Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ
Team Udayavani, May 25, 2024, 12:19 AM IST
ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಸಂಬಂಧ ನಿರ್ಮಾಣಗೊಂಡ ಎತ್ತರಿಸಿದ ರಸ್ತೆಯ ಅಂಡರ್ ಪಾಸ್ ಬಳಿ ತರಾತುರಿಯಲ್ಲಿ ಮಣ್ಣುಹಾಕಿ ನಿರ್ಮಿಸಲಾದ ರಸ್ತೆಯಲ್ಲಿ ಶುಕ್ರವಾರ ಲಾರಿಯೊಂದು ಹೂತು ಹೋಗಿ ಸಮಸ್ಯೆ ಎದುರಾಯಿತು.
ಆಬಳಿಕ ನಿರ್ಮಾಣ ನಿರತ ಸಂಸ್ಥೆಯವರು ತುರ್ತು ಕಾರ್ಯಾಚರಣೆ ನಡೆಸಿ ಹೂತು ಹೋದ ವಾಹನವನ್ನು ಸ್ಥಳಾಂತರಿಸಿ ರಸ್ತೆಯಲ್ಲಿ ಹಾಕಲಾದ ಮೃದು ಮಣ್ಣನ್ನು ತೆರವುಗೊಳಿಸಿ ಜಲ್ಲಿ ಮಿಶ್ರಿತ ಗಟ್ಟಿ ಮಣ್ಣನ್ನು ಹಾಕಿ ರಸ್ತೆಯನ್ನು ಪುನರ್ ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.