ಕತ್ತಲಸಾರ್: ತೇಲಿ ಬಂದ ತ್ಯಾಜ್ಯ ರಾಶಿ; ಗ್ರಾ.ಪಂ.ನಿಂದ ದೂರು ದಾಖಲು
Team Udayavani, Sep 13, 2022, 11:51 AM IST
ಬಜಪೆ: ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕತ್ತಲಸಾರ್ ಶಾಲಾ ಬಳಿ ರವಿವಾರ ಮಧ್ಯಾಹ್ನದ ವೇಳೆಗೆ ಏಕಾಏಕಿ ಎಕ್ಕಾರು ನದಿಯಲ್ಲಿ ಕಪ್ಪು ಕವರ್ಗಳಲ್ಲಿ ಪ್ಲಾಸ್ಟಿಕ್ ರಾಶಿ ತೇಲಿ ಬಂದು ಶೇಖರಣೆಯಾಗಿತ್ತು.
ಸೋಮವಾರದಂದು ಗ್ರಾ.ಪಂ.ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ, ಪಿಡಿಒ ಉಗ್ಗಪ್ಪ ಮೂಲ್ಯ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನಾಗೇಶ್ ಪೂಜಾರಿ ಅವರು ಎಕ್ಕಾರು ನದಿಯಲ್ಲಿ ಹುಡುಕಾಟ ಆರಂಭಿಸಿದರು. ಇವರ ಜತೆಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಸಹಕರಿಸಿದರು.
ಗ್ರಾ.ಪಂ. ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಕನ್ನಿಕಟ್ಟದಲ್ಲಿ ಒಂದೆಡೆ ತೇಲಾಡುತ್ತಾ ನಿಂತಿದ್ದ ಒಂದು ಗಂಟು ಮಾತ್ರ ಸಿಕ್ಕಿದೆ. ಅದರಲ್ಲಿ ಸಿರಿಂಜ್ಗಳು, ಕೈ ಕವಚಗಳು, ಪ್ಲಾಸ್ಟಿಕ್ಹಾಳೆಗಳು ಸಿಕ್ಕಿದೆ. ವಿಷ್ಣು ಮೂರ್ತಿ ದೇವಸ್ಥಾನ ಸಮೀಪದಲ್ಲಿಯೂ ತೇಲಾಡುತ್ತಾ ಬರುತ್ತಿದ್ದ ಎರಡು ಪ್ಲಾಸ್ಟಿಕ್ ಮೂಟೆಗಳನ್ನು ತಡೆದು ಅದರಲ್ಲಿ ನೋಡಿದಾಗ ಪ್ಲಾಸ್ಟಿಕ್ ತ್ಯಾಜ್ಯಗಳು ಕಂಡು ಬಂದಿವೆ.
ಇದರಲ್ಲಿ ಅವರಿಗೆ ಕಂಪೆನಿಯ ಹೆಸರು ಕಂಡು ಬಂದಿದೆ. ಇದರಿಂದ ಈ ತ್ಯಾಜ್ಯ ಕಂಪೆನಿಯಿಂದ ಬಂದ ತ್ಯಾಜ್ಯದ ಬಗ್ಗೆ ಅನುಮಾನ ಮೂಡಿಸಿದೆ. ದೇಲಂತಬೆಟ್ಟುವಿನತ್ತ ಸಾಗಿದ ತ್ಯಾಜ್ಯ ತೇಲುತ್ತಾ ಬಂದ ತ್ಯಾಜ್ಯಗಳ ಗಂಟು ಪಡುಪೆರಾರದ ಕತ್ತಲಸಾರ್ನಿಂದ ಎಕ್ಕಾರು, ಶಿಬರೂರು, ದೇಲಂತ ಬೆಟ್ಟುವಿನತ್ತ ಸಾಗಿದೆ. ಇಲ್ಲಿನ ಕೃಷಿಕರಿಗೆ ತೊಂದರೆ ಒಡ್ಡಲಿದೆ. ಗ್ರಾಮ ಪಂಚಾಯತ್ನಿಂದ ಬಜಪೆ ಪೊಲೀಸ್ ಠಾಣೆಗೆ ದೂರು ತ್ಯಾಜ್ಯ ಎಸೆದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾ.ಪಂ.ನಿಂದ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
MUST WATCH
ಹೊಸ ಸೇರ್ಪಡೆ
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ