
ಕೈ ಕೊಟ್ಟ ಮುಂಗಾರು ಮಳೆ: ಚುರುಕುಗೊಳ್ಳದ ಕೃಷಿ ಕಾರ್ಯ
Team Udayavani, Jun 3, 2023, 3:32 PM IST

ಕಿನ್ನಿಗೋಳಿ: ಕಿನ್ನಿಗೋಳಿ ಭಾಗ ದಲ್ಲಿ ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ನಾಟಿ ಕಾರ್ಯ ಆರಂಭವಾಗಿಲ್ಲ, ಮುಂಗಾರು ಮಳೆ ಇನ್ನೂ ಬರದ ಹಿನ್ನೆಲೆ ರೈತರಿಗೆ ಆತಂಕ ಉಂಟಾಗಿದೆ. ಮುಂಗಾರು ಆರಂಭವಾಗುತ್ತಿದ್ದಂತೆ ಮಳೆಗಾಲದ ಭತ್ತದ ಬೇಸಾಯಕ್ಕೆ ಮುನ್ನುಡಿಯಂತೆ ನೇಜಿ ಹಾಕಿ ನಾಟಿ ಆರಂಭವಾಗಬೇಕಿತ್ತು .
ಆದರೇ ಈ ವರ್ಷ ಮುಂಗಾರು ಮಳೆ ಇನ್ನೂ ಬಾರ ದೇಹಿನ್ನಡೆ ಆಗಿದೆ.ಕಿನ್ನಿಗೋಳಿ ಸಮೀಪದ ಪಂಜಬೈಲ ಗುತ್ತು ಸುಮಾರು 10 ಎಕ್ರೆ ಪ್ರದೇಶದಲ್ಲಿ ಮೊದಲ ಹಂತದಲ್ಲಿ ನಾಟಿ ಕಾರ್ಯಕ್ಕೆ ತಯಾರು ಮಾಡಲಾಗಿದೆ. ಭದ್ರ ತಳಿಯ ನಾಟಿ ಮಾಡಲಾಗಿದ್ದು 110 ದಿನದಲ್ಲಿ ಕಟಾವಿಗೆ ಬರುತ್ತಿದೆ. ಆದರೇ ಮಳೆ ಇಲ್ಲದೆ ನಾಟಿ ಮಾಡ ಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಗದ್ದೆಗಳು ನೀರು ಇಲ್ಲದೆ ಬತ್ತಿವೆ. ನಾಟಿಗೆ ತಯಾರು ಮಾಡಲಾಗಿದ್ದ ನೇಜಿ ಕೆಂಪು ಬಣ್ಣಕ್ಕೆ ತಿರುಗುತ್ತಿದೆ. ಇನ್ನು ಒಂದು ವಾರ ಮಳೆ ಬರದಿದ್ದರೆ ಪಂಜದಲ್ಲಿ ನಂದಿನಿ ನದಿಗೆ ಅಣೆಕಟ್ಟೆಗೆ ಹಾಕಲಾಗಿದ್ದ ಹಲಗೆ ತೆಗೆಯುವುದರಿಂದ ನದಿಯಲ್ಲಿ ಉಪ್ಪು ನೀರಿನ ಬಾಧೆ ಕಾಣಿಸಿಕೊಳ್ಳಲಿದ್ದು ಕುಡಿಯುವ ನೀರಿಗೂ ಕೃಷಿಗೂ ಹಾನಿ ಉಂಟಾಗಲಿದೆ.
ಪಂಜ ಉಲ್ಯ ಪ್ರದೇಶದಲ್ಲಿ ನಂದಿನಿ ನದಿಗೆ ಕಳೆದ ಕೆಲವು ವರ್ಷಗಳ ಹಿಂದೆ ತಡೆಗೋಡೆ ಮಾಡಲಾಗಿತ್ತು. ಆದರೆ ತಡೆಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟು ಹಾನಿಗೊಂಡು ಮಳೆಗಾಲದಲ್ಲಿ ನೆರೆ ಬಂದ ಸಂದರ್ಭದಲ್ಲಿ ಕೆಲವು ಭಾಗಗಳು ಕೊಚ್ಚಿ ಹೋಗಿದ್ದು ಇನ್ನು ಮುಂದಕ್ಕೆ ಎಲ್ಲ ಮಳೆಗಾಲದಲ್ಲಿ ನೆರೆ ಸಮಸ್ಯೆ ಉಂಟಾಗಲಿದೆ ಎಂದು ಅಲ್ಲಿನ ಕೃಷಿಕ ಪಂಜ ಬೈಲಗುತ್ತು ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ತಡೆಗೋಡೆ ಇಲ್ಲದೆ ಗದ್ದೆಗಳು ಮುಳುಗಡೆ ಭೀತಿ
ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲಗುತ್ತು, ಉಲ್ಯ ಪ್ರದೇಶಗಳು ನೆರೆ ಹಾಗೂ ನದಿ ಬದಿಯ ಭತ್ತದ ಕೃಷಿಯ ಭೂಮಿಯಾಗಿದ್ದು, ಮಳೆಗಾಲದಲ್ಲಿ ಈ ಪ್ರದೇಶಗಳು ಮುಳುಗಡೆ ಆಗುತ್ತಿವೆ. ನಾಟಿ ಮಾಡಿದ ಗದ್ದೆಗಳು ಮುಳುಗಡೆಯಾದರೆ ನಷ್ಟ ಉಂಟಾಗುತ್ತಿದೆ ಎಂಬುದು ಅಲ್ಲಿನ ಕೃಷಿಕರಾದ ಚಂದ್ರಹಾಸ ಶೆಟ್ಟಿ ಪಂಜ ಅವರ ಅಭಿಪ್ರಾಯವಾಗಿದೆ.
- ರಘನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Inspire Award: ವಿಜ್ಞಾನದತ್ತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆಸಕ್ತಿ

District In-charge Minister ಮಂಗಳೂರು, ಉಡುಪಿಯಲ್ಲಿ ಇಂದು ಜನತಾ ದರ್ಶನ

Road Mishap ಕಾರ್ನಾಡು: ಢಿಕ್ಕಿ; ರಸ್ತೆ ಬದಿ ಉರುಳಿ ಬಿದ್ದ ಕಾರು

Haleangadi ನಾಪತ್ತೆಯಾದ ಯುವಕನ ಬಟ್ಟೆ ಅಣೆಕಟ್ಟಿನ ಬಳಿ ಪತ್ತೆ

ದಿ| ದಾಮೋದರ ಆರ್. ಸುವರ್ಣ ಸ್ಮಾರಕ; ಕುಂಜತ್ತಬೈಲಿನಲ್ಲಿ “ಬಿಲ್ಲವ ಹಾಸ್ಟೆಲ್’ ಉದ್ಘಾಟನೆ
MUST WATCH
ಹೊಸ ಸೇರ್ಪಡೆ

Challenge: ವಯನಾಡ್ ಬದಲು ಹೈದರಾಬಾದ್ ನಿಂದ ಸ್ಪರ್ಧಿಸಿ… ರಾಹುಲ್ ಗೆ ಸವಾಲು ಹಾಕಿದ ಓವೈಸಿ

Asian Games 2023: 10 ಮೀಟರ್ ಏರ್ ರೈಫಲ್ ನಲ್ಲಿ ಚಿನ್ನ ಗೆದ್ದು ವಿಶ್ವ ದಾಖಲೆ ಬರೆದ ಭಾರತ

Nutrition Food ಫಲಾನುಭವಿಗಳ ಕೈಸೇರದ ಪೌಷ್ಟಿಕ ಆಹಾರ; ಕೊರಗ,ಮಲೆಕುಡಿಯ ಸಮುದಾಯದವರ ಸಂಕಷ್ಟ

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ

Inspire Award: ವಿಜ್ಞಾನದತ್ತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆಸಕ್ತಿ