ಮರಳ ರಾಶಿಯಲ್ಲಿ ಹುದುಗಿದ ಅನ್ನದ ಬಟ್ಟಲು

ಬೆಳ್ತಂಗಡಿ ಪ್ರವಾಹ ಪ್ರದೇಶ ಯಥಾಸ್ಥಿತಿ ಗೃಹ ನಿರ್ಮಾಣಕ್ಕೆ ಜಿಪಿಎಸ್‌ ಅಡ್ಡಿ

Team Udayavani, Jun 8, 2020, 12:00 PM IST

ಮರಳ ರಾಶಿಯಲ್ಲಿ ಹುದುಗಿದ ಅನ್ನದ ಬಟ್ಟಲು

ಮರಳಿನ ರಾಶಿ ತುಂಬಿ ಅಡಿಕೆ ಮರಗಳು ಒಣಗಿ ಹೋಗಿರುವುದು.

ಬೆಳ್ತಂಗಡಿ: ಕಳೆದ ಆಗಸ್ಟ್‌ನಲ್ಲಿ ಪ್ರವಾಹದಿಂದಾಗಿ ನಲುಗಿದ್ದ ಇಲ್ಲಿನ ಪ್ರದೇಶಗಳು ಇನ್ನೂ ಚೇತರಿಸಿಕೊಂಡಿಲ್ಲ. ಕೃಷಿ ಪ್ರದೇಶ ಮರಳಿನ ರಾಶಿಯೊಳಗಿದೆ. ಭತ್ತ ಸಾಗುವಳಿಗೆ ಸಕಾಲವಾದರೂ ಗದ್ದೆಗಳು ಮರಳು, ಹೂಳಿನಲ್ಲಿ ಹುದುಗಿವೆ. ತೆರವುಗೊಳಿಸಲು ಅನುಮತಿ ನೀಡಬೇಕಿದ್ದ ಜಿಲ್ಲಾಡಳಿತ ನಿಯಮಾವಳಿ ಹೇರಿ ಮೌನವಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹ ಅಪ್ಪಳಿಸಿದ 16 ಗ್ರಾಮಗಳ ಸರ್ವೇ ನಡೆಸಿ ಕಂದಾಯ ಇಲಾಖೆಗೆ ವರದಿ ನೀಡಲಾಗಿದೆ. 256 ಮನೆಗಳು ಸಂಪೂರ್ಣ ಮತ್ತು ಭಾಗಶಃ ಹಾನಿಗೀಡಾಗಿವೆ ಎಂದು ಗುರುತಿಸಲಾಗಿದೆ. ತೋಟಗಾರಿಕೆ ಇಲಾಖೆ ವರದಿಯಂತೆ ತಾಲೂಕಿನಲ್ಲಿ 1,246 ರೈತ ಕುಟುಂಬಗಳ 1,400 ಎಕ್ರೆ ಕೃಷಿ ಪ್ರದೇಶ ಹಾನಿಯಾಗಿದೆ. ಹೋಬಳಿವಾರು ಒಟ್ಟು 54.776 ಹೆಕ್ಟೇರ್‌ ಗದ್ದೆ ಹಾನಿಯಾಗಿರುವ ವರದಿ ಕೃಷಿ ಇಲಾಖೆಯಲ್ಲಿದೆ. ಪ್ರತಿ ಎಕ್ರೆಗೆ 11,200 ರೂ., ಹೆಕ್ಟೇರ್‌ಗೆ 28 ಸಾವಿರ ರೂ.ಗಳಂತೆ 2020ರ ಫೆಬ್ರವರಿಯ ವರೆಗೆ ಸರಕಾರದಿಂದ 1,56,89,590 ಕೋ.ರೂ. ಪರಿಹಾರ ಸಂದಾಯವಾಗಿದೆ. ಈ ಮೊತ್ತ ಉಳ್ಳವರ ಪಾಲಾಗಿದೆ ಎಂಬ ಆರೋಪವಿದೆ. ನಿಜವಾಗಿ ನಷ್ಟ ಅನುಭವಿಸಿದ ರೈತ ಆರ್‌ಟಿಸಿ, ಆಧಾರ್‌ ತಿದ್ದುಪಡಿ, ಮರಣ ಪ್ರಮಾಣಪತ್ರ, ಮ್ಯುಟೇಶನ್‌ ಆಗಿದ್ದರೂ ಆನ್‌ಲೈನ್‌ ಸಮಸ್ಯೆಯಿಂದ ಅಲ್ಪ ಮೊತ್ತದ ಪರಿಹಾರದಲ್ಲಿ ತೃಪ್ತಿ ಪಡುವಂತಾಗಿದೆ.

ಮನೆ ನಿರ್ಮಾಣಕ್ಕೆ ಜಿಪಿಎಸ್‌ ಅಡ್ಡಿ
ಹಾನಿಯಾಗಿರುವ ಮನೆಗಳಿಗೆ ಮೊದಲ ಹಂತದಲ್ಲಿ ತಲಾ 1.30 ಲಕ್ಷ ರೂ.ಗಳನ್ನು ಪ್ರವಾಹದ ಸಂದರ್ಭದಲ್ಲೇ ಖಾತೆಗೆ ಜಮೆ ಮಾಡಲಾಗಿತ್ತು. ಮಿತ್ತಬಾಗಿಲು ಗ್ರಾ.ಪಂ. ವ್ಯಾಪ್ತಿಯಲ್ಲೇ 120 ಮನೆಗಳಿಗೆ ಹಾನಿಯಾಗಿದೆ. 89 ಮನೆಗಳು ನಿರ್ಮಾಣದ ಹಂತದಲ್ಲಿದ್ದರೆ ಉಳಿದವು ಜಿಪಿಎಸ್‌ ಸಮಸ್ಯೆಯಿಂದ ಬಾಕಿ ಉಳಿದಿವೆ. ನಾಲ್ಕು ಹಂತಗಳಲ್ಲಿ ಜಿಪಿಎಸ್‌ ಮಾಡಬೇಕಿದೆ. ಆದರೆ ಕೆಲವರು ಬೇರೆಡೆ ಮನೆ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಮೂಲ ಸ್ಥಳದ ಜಿಪಿಎಸ್‌ ನಡೆಸಿ ಪ್ರಸಕ್ತ ಮನೆ ನಿರ್ಮಾಣವಾಗುತ್ತಿರುವಲ್ಲಿಗೆ ತೆರಳುವಾಗ ನೆಟ್‌ವರ್ಕ್‌ ಸಮಸ್ಯೆಯಾದಲ್ಲಿ ಮತ್ತೆ ಜಿಪಿಎಸ್‌ ನಡೆಸಬೇಕಾಗುತ್ತದೆ. ಜಿಲ್ಲಾಡಳಿತ ನೂತನ ಮನೆ ನಿರ್ಮಾಣ ಸ್ಥಳದಲ್ಲಿ ಮಾತ್ರ ಜಿಪಿಎಸ್‌ ನಡೆಸಲು ಅನುಮತಿ ನೀಡಿದಲ್ಲಿ ಇದಕ್ಕೆ ಪರಿಹಾರ ಸಾಧ್ಯ.

ಮರದ ದಿಮ್ಮಿಗಳು ಅಲ್ಲಲ್ಲೇ
ಪ್ರವಾಹದಲ್ಲಿ ತೇಲಿಬಂದ ದಿಮ್ಮಿಗಳು ಅಲ್ಲಲ್ಲಿ ರಾಶಿ ಬಿದ್ದಿವೆ. ಅರಣ್ಯ ಇಲಾಖೆ ಮೊದಲಿಗೆ 1,063 ದಿಮ್ಮಿಗಳ ಪಟ್ಟಿ ತಯಾರಿಸಿತ್ತು. ಎರಡನೇ ಬಾರಿ ನೆರೆಯ ಬಳಿಕ 666 ದಿಮ್ಮಿಗಳನ್ನು ಗುರುತಿಸಿದೆ. ತೆರವಿಗೆ ಟೆಂಡರ್‌ ಕರೆಯಲು ಸರಕಾರಕ್ಕೆ ವರದಿ ಸಲ್ಲಿಸಿದರೂ ಆಗಿಲ್ಲ. ಈ ವರ್ಷದ ಮಳೆಗೆ ಇವುಗಳಿಂದ ಮತ್ತೆ ಹಾನಿಯಾದರೆ ಯಾರು ಹೊಣೆ ಎಂಬುದು ಪ್ರಶ್ನೆ.

ಪ್ರವಾಹದಿಂದ ಹಾನಿಗೊಳ
ಗಾದ ಕೃಷಿ ಪ್ರದೇಶದಲ್ಲಿ ಮರಳು ತೆರವಿಗೆ ಅನುಮತಿ ಇದೆ. ಅರ್ಜಿ ಸಲ್ಲಿಸಿದಲ್ಲಿ ಅವಕಾಶ ನೀಡಲಾಗುವುದು. ಕೃಷಿ ಪ್ರದೇಶ ಹಾನಿಗೂ ಪರಿಹಾರ ಒದಗಿಸಲಾಗಿದೆ. ಮನೆ ನಿರ್ಮಾಣ ಜಿಪಿಎಸ್‌ ಸಮಸ್ಯೆಗೆ ಹೊಸ ಮಾರ್ಗಸೂಚಿ ಬರಲಿದೆ.
– ಗಣಪತಿ ಶಾಸ್ತ್ರಿ, ತಹಶೀಲ್ದಾರ್‌

ಸರಕಾರ ಮಾರ್ಗಸೂಚಿಯಂತೆ ಫ‌ಲಾನುಭವಿಗಳ ಖಾತೆಗೆ ನೇರ ಪರಿಹಾರ ಮೊತ್ತ ಪಾವತಿಯಾಗಿದೆ. ಕಳೆದ ಬಾರಿ ಹಾನಿಗೊಳಗಾದ ಸೇತುವೆಗಳಿಗೆ ಕಾಂಕ್ರೀಟ್‌ ತಡೆಗೋಡೆ ರಚಿಸಲಾಗಿದೆ. ದಾನಿಗಳಿಂದ ಬಂದ ಶ್ರಮಿಕ ನೆರವು ವಿತರಿಸಲಾಗುವುದು.
– ಹರೀಶ್‌ ಪೂಂಜ, ಶಾಸಕ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.