ವಿದ್ಯುತ್‌ ಬಳಕೆದಾರರಿಗೆ ಮೆಸ್ಕಾಂ ಪ್ರೋತ್ಸಾಹ ಧನ


Team Udayavani, May 29, 2020, 11:13 AM IST

ವಿದ್ಯುತ್‌ ಬಳಕೆದಾರರಿಗೆ ಮೆಸ್ಕಾಂ ಪ್ರೋತ್ಸಾಹ ಧನ

ಸಾಂದರ್ಭಿಕ ಚಿತ್ರ

ಮಂಗಳೂರು: ಲಾಕ್‌ಡೌನ್‌ನಿಂದ ಸಂತ್ರಸ್ತರಾದ ಜನರಿಗೆ ನೆರವಾಗಲು ರಾಜ್ಯ ಸರಕಾರ ಘೋಷಿಸಿದ ಪ್ಯಾಕೇಜ್‌ನಲ್ಲಿ ಎಲ್ಲ ವರ್ಗಗಳ ಜನರಿಗೆ ಅನ್ವಯವಾಗುವ ಪರಿಹಾರ ಒಂದಿದ್ದರೆ, ಅದು ವಿದ್ಯುತ್‌ ಬಿಲ್‌ನಲ್ಲಿ ರಿಯಾಯಿತಿ ಅಥವಾ  ಪ್ರೋತ್ಸಾಹ ಧನ. ಇದು ಸಂಬಂಧ ಪಟ್ಟ ಎಸ್ಕಾಂಗಳ ಮೂಲಕ ಜಾರಿಗೆ ಬಂದು ಗ್ರಾಹಕರಿಗೆ ಪ್ರಯೋಜನ ಲಭಿಸಲಿದೆ. ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) ಈ ಕುರಿತು ಈಗಾಗಲೇ ಪ್ರಕಟನೆ ಹೊರಡಿಸಿದೆ.
ಬಿಲ್‌ ನೀಡಿದ 1ರಿಂದ 5 ದಿನಗಳೊಳಗೆ ಪಾವತಿಸಿದವರಿಗೆ ಬಿಲ್‌ ಮೊತ್ತದಲ್ಲಿ ಶೇ. 1 ರಿಯಾಯಿತಿ ಹಾಗೂ 6ರಿಂದ 15 ದಿನಗಳೊಳಗೆ ಪಾವತಿ ಮಾಡಿದವರಿಗೆ ಶೇ. 0.5ರಷ್ಟು ರಿಯಾಯಿತಿ ಕೊಡಲಾಗುತ್ತದೆ. ಎಲ್‌ಟಿ ಗ್ರಾಹಕರು ಗರಿಷ್ಠ 10,000 ರೂ. ವರೆಗೆ ಹಾಗೂ ಎಚ್‌ಟಿ ಗ್ರಾಹಕರು ಗರಿಷ್ಠ 1 ಲಕ್ಷ ರೂ. ವರೆಗೆ ಪ್ರೋತ್ಸಾಹ ಧನ/ ರಿಯಾಯಿತಿಗೆ ಅರ್ಹರಾಗುತ್ತಾರೆ.

ಈ ರಿಯಾಯಿತಿ/ ಪ್ರೋತ್ಸಾಹ ಧನ ಮೊತ್ತವನ್ನು ಮುಂದಿನ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಇದು ಕೋವಿಡ್ ಸಂಕಷ್ಟದ ಪ್ರಯುಕ್ತ 2020 ಎಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳ ವಿದ್ಯುತ್‌ ಬಿಲ್‌ಗ‌ಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ. ಮುಂಗಡ ಪಾವತಿಗೂ ರಿಯಾಯಿತಿ ಇದಲ್ಲದೆ 12 ತಿಂಗಳುಗಳ ವಿದ್ಯುತ್‌ ಬಿಲ್‌ ಮೊತ್ತವನ್ನು ಚೆಕ್‌/ ಡಿಮಾಂಡ್‌ ಡ್ರಾಫ್ಟ್‌/ ಯಾವುದೇ ಡಿಜಿಟಲ್‌ ವಿಧಾನದಲ್ಲಿ ಮುಂಗಡವಾಗಿ ಪಾವತಿ ಮಾಡಿದರೆ ಬಿಲ್‌ ಮೊತ್ತದ ಶೇ. 0.50ರಷ್ಟು ಪ್ರೋತ್ಸಾಹ ಧನವನ್ನು ಪ್ರತಿ ತಿಂಗಳು ಗ್ರಾಹಕರ ಖಾತೆಗೆ ಹೊಂದಾಣಿಕೆ ಮೂಲಕ ಜಮೆ ಮಾಡಲಾಗುತ್ತದೆ.  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮೇ 7ರಂದು ಪ್ರಕಟಿಸಿದ ಕೋವಿಡ್ ಪರಿಹಾರ ಪ್ಯಾಕೇಜ್‌ನಲ್ಲಿ ಈ ವಿಷಯವನ್ನು ಉಲ್ಲೇಖೀಸಿದ್ದು, ಅದರಂತೆ ಮೆಸ್ಕಾಂ ಪ್ರಕಟನೆ ಹೊರಡಿಸಿದೆ.

Ad

ಟಾಪ್ ನ್ಯೂಸ್

13 IAS officers including D.Kannada CEO transferred

IAS Transfer: ದ.ಕನ್ನಡ ಜಿಲ್ಲಾ ಸಿಇಒ ಸೇರಿ 13 ಐಎಎಸ್‌ ಅಧಿಕಾರಿಗಳ ವರ್ಗಾವಣೆ

9-train

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಪ್ರಯತ್ನ; ಸೋಮಣ್ಣ ನೇತೃತ್ವದ ಸಭೆಯಲ್ಲಿ ನಿರ್ಧಾರ

ಜಿಲ್ಲಾಧಿಕಾರಿ ಟಿ.ಭೂಬಾಲನ್ ಮತ್ತು ನೂತನ ಜಿಲ್ಲಾಧಿಕಾರಿ ಡಾ.ಆನಂದ‌ ಕೆ.

Vijayapura: ಜಿಲ್ಲಾಧಿಕಾರಿ ಟಿ.ಭೂಬಾಲನ್ ವರ್ಗಾವಣೆ

8-web

Heart Health: ಹೃದಯ ಆರೋಗ್ಯಕ್ಕೆ ಸೇವಿಸಬಹುದಾದ ಹಣ್ಣು-ತರಕಾರಿಗಳಿವು

Dr-Parameshwar

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 18 ಸಾವಿರ ಹುದ್ದೆಗಳು ಖಾಲಿ ಇದೆ: ಡಾ.ಜಿ.ಪರಮೇಶ್ವರ್ 

Yadagiri: Bhoyal Harshal appointed as new DC

Yadagiri: ನೂತನ ಡಿಸಿಯಾಗಿ ಭೋಯಲ್ ಹರ್ಷಲ್ ನಿಯೋಜನೆ

BJP: Arvind Limbavali expresses displeasure against Yediyurappa

BJP: ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅರವಿಂದ ಲಿಂಬಾವಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Surathkal ಪರಿಸರದಲ್ಲಿ ಬೀದಿ ನಾಯಿಗಳ ಉಪಟಳ

6

Mudbidri ಜೈನ್‌ ಪೇಟೆಯ ತೆರೆದ ಚರಂಡಿಗಳಿಗೆ ಸ್ಲ್ಯಾಬ್‌

5

Mangaluru: ಬಿಕರ್ನಕಟ್ಟೆ- ಸಾಣೂರು ಹೆದ್ದಾರಿಗೆ ಗುಡ್ಡಗಳೇ ಅಡ್ಡ!

police

Ullal: ಬಾಲಕಿ ಅಪಹರಣ; ದಂಪತಿ ಸಹಿತ ಮೂವರ ವಿರುದ್ಧ ಪೋಕ್ಸೋ

fraudd

Mangaluru: ಷೇರು ಮಾರುಕಟ್ಟೆ ಟಾಸ್ಕ್; 4.59 ಲಕ್ಷ ರೂ. ವಂಚನೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

23

Belthangady: ಮೇಯಲು ಬಿಟ್ಟಿದ್ದ ದನಕ್ಕೆ ವಿಷವಿಕ್ಕಿದ ದುಷ್ಕರ್ಮಿಗಳು

13 IAS officers including D.Kannada CEO transferred

IAS Transfer: ದ.ಕನ್ನಡ ಜಿಲ್ಲಾ ಸಿಇಒ ಸೇರಿ 13 ಐಎಎಸ್‌ ಅಧಿಕಾರಿಗಳ ವರ್ಗಾವಣೆ

5

Kasaragod:ಜನರಲ್‌ ಆಸ್ಪತ್ರೆಗೆ ಮೆರವಣಿಗೆ: 85 ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

9-train

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಪ್ರಯತ್ನ; ಸೋಮಣ್ಣ ನೇತೃತ್ವದ ಸಭೆಯಲ್ಲಿ ನಿರ್ಧಾರ

1

Kasaragod: ಸಹೋದರಿ ಪತಿಯ ವಿರುದ್ಧ ಅತ್ಯಾ*ಚಾರ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.