ಇಂದಿನಿಂದ ಶೈಕ್ಷಣಿಕ ವರ್ಷ; ತೆರೆದುಕೊಳ್ಳಲಿದೆ ಶಾಲೆ…
ಶಿಕ್ಷಕರು-ಸಿಬಂದಿಗೆ ಎರಡು ದಿನ ಪೂರ್ತಿ ತಯಾರಿ ಕೆಲಸ
Team Udayavani, May 29, 2023, 7:00 AM IST
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮೇ 29ರಿಂದ ಶಾಲೆಗಳು ತೆರೆದುಕೊಳ್ಳಲಿದ್ದು, 2023-24ನೇ ಸಾಲಿನ ಶೈಕ್ಷಣಿಕ ವರ್ಷ ವಿಧ್ಯುಕ್ತವಾಗಿ ತೆರೆದುಕೊಳ್ಳಲಿವೆ. ಆದರೆ ಮೇ 31ರಂದು ಶಾಲಾ ಪ್ರಾರಂಭೋತ್ಸವದ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಿ ತರಗತಿಗಳು ಆರಂಭವಾಗಲಿವೆ.
ಸೋಮವಾರ ಮತ್ತು ಮಂಗಳವಾರ ಶಿಕ್ಷಕರು ಮತ್ತು ಶಾಲಾ ಸಿಬಂದಿ ಮಾತ್ರ ಶಾಲೆಗಳಿಗೆ ತೆರಳಿ, ಇಲಾಖೆಯ ಸೂಚನೆಯಂತೆ ಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ನಿರ್ವಹಿಸಲಿದ್ದಾರೆ.
ಮುಖ್ಯವಾಗಿ ಶಾಲೆಯ ಕೊಠಡಿಗಳು, ಆವರಣ, ಬಿಸಿಯೂಟಕ್ಕೆ ಸಂಬಂಧಿಸಿ ಸ್ವತ್ಛತೆಯ ಕೆಲಸ, ಪ್ರವೇಶೋತ್ಸವದ ಪೂರ್ವ ತಯಾರಿ, ಯುನಿಫಾರ್ಮ್, ಪಠ್ಯಪುಸ್ತಕಗಳನ್ನು ಜೋಡಿಸಿಕೊಳ್ಳುವುದು, ಎಸ್ಡಿಎಂಸಿ ಸಭೆ ನಡೆಸುವುದು, ಪಾಠ ಟಿಪ್ಪಣಿ ಸಿದ್ಧಪಡಿಸುವುದು, ಪಾಠಗಳ ಯೋಜನೆ ಮಾಡುವುದು, ಶಾಲಾಭಿವೃದ್ಧಿ ಯೋಜನೆ ತಯಾರಿಸುವುದು, ಶಾಲಾ ಪಂಚಾಂಗ ತಯಾರಿ ಈ ಎಲ್ಲ ಪೂರ್ವ ತಯಾರಿ ಮಾಡಿಕೊಳ್ಳಲು ಎರಡು ದಿನಗಳ ಸಮಯಾವಕಾಶ ನೀಡಲಾಗಿದೆ.
ಈ ಬಾರಿ ರಜೆಯಲ್ಲೂ ಶಿಕ್ಷಕರಿಗೆ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಕೆಲಸಗಳು ಇದ್ದವು. ಶಾಲೆಗಳಲ್ಲಿ ಚುನಾವಣೆಯ ಬೂತ್ಗಳು ಇದ್ದುದರಿಂದ ಡೆಸ್ಕ್-ಬೆಂಚುಗಳು ಇತರ ವಸ್ತು, ಉಪಕರಣಗಳು ಅಸ್ತವ್ಯಸ್ತವಾಗಿದ್ದು, ಅವುಗಳನ್ನು ಮತ್ತೆ ಜೋಡಿಸಿಕೊಳ್ಳಬೇಕಾದ ಆವಶ್ಯಕತೆಯಿದೆ. ಎರಡು ತಿಂಗಳು ರಜೆಯಿಂದಾಗಿ ಎಲ್ಲ ಕಡೆಗಳಲ್ಲಿ ಧೂಳು ಆವರಿಸಿಕೊಂಡಿದ್ದು, ಸ್ವತ್ಛಗೊಳಿಸಲು ಹೆಚ್ಚು ಸಮಯ ಬೇಕಾದೀತು ಎನ್ನುತ್ತಾರೆ ಶಿಕ್ಷಕರು.
ಬುಧವಾರ ಶಾಲಾ ಪ್ರಾರಂಭೋತ್ಸವ ನಡೆಯಲಿದ್ದು, ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಸಲಿದೆ. ತೋರಣ, ರಂಗೋಲಿ ಹಾಕಿ ಹಬ್ಬದ ವಾತಾವರಣದ ಮೂಲಕ ಮಕ್ಕಳನ್ನು ಶಾಲೆಗೆ ಸ್ವಾಗತಿಸುವುದು ಪ್ರಾರಂಭೋತ್ಸವದ ವಿಶೇಷ. ಬ್ಯಾಂಡ್-ವಾದ್ಯದ ಮೆರವಣಿಗೆ ಮೂಲಕವೂ ಮಕ್ಕಳನ್ನು ಸ್ವಾಗತಿಸಲಾಗುತ್ತದೆ.
ಸೋಮವಾರದಿಂದ ಶಾಲೆಗಳು ತೆರೆದುಕೊಳ್ಳಲಿದ್ದು, ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈಗಾಗಲೇ ಖಾಸಗಿ, ಅನುದಾನಿತ ಹಾಗೂ ಸರಕಾರಿ ಶಾಲೆಗಳ ಮುಖ್ಯಶಿಕ್ಷಕರಿಗೆ ಆಯಾ ಬಿಇಒ ಹಂತದಲ್ಲಿ ಸಭೆ ನಡೆಸಿ, ಪೂರ್ವ ತಯಾರಿಗೆ ಸಂಬಂಧಿಸಿದ ಮಾಹಿತಿ ನೀಡಲಾಗಿದೆ. ಮೇ 31ರಂದು ಶಾಲಾ ಪ್ರವೇಶೋತ್ಸವ ನಡೆಯಲಿದೆ.
– ದಯಾನಂದ ನಾಯಕ್, ಗಣಪತಿ ಡಿಡಿಪಿಐ ದ.ಕ., ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್