಿಸಿ ಐಟಿ ತಂತ್ರಜ್ಞರನ್ನು ಇಲ್ಲಿ ನಿಯುಕ್ತಿಗೊಳಿಸಲು ಅನುಕೂಲವಾಗುತ್ತದೆ.
ಇದು ಸಾಧ್ಯವಾಗಬೇಕಾದರೆ ಇಲ್ಲಿ ಅತ್ಯುತ್ತಮ ನೆಟ್‌ವರ್ಕ್‌ ಸೌಲಭ್ಯ, ಹೆಚ್ಚು ಸಾಮರ್ಥ್ಯದ ಬ್ಯಾಂಡ್‌ವಿಡ್‌¤ ಸೌಲಭ್ಯ, ಅಡೆತಡೆ ಇಲ್ಲದ ವಿದ್ಯುತ್‌ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಪ್ರಸ್ತುತ ಐಟಿ.ಕಾಂ. ಮುಂತಾದ ಐಟಿ ಸಮಾವೇಶಗಳನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ. ಇವುಗಳನ್ನು ಮಂಗಳೂರಿ ನಲ್ಲೂ ನಡೆಸುವ ಬಗ್ಗೆ ಗಮನ ಹರಿಸಬೇಕು.

ಐಟಿ ಇಕೋ ಸಿಸ್ಟಂ ಅಗತ್ಯ
ಮಂಗಳೂರಿನಲ್ಲಿ ಐಟಿ ಉದ್ಯಮಗಳಿಗೆ ಪೂರಕ ವಾತಾವರಣವಿದೆ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದಕ್ಕೆ ಜಿಲ್ಲೆಯಲ್ಲಿ ಐಟಿ ಇಕೋ ಸಿಸ್ಟಂ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಐಟಿ ಪಾರ್ಕ್‌ ಸ್ಥಾಪನೆ ಮಾಡಬೇಕು ಎಂಬುದಾಗಿ ಹಲವು ವರ್ಷಗಳಿಂದ ಬೇಡಿಕೆ. ಇದೆ. ಇದು ಸ್ಥಾಪನೆಯಾದರೆ ಐಟಿ ಉದ್ಯಮಗಳಿಗೆ ಅವಶ್ಯವಿರುವ ಮೂಲಸೌಕರ್ಯಗಳು ಬರಲು ಸಾಧ್ಯವಾಗುತ್ತದೆ. ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು.
 – ಕಿರಣ್‌ಚಂದ್‌, ಕೆಸಿಸಿಐ ಐಟಿ ಉಪಸಮಿತಿ ಅಧ್ಯಕ್ಷರು

ಅಂಕಿ ಅಂಶ
ಮಂಗಳೂರಿನಲ್ಲಿ ಐಟಿ ಕಂಪೆನಿ 110
ಉದ್ಯೋಗಿಗಳು (ಅಂದಾಜು) 12,000′
ಐಟಿ ಎಸ್‌ಇಝಡ್‌ 1

ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಟಿ ಉದ್ಯಮಗಳಿಗೆ ಉತ್ತಮ ಅವಕಾಶವಿದೆ. ಇದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಐಟಿ ಸ್ನೇಹಿ ವ್ಯವಸ್ಥೆ ರೂಪುಗೊಳ್ಳಬೇಕು. ಸರಕಾರ ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ಐಟಿ ಪಾರ್ಕ್‌ ಪ್ರಸ್ತಾವ ಮಾಡುತ್ತ ಬಂದಿದೆ. ಪ್ರಸ್ತುತ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಯ ನಿಟ್ಟಿನಲ್ಲಿ ಈ ಪ್ರಸ್ತಾವವನ್ನು ಕಾರ್ಯಗತಗೊಳಿಸಲು ಕ್ರಮ ವಹಿಸಬೇಕು.

ಮಂಗಳೂರಿನಲ್ಲಿ ಐಟಿ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವುಗಳಿಗೆ ನಿರ್ದಿಷ್ಟ ಅವಧಿಯವರೆಗೆ ತೆರಿಗೆ ರಜೆ ಸೌಲಭ್ಯ ನೀಡಬೇಕು. ಇದರಿಂದ ಹೆಚ್ಚು ಐಟಿ ಉದ್ಯಮಗಳು ಮಂಗಳೂರಿಗೆ ಬರಲು ಸಾಧ್ಯವಾಗುತ್ತದೆ.

ಜಿಲ್ಲೆಯಲ್ಲಿ ಇಂಟರ್‌ನೆಟ್‌ ಬ್ಯಾಂಡ್‌ವಿಡ್‌¤ ಸಾಮರ್ಥ್ಯವನ್ನು ಹೆಚ್ಚಿಸಬೇಕು ಹಾಗೂ ಇನ್ನಷ್ಟು ಸೌಲಭ್ಯವನ್ನು ಅಳವಡಿಸಬೇಕು. ಇದರಿಂದಾಗಿ ಐಟಿ ಕಂಪೆನಿಗಳಿಗೆ ವರ್ಕ್‌ ಫ್ರಂ ಹೋಂ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ವಿದೇಶಗಳಿಗೆ ರಫ್ತು ಮಾಡುವ ಸಣ್ಣ ಐಟಿ ಕಂಪೆನಿಗಳಿಗೆ ಮಾರ್ಗದರ್ಶನ, ಉತ್ತೇಜನ , ವಿದೇಶಿ ಹಣ ವಿನಿಮಯ ಮುಂತಾದುವುಗಳಿಗೆ ನೆರವು ನೀಡಲು ಉಪ ಕಚೇರಿ ಮಂಗಳೂರಿನಲ್ಲಿ ಸ್ಥಾಪನೆಯಾದರೆ ಹೆಚ್ಚು ಸಹಕಾರಿಯಾಗುತ್ತದೆ.

ಮುಂದಿನ ದಿನಗಳಲ್ಲಿ ಮಂಗಳೂರು ನಗರ ಐಟಿ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ನಾಸ್ಕಾಂ ಮಂಗಳೂರಿಗೂ ಆದ್ಯತೆ ನೀಡಬೇಕು. ಐಟಿ.ಕಾಂನಂತಹ ಸಮಾವೇಶಗಳನ್ನು ಮಂಗಳೂರಿನಲ್ಲೂ ಆಯೋಜಿಸಬೇಕು.

 ಉದಯವಾಣಿ ಅಧ್ಯಯನ ತಂಡ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.