ತಗ್ಗಿದ ಡಿವೈಡರ್‌ ಎತ್ತರ: ಅಪಘಾತ ಹೆಚ್ಚಳ

ಹೆದ್ದಾರಿ ಇಲಾಖೆಯಿಂದ ಅವೈಜ್ಞಾನಿಕ ರಸ್ತೆ ಡಾಮರು ಕಾಮಗಾರಿ

Team Udayavani, Dec 1, 2022, 12:07 PM IST

7

ಸುರತ್ಕಲ್‌: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಿಂದ ಕೂಳೂರು ಕೊಟ್ಟಾರವರೆಗೆ ಹೆದ್ದಾರಿ ಇಲಾಖೆಯ ಹಾಕುವ ಅವೈಜ್ಞಾನಿಕ ಡಾಮರು ಕಾಮಗಾರಿಯಿಂದ ಡಿವೈಡರ್‌ಗಳ ಎತ್ತರ ಕಡಿಮೆಯಾಗಿ ವಾಹನಗಳು ಡಿವೈಡರ್‌ ಹಾರಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.

6 ತಿಂಗಳುಗಳ ಅವಧಿಯಲ್ಲಿ ತಡಂಬೈಲ್‌ನಿಂದ ಕೋಡಿಕಲ್‌ ವರೆಗೆ 7 ವಾಹನಗಳು ಡಿವೈಡರ್‌ ಹಾರಿ ಅಪಘಾತ ಸಂಭವಿಸಿದೆ. ಇದರಲ್ಲಿ ಎರಡು ಮಾತ್ರ ಟ್ರಾಫಿಕ್‌ ವಿಭಾಗದಲ್ಲಿ ದೂರು ದಾಖಲಾಗಿದೆ. ಉಳಿದಂತೆ ನಾಲ್ಕು ಕಾರುಗಳಿಗೆ ಸಣ್ಣ ಪುಟ್ಟ ಹಾನಿಯಾದ ಕಾರಣ ಕೇಸು ದಾಖಲಿಸದೆ ಪ್ರಯಾಣ ಮುಂದುವರಿಸಿದ್ದಾರೆ. ಓವರ್‌ಟೇಕ್‌ ಮಾಡುವ ಸಂದರ್ಭ ಇಂತಹ ಪ್ರಮಾದಗಳು ನಡೆಯುತ್ತಿವೆ. ರಸ್ತೆ ಡಾಮರು ಹಾಕುವ ಮಾಡಿದ ಎಡವಟ್ಟಿನಿಂದ ಡಿವೈಡರ್‌ಗಳ ಎತ್ತರ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಲೇ ಹೋಗುತ್ತಿದ್ದು, ಕೆಲವೆಡೆ ಕಾಣದಂತಾಗಿದೆ. ಕೇವಲ ಹಳದಿ ಪೈಂಟ್‌ ಮಾತ್ರ ಕಾಣಿಸುತ್ತಿದೆ! ಇರ್ಕಾನ್‌ ನಿರ್ಮಾಣದ ಸುರತ್ಕಲ್‌ ಕೊಟ್ಟಾರವರೆಗಿನ ರಸ್ತೆ ನಿರ್ವಹಣೆ ಗಮನಿಸಿದರೆ ಡಿವೈಡರ್‌ಗಳ ಅಯೋಮಯ ಸ್ಥಿತಿ ಕಂಡು ಬರುತ್ತಿದೆ.

ಡಿವೈಡರ್‌ ಕನಿಷ್ಠ 1 ಅಡಿ ಎತ್ತರಬೇಕು

ಪ್ರತೀಯೊಂದು ಕಡೆ ಡಿವೈಡರ್‌ ಕನಿಷ್ಠ ಒಂದು ಅಡಿ ಅಂದರೆ 12 ಇಂಚಿನಿಂದ 15 ಇಂಚಿನವೆರೆಗೆ ಎತ್ತರವಿರಬೇಕು. ಹೊಸ ರಸ್ತೆ ಮಾಡುವ ಸಂದರ್ಭ ಈ ಡಿವೈಡರ್‌ ಕಾನೂನಾತ್ಮಕವಾಗಿಯೇ ಇದ್ದರೂ ಬಳಿಕ ನಿರ್ವಹಣೆ ಸಂದರ್ಭ ಮಾಯವಾಗುತ್ತಿದೆ. ಪ್ರತೀ ಬಾರಿಯೂ ಡಾಮರು ಹಾಕುವ ಮೊದಲು ಹಿಂದೆ ಹಾಕಿದ ಡಾಮರು ತೆಗೆದು ಹೊಸ ಡಾಮರು ಅಳವಡಿಸಬೇಕು. ಆದರೆ ಈ ಬಗ್ಗೆ ಹೆದ್ದಾರಿ ಇಲಾಖೆಯೂ ನಿರ್ಲಕ್ಷ್ಯ ವಹಿಸಿದ ಕಾರಣ ಗುತ್ತಿಗೆ ಪಡೆದ ಮಂದಿ ಹಳೆಯ ಡಾಮರಿನ ಮೇಲೆಯೇ ಮತ್ತೆ ಮತ್ತೆ ಹಾಕುವುದರಿಂದ ಡಿವೈಡರ್‌ ಎತ್ತರ ಕಡಿಮೆಯಾಗುತ್ತಲೇ ಹೋಗುತ್ತಿದೆ. ಡಾಮರು ಹಾಕಿದರೂ ಡಿವೈಡರ್‌ಗಳನ್ನು ಮತ್ತೆ ಎತ್ತರಿಸಲಾಗುವುದಿಲ್ಲ.

ಪಣಂಬೂರು, ಬೈಕಂಪಾಡಿ, ಪೋರ್ತ್‌ ಮೈಲ್‌ ಭಾಗದಲ್ಲಿ ಡಿವೈಡರ್‌ 10 ಇಂಚುಗಳಷ್ಟು ಡಾಮರು ರಸ್ತೆಯ ಒಳಗೆ ಸೇರಿದೆ. ಇದರಿಂದಾಗಿ ಡಿವೈಡರ್‌ಗಳು ರಾತ್ರಿ ವೇಳೆ ಸರಿಯಾಗಿ ಕಾಣದ ಕಾರಣ ವಾಹನಗಳು ಡಿವೈಡರ್‌ ಹತ್ತಿ ಅಪಘಾತವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಮರ್ಪಕ ಡಾಮರು ಹಾಕುವ ಕಾರ್ಯಕ್ಕೆ ಒತ್ತು ನೀಡಬೇಕಿದೆ.

ಸುರಕ್ಷಿತ ಸಂಚಾರಕ್ಕೆ ಆದ್ಯತೆ: ಹೆದ್ದಾರಿ ನಿರ್ವಹಣೆ ಹಾಗೂ ಮರು ಡಾಮರು ಅಳವಡಿಸುವ ವೇಳೆ ಅನುಸರಿಸುಬೇಕಾದ ನೀತಿ ನಿಯಮಾವಳಿ ಬಗ್ಗೆ ಸ್ಥಳೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಪರಿಶೀಲಿಸುತ್ತೇನೆ. ಹೆದ್ದಾರಿಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡಬೇಕು. ಗುತ್ತಿಗೆದಾರರ ತಪ್ಪಾಗಿದ್ದಲ್ಲಿ ಅದಕ್ಕೆ ಬೇಕಾದ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. – ಡಾ| ಭರತ್‌ ಶೆಟ್ಟಿ ವೈ., ಶಾಸಕರು

-ಲಕ್ಷ್ಮೀ ನಾರಾಯಣ ರಾವ್‌

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

16-

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.