ಮಲೇರಿಯಾ, ಡೆಂಗ್ಯೂ ನಿರ್ಮೂಲನಾ ಮಾಹಿತಿ ನೀಡಿ: ಡಾ| ಭರತ್ ಶೆಟ್ಟಿ
Team Udayavani, May 30, 2020, 5:20 AM IST
ಪಣಂಬೂರು: ಮನೆ ಮನೆಗಳಿಗೆ ಮಲೇರಿಯಾ, ಡೆಂಗ್ಯೂ ನಿರ್ಮೂಲನಾ ಮಾಹಿತಿ ನೀಡುವ ಕೆಲಸವನ್ನು ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು ಮಾಡಬೇಕು ಎಂದು ಶಾಸಕ ಡಾ| ಭರತ್ ಶೆಟ್ಟಿ ವೈ ಹೇಳಿದರು.
ಅವರು ಗುರುವಾರ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಪೊರೇಟರ್ಗಳಿಗೆ ಕ್ಷೇತ್ರದ ಜನ ರಿಗೆ ವಿತರಿಸಲು ಸೊಳ್ಳೆ ಪರದೆಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿ ಮಾತ ನಾಡಿದರು. ಸೊಳ್ಳೆ ಪರದೆ ಔಷಧ ಸಿಂಪಡಿ ಸಲಾಗಿದ್ದು ಮಲಗುವಾಗ ಮಂಚಕ್ಕೆ ಹಾಕಿ ಕೊಳ್ಳುವುದರಿಂದ ಸೊಳ್ಳಗಳು ಕಚ್ಚದಂತೆ ತಡೆಯಬಹುದು. ಇದರ ಪ್ರಯೋಜನದ ಬಗ್ಗೆ ಹಾಗೂ ಸಾಂಕ್ರಾಮಿಕ ರೋಗ ಹರ ಡದಂತೆ ಮನಪಾ ಸದಸ್ಯರು ಜನರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಹೇಳಿದರು.
ಆಯುಕ್ತ ಅಜಿತ್ ಕುಮಾರ್ ಶಾನಾಡಿ, ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಪೂರ್ಣಿ ಮಾ, ಕಿರಣ್ ಕುಮಾರ್ ಕೋಡಿಕಲ್, ಶರತ್ ಕುಮಾರ್, ಪಾಲಿಕೆ ಸದಸ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.