ಹಳಿ ನವೀಕರಣ ಕಾಮಗಾರಿ: ಮೇ 20-22ರವೆರೆಗೆ ಕೆಲವು ರೈಲು ರದ್ದು, ಕೆಲವು ಭಾಗಶಃ ರದ್ದು
Team Udayavani, May 17, 2023, 6:40 AM IST
ಮಂಗಳೂರು: ತಿರುವನಂತಪುರದ ಆಲುವ ಅಂಗಮಾಲಿ ಸೆಕ್ಷನ್ ಮಧ್ಯೆ ಹಳಿ ನವೀಕರಣ ಕಾಮಗಾರಿ ಇರುವುದರಿಂದ ಹಲವು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಮೇ 21ರಂದು ಹೊರಡಲಿರುವ ನಂ.12202 ಕೊಚ್ಚುವೇಲಿ-ಲೋಕಮಾನ್ಯ ತಿಲಕ್ ಗರೀಬರಥ, ಮೇ.22ರಂದು ಹೊರಡಲಿರುವ ನಂ.12201 ಲೋಕಮಾನ್ಯ ತಿಲಕ್-ಕೊಚ್ಚುವೇಲಿ ಗರೀಬರಥ, ಮೇ.21ರಂದು ಹೊರಡಲಿರುವ 16650 ನಾಗರಕೋವಿಲ್-ಮಂಗಳೂರು ಸೆಂಟ್ರಲ್ ಪರಶುರಾಮ ಎಕ್ಸ್ಪ್ರೆಸ್, ಮೇ 20ರಂದು ಹೊರಡುವ ನಂ.16649 ಮಂಗಳೂರು ಸೆಂಟ್ರಲ್-ನಾಗರಕೋವಿಲ್ ಪರಶುರಾಮ ಎಕ್ಸ್ಪ್ರೆಸ್ ಪೂರ್ಣ ರದ್ದಾಗಲಿದೆ.
ಮೇ 21ರಂದು ಹೊರಡುವ ನಂ.12617 ಎರ್ನಾಕುಳಂ ಜಂಕ್ಷನ್ ಹಜ್ರತ್ ನಿಜಾಮುದ್ದೀನ್ ಮಂಗಳಾ ಎಕ್ಸ್ಪ್ರೆಸ್ ಎರ್ನಾಕುಳಂ ಹಾಗೂ ತ್ರಿಶೂರು ಮಧ್ಯೆ ಭಾಗಶಃ ರದ್ದು. ಮೇ 21ರಂದು ತಿರುವನಂತಪುರಂನಿಂದ ಬೆಳಗ್ಗೆ 9.15ಕ್ಕೆ ಹೊರಡಬೇಕಾದ ನಂ.16346 ತಿರುವನಂತಪುರಂ ಸೆಂಟ್ರಲ್-ಲೋಕಮಾನ್ಯ ತಿಲಕ್ ನೇತ್ರಾವತಿ ಎಕ್ಸ್ಪ್ರೆಸ್ 3 ಗಂಟೆ ತಡವಾಗಿ 12.15ಕ್ಕೆ ಹೊರಡಲಿದೆ. ಕೊಚ್ಚುವೇಲಿಯಿಂದ ಮೇ 21ರಂದು ಬೆಳಗ್ಗೆ 11.10ಕ್ಕೆ ಹೊರಡಬೇಕಾದ ನಂ. 2909 ಕೊಚ್ಚುವೇಲಿ-ಪೋರಬಂದರ್ ಎಕ್ಸ್ಪ್ರೆಸ್ 1.35 ಗಂಟೆ ತಡವಾಗಿ 12.45ಕ್ಕೆ ಹೊರಡಲಿದೆ.
ಮೇ 22ರಂದು ಮಂಗಳೂರು ಸೆಂಟ್ರಲ್ನಿಂದ ಮಧ್ಯಾಹ್ನ 2.25ಕ್ಕೆ ಹೊರಡಬೇಕಾದ ನಂ.16348 ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಡೈಲಿ ಎಕ್ಸ್ಪ್ರೆಸ್ 4.15 ಗಂಟೆ ತಡವಾಗಿ ಸಂಜೆ 6.40ಕ್ಕೆ ಹೊರಡಲಿದೆ. ಮೇ 22ರಂದು ಮಂಗಳೂರು ಸೆಂಟ್ರಲ್ನಿಂದ ಸಂಜೆ 5.30ಕ್ಕೆ ಹೊರಡಬೇಕಾದ ನಂ. 16603 ಮಂಗಳೂರು ಸೆಂಟ್ರಲ್-ತಿರುವನಂತಪುರ ಮಾವೇಲಿ ಎಕ್ಸ್ಪ್ರೆಸ್ ರಾತ್ರಿ 7.45ಕ್ಕೆ ಹೊರಡಲಿದೆ.
ಮೇ21ರಂದು ನಂ.16331 ಮುಂಬಯಿ ಸಿಎಸ್ಎಂಟಿ-ತಿರುವನಂತಪುರ ರೈಲನ್ನು 1.15 ಗಂಟೆ ಕಾಲ, ಮೇ 22ರಂದು ನಂ. 16630 ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್ಪ್ರೆಸ್ ರೈಲನ್ನು 15 ನಿಮಿಷ ಕಾಲ ನಿಯಂತ್ರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ