ಚರಂಡಿಯಲ್ಲಿ ಗಲೀಜು ನೀರು, ದುರ್ನಾತ!
Team Udayavani, Apr 14, 2022, 11:10 AM IST
ಕೆ.ಎಸ್.ರಾವ್. ರಸ್ತೆ: ಮಳೆನೀರು ಹರಿಯುವ ನಗರದ ಹೃದಯಭಾಗದ ಬೃಹತ್ ಚರಂಡಿಯಲ್ಲಿ ಒಳಚರಂಡಿ ನೀರು ಹರಿಯುತ್ತ ಸ್ಥಳೀಯವಾಗಿ ವಾಸನೆ ವ್ಯಾಪಿಸಿದೆ. ಕೆ.ಎಸ್. ರಾವ್ ರಸ್ತೆಯ ಗಣೇಶ್ ಮಹಲ್ ಹಾಗೂ ಪ್ರಭಾತ್ ಟಾಕೀಸ್ ನಡುವಿನ ಚರಂಡಿಯಲ್ಲಿ ಗಲೀಜು ನೀರು ಹರಿಯುತ್ತಿದ್ದು ಸ್ಥಳೀಯವಾಗಿ ವಾಸನೆ ತುಂಬಿದೆ.
ಈ ಪ್ರದೇಶ ಸದಾ ಚಟುವಟಿಕೆಯ ತಾಣ. ವ್ಯವಹಾರ ಕೇಂದ್ರಿತ ಸ್ಥಳ. ಮಾಲ್, ಸಿನೆಮಾ ಥಿಯೇಟರ್ ಸೇರಿದಂತೆ ಹೆಚ್ಚು ಜನರು ಓಡಾಟ ನಡೆಸುವ ಕೇಂದ್ರ. ಆದರೆ, ಎಲ್ಲರಿಗೂ ಒಂದೇ ಸಮಸ್ಯೆ-ಬೃಹತ್ ಚರಂಡಿಯ ವಾಸನೆ! ವ್ಯಾಪಾರ ವಹಿವಾಟಿಗೂ ಇಲ್ಲಿ ಇದುವೇ ಸಮಸ್ಯೆಯಾಗಿದೆ. ಜತೆಗೆ ಸೊಳ್ಳೆ ಉತ್ಪತ್ತಿಯ ತಾಣವಾಗಿ ಬದಲಾಗಿದೆ.
ಕೆ.ಎಸ್. ರಾವ್ ರಸ್ತೆಯ ಗಣೇಶ್ ಮಹಲ್ ಹಾಗೂ ಪ್ರಭಾತ್ ಟಾಕೀಸ್ ನಡುವಿನ ಚರಂಡಿಯಲ್ಲಿ ಮಳೆನೀರು ಹಾಗೂ ಒಳಚರಂಡಿಯ ಗಲೀಜು ನೀರು ಹರಿಯುತ್ತಿದ್ದು, ಈ ಪರಿಸರ ದುರ್ವಾ ಸನೆಯಿಂದ ಕೂಡಿದೆ. ಸೊಳ್ಳೆ ಉತ್ಪತ್ತಿ ತಾಣವಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಪತ್ರದ ಮೂಲಕ ಸೂಚಿಸಿದ್ದಾರೆ. ಆದರೆ ಇನ್ನೂ ಕೂಡ ಸಮಸ್ಯೆಗೆ ಪರಿಹಾರ ದೊರೆತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ