ಸಮುದ್ರ, ನದಿ ದಂಡೆ ಸಂರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌!

ಕರಾವಳಿಗೆ ದೊರೆಯಲಿದೆ 300 ಕೋ.ರೂ. ಅನುದಾನ

Team Udayavani, Dec 17, 2020, 5:00 AM IST

ಸಮುದ್ರ, ನದಿ ದಂಡೆ ಸಂರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌!

ಮಹಾನಗರ: ಕರಾವಳಿಯ ಸಮುದ್ರ ಕೊರೆತ ತಗ್ಗಿಸಲು ಹಾಗೂ ನದಿ ದಂಡೆಯ ಸಂರಕ್ಷಣೆಗೆ ಇದೇ ಮೊದಲ ಬಾರಿಗೆ 300 ಕೋ.ರೂ.ಗಳ ಅನುದಾನ ದೊರೆಯಲಿದ್ದು, ಈ ಸಂಬಂಧ ದ.ಕ. ಜಿಲ್ಲೆಯಿಂದ ಕೇಂದ್ರ ಸರಕಾರಕ್ಕೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ.

ವಿಪತ್ತು ತಡೆಗಟ್ಟುವುದು, ಹಾನಿ ತಗ್ಗಿಸುವುದು, ಸ್ಪಂದನ ಪುನಶ್ಚೇತನ ಹಾಗೂ ಪುನರ್‌ ನಿರ್ಮಾಣ ಕ್ಕಾಗಿ ಕೇಂದ್ರದ 15ನೇ ಹಣಕಾಸು ಆಯೋಗವು ಅನುದಾನ ನೀಡುತ್ತದೆ. ದಕ್ಷಿಣ ಕನ್ನಡ, ಕಾರವಾರ, ಉಡುಪಿ ಸಹಿತ ರಾಜ್ಯಕ್ಕೆ ಒಟ್ಟು 300 ಕೋ.ರೂ. ಅನುದಾನ ದೊರೆಯಲಿದ್ದು, ಈ ಪೈಕಿ 100 ಕೋ.ರೂ. ಗಳನ್ನು ದ.ಕ. ಜಿಲ್ಲೆಗೆ ನಿಗದಿಪಡಿಸಲಾಗಿದೆ. ಮಂಗಳೂರು, ಮಂಗಳೂರು ದಕ್ಷಿಣ, ಉತ್ತರ ಹಾಗೂ ಮೂಡುಬಿದಿರೆ ವಿಧಾನಸಭೆ ಕ್ಷೇತ್ರದಲ್ಲಿ ಬರುವ ಸಮುದ್ರ ತೀರ ಹಾಗೂ ನದಿ ತೀರದ ಅಪಾಯಕಾರಿ ಪ್ರದೇಶವನ್ನು ಗುರುತಿಸಲಾಗಿದ್ದು, ಅನುದಾನದ ನಿರೀಕ್ಷೆಯಲ್ಲಿದೆ. ಸಮುದ್ರ ಕೊರೆತ ಹಾಗೂ ನದಿ ಕೊರೆತ ತಗ್ಗಿಸಲು ಎನ್‌ಡಿಆರ್‌ಎಂಎಫ್‌ ಅಡಿಯಲ್ಲಿ ಅನುದಾನ ವಿನಿಯೋಗಿಸಲು ಇತ್ತೀಚೆಗೆ ಕೇಂದ್ರ ಸರಕಾರ ಅವಕಾಶ ನೀಡಿದೆ. ಇದರಂತೆ ಕರಾವಳಿ ಹಾಗೂ ನದಿ ತೀರದ ಅತೀ ಹೆಚ್ಚು ಜನಸಂಖ್ಯೆ ಇರುವ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸಮುದ್ರ, ನದಿ ಕೊರೆತ ತಡೆಗಟ್ಟಲು ಪ್ರಸ್ತಾವ ಕಳುಹಿಸುವಂತೆ ರಾಜ್ಯ ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯಿಂದ ಕರಾವಳಿಯ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಗೆ ಕಳೆದ ಎಪ್ರಿಲ್‌ನಲ್ಲಿ ಸೂಚಿಸಲಾಗಿತ್ತು. ಇದರಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಾವಶ್ಯಕವಾಗಿರುವ ದೀರ್ಘ‌ಕಾಲಿಕ ಸಮುದ್ರ ಕೊರೆತ ತಡೆಗೋಡೆ ಹಾಗೂ ಬಂದರು ವ್ಯಾಪ್ತಿಯಲ್ಲಿ ಬರುವ ನದಿ ತೀರಗಳ ಕೊರೆತ ತಡೆಗಟ್ಟಲು ಸಂರಕ್ಷಣ ಕಾಮಗಾರಿಗೆ ವಿಧಾನ ಸಭಾವಾರು ಕ್ರಿಯಾ ಯೋಜನೆ ಪ್ರಸ್ತಾವ ತಯಾರಿಸಲಾಗಿದೆ.

ಲಾಭವೇನು?
ಕೆಲವು ಬಾರಿ ಭಾರೀ ಮಳೆಯಿಂದಾಗಿ ನೇತ್ರಾ ವತಿ ಹಾಗೂ ಫಲ್ಗುಣಿ ನದಿಯು ಉಕ್ಕಿ ಹರಿದ ಉದಾ ಹರಣೆಯಿದೆ. ಪರಿಣಾಮವಾಗಿ ನದಿ ದಡದ ಕೆಲವು ಭಾಗಗಳಲ್ಲಿ ನೆರೆ ನೀರು ನುಗ್ಗಿ ಹಲವು ಜನರ ಕೃಷಿ, ವಸತಿ ಪ್ರದೇಶಕ್ಕೆ ಹಾನಿಯಾಗಿತ್ತು. ನದಿ ದಂಡೆ ಇರುತ್ತಿದ್ದರೆ ನೆರೆ ನೀರು ನುಗ್ಗುವ ಪ್ರಮೇಯ ಇರುತ್ತಿರಲಿಲ್ಲ. ಈ ಮೂಲಕ ನದಿ ಪಾತ್ರದ ಜನರಿಗೆ ನೆರೆ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸುವುದು ಈ ಯೋಜನೆಯ ಮುಖ್ಯ ಗುರಿ. ಜತೆಗೆ ನದಿ ದಂಡೆ ನಿರ್ಮಾಣವಾದರೆ ಆ ಮೂಲಕ ಪ್ರವಾಸೋದ್ಯಮಕ್ಕೂ ಪೂರಕವಾದ ವಾತಾವರಣವನ್ನು ಅಲ್ಲಿ ಕೈಗೊಳ್ಳಲು ಅವಕಾಶವಿದೆ.

ನರ್ಮದಾ ಮಾದರಿ ನದಿ ದಂಡೆ?
ನರ್ಮದಾ, ಬ್ರಹ್ಮಪುತ್ರಾ ನದಿ ದಂಡೆಯಲ್ಲಿ ಸಂರಕ್ಷಣ ಕಾಮಗಾರಿ ಕೈಗೊಂಡ ಮಾದರಿಯಲ್ಲಿ ದ.ಕ. ಜಿಲ್ಲೆಯ ನೇತ್ರಾವತಿ ಹಾಗೂ ಫಲ್ಗುಣಿ ನದಿಯ ಆಯ್ದ ಭಾಗದಲ್ಲಿ ನದಿದಂಡೆ ಸಂರಕ್ಷಣ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಹಾನಿ ತಪ್ಪಿಸುವ ಉದ್ದೇಶ
ಮಳೆಗಾಲದಲ್ಲಿ ಭಾರೀ ಪ್ರವಾಹದಿಂದ ನದಿದಂಡೆ ಕೊರೆತ ಉಂಟಾಗಿ ಕೃಷಿ ಭೂಮಿ ಹಾಗೂ ವಸತಿ ಪ್ರದೇಶಗಳಿಗೆ ಆಗುವ ಹಾನಿಯನ್ನು ತಪ್ಪಿಸುವ ಸಲುವಾಗಿ ಎರಡೂ ನದಿಗಳ ಭಾಗಗಳಲ್ಲಿ ನದಿ ದಂಡೆ ನಿರ್ಮಾಣದ ಉದ್ದೇಶವಿದೆ.

ಅನುಮೋದನೆಯ ನಿರೀಕ್ಷೆಯಲ್ಲಿರುವ ಕ್ರಿಯಾಯೋಜನೆ
ಮಂಗಳೂರು ಕ್ಷೇತ್ರ
1. ಸೋಮೇಶ್ವರ-ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶ: 7.80 ಕೋ.ರೂ.
2. ಸೋಮೇಶ್ವರ-ಉಚ್ಚಿಲ
ಕಡಲ್ಕೊರೆತ ಪ್ರದೇಶ: 11 ಕೋ.ರೂ.
3. ಉಳ್ಳಾಲ ಸಿ ಗ್ರೌಂಡ್‌ ಕಡಲ್ಕೊರೆತ
ಪ್ರದೇಶ : 6.20 ಕೋ.ರೂ.

ಮೂಡುಬಿದಿರೆ
1. ಸಸಿಹಿತ್ಲು ಕಡಲ್ಕೊರೆತ ಪ್ರದೇಶ: 5 ಕೋ.ರೂ.
2. ಸಸಿಹಿತ್ಲುವಿನಲ್ಲಿ 1.20 ಕಿ.ಮೀ
ಕಡಲ್ಕೊರೆತ ಪ್ರದೇಶದಲ್ಲಿ
ಸಂರಕ್ಷಣ ಕಾಮಗಾರಿ: 10 ಕೋ.ರೂ.
3. ಸಸಿಹಿತ್ಲು ಭಾಗದ 1 ಕಿಮೀ ಪ್ರದೇಶದಲ್ಲಿ ಸಂರಕ್ಷಣ ಕಾಮಗಾರಿ: 10 ಕೋ.ರೂ.

ಮಂಗಳೂರು ಉತ್ತರ
1. ಮೀನಕಳಿಯ ( 2 ಪ್ರತ್ಯೇಕ ಸ್ಥಳ)ಕಡಲ್ಕೊರೆತ ಪ್ರದೇಶ: 10.25 ಕೋ.ರೂ.
2. ಚಿತ್ರಾಪುರ (2 ಪ್ರತ್ಯೇಕ ಸ್ಥಳ) ಕಡಲ್ಕೊರೆತ ಪ್ರದೇಶ: 7.50 ಕೋ.ರೂ.
3. ಸುರತ್ಕಲ್‌ ಲೈಟ್‌ಹೌಸ್‌ ಪ್ರದೇಶ: 4.25 ಕೋ.ರೂ.
4. ಮುಕ್ಕದಲ್ಲಿ ಕಡಲ್ಕೊರೆತ  ಪ್ರದೇಶ: 2 ಕೋ.ರೂ.
5. ತಣ್ಣೀರುಬಾವಿಯ ಫಾತಿಮಾ ಚರ್ಚ್‌ ಭಾಗದಿಂದ ನಾಯರ್‌ಕುದ್ರು ಭಾಗ ನದಿ ದಂಡೆ: 1 ಕೋ.ರೂ

ಮಂಗಳೂರು ದಕ್ಷಿಣ
1. ತೋಟ ಬೆಂಗ್ರೆ ಕಡಲ್ಕೊರೆತ  ಪ್ರದೇಶ: 1.80 ಕೋ.ರೂ.
2. ಫಲ್ಗುಣಿ ನದಿಯಲ್ಲಿ ತಣ್ಣೀರುಬಾವಿ ಫಾತಿಮಾ ಚರ್ಚ್‌ ವ್ಯಾಪ್ತಿ ದಂಡೆ ನಿರ್ಮಾಣ: 4.20 ಕೋ.ರೂ.
3. ಬೊಕ್ಕಪಟ್ಣ ಬೆಂಗ್ರೆಯಲ್ಲಿ ನದಿ ದಂಡೆ ನಿರ್ಮಾಣ: 4.40 ಕೋ.ರೂ.
4. ಸುಲ್ತಾನ್‌ಬತ್ತೇರಿ ವ್ಯಾಪ್ತಿಯಲ್ಲಿ ದಂಡೆ ನಿರ್ಮಾಣ: 4.60 ಕೋ.ರೂ.
5. ಕಸ್ಬಾ ಬೆಂಗ್ರೆಯಲ್ಲಿ ಕಡಲ್ಕೊರೆತ ಪ್ರದೇಶ: 10 ಕೋ.ರೂ.

ದಿನೇಶ್‌ ಇರಾ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.