ಕಬ್ಬಿಣದ ತಂತಿ ಬಳಸಿ ಗೂಡು ಕಟ್ಟಿದ ಕಾಗೆ!
Team Udayavani, Sep 29, 2022, 2:05 PM IST
ಸುಳ್ಯ: ಸಾಮಾನ್ಯವಾಗಿ ಪಕ್ಷಿಗಳು ಮರದ ಎಲೆ, ಹುಲ್ಲು, ಸಣ್ಣ- ಪುಟ್ಟ ಕಡ್ಡಿ, ನಾರು ಪದಾರ್ಥದಂತಹ ಒಣ ವಸ್ತುಗಳಿಂದ ಗೂಡುಗಳನ್ನು ಕಟ್ಟಿಕೊಂಡು ಜೀವಿಸುತ್ತವೆ. ಆದರೆ ಇಲ್ಲೊಂದು ಪಕ್ಷಿ ಕಬ್ಬಿಣದ ತಂತಿಗಳನ್ನು ಬಳಸಿ ಗೂಡು ಕಟ್ಟಿಕೊಂಡಿದ್ದುದು ಬೆಳಕಿಗೆ ಬಂದಿದೆ. ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಈ ಘಟನೆ ಬೆಳಕಿದೆ ಬಂದಿದೆ.
ಇಲ್ಲಿನ ಆವರಣದೊಳಗಿನ ಮರದ ಗೆಲ್ಲನ್ನು ಅಪಾಯಕಾರಿ ಸ್ಥಿತಿಯ ಹಿನ್ನೆಲೆಯಲ್ಲಿ ತೆರವುಗೊಳಿಸಲು ಮುಂದಾದಾಗ ಅಲ್ಲಿ ಕಾಗೆಯ ಎರಡು ಗೂಡುಗಳು ಪತ್ತೆಯಾಗಿದೆ. ಆ ಪೈಕಿ ಒಂದರಲ್ಲಿ ಕಾಗೆ ವಾಸ್ತವ್ಯ ಮಾಡುತ್ತಿತ್ತು. ಇದರಿಂದಾಗಿ ಕೊಂಬೆ ತೆರವು ಮಾಡದೆ ಕಾಗೆಗಳ ವಾಸ್ತವ್ಯ ಇಲ್ಲದ ಗೂಡನ್ನು ಪರಿಶೀಲನೆ ಮಾಡಿದ ವೇಳೆ ಸುಮಾರು ಎರಡು ಕೆಜಿಯಷ್ಟು ಸಣ್ಣ-ಪುಟ್ಟ ಕಬ್ಬಿಣದ ತಂತಿಗಳಿಂದಲೇ ಗೂಡು ರಚಿಸಿರುವುದು ಕಂಡು ಬಂದಿದೆ.
ಕಾಗೆಗಳು ವಾಸವಿದ್ದ ಇನ್ನೊಂದು ಗೂಡು ಕೂಡಾ ಕಬ್ಬಿಣದ ತಂತಿಗಳಿಂದಲೇ ನಿರ್ಮಾಣವಾಗಿತ್ತು. ಅದನ್ನು ಮರದಲ್ಲೇ ಉಳಿಸಲಾಗಿದೆ. ಇದೀಗ ಈ ಖಾಲಿ ಕಾಗೆ ಗೂಡನ್ನು ಇದೇ ವಿದ್ಯಾಸಂಸ್ಥೆಯ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?