ರೈತರ ಗೋಳು; ಬೆಳೆ ಭಕ್ಷಕ ಆಫ್ರಿಕನ್‌ ಬಸವನ ಹುಳುಗಳ ಕಾಟ

ಉರುವಾಲು ಗ್ರಾಮದಲ್ಲಿ ವ್ಯಾಪಕ 100 ಎಕ್ರೆಗೆ ಆವರಿಸಿದ ಬಾಧೆ

Team Udayavani, Aug 13, 2020, 6:17 AM IST

ರೈತರ ಗೋಳು; ಬೆಳೆ ಭಕ್ಷಕ ಆಫ್ರಿಕನ್‌ ಬಸವನ ಹುಳುಗಳ ಕಾಟ

ಬೆಳ್ತಂಗಡಿ: ಅಡಿಕೆ ಧಾರಣೆ ಏರಿಕೆಯಿಂದ ಕೃಷಿಕರ ಮೊಗದಲ್ಲಿ ನಸುನಗು ಮೂಡುತ್ತಿರುವ ಹೊತ್ತಿಗೆ ಕೆಲವು ಕಡೆಗಳಲ್ಲಿ ಆಫ್ರಿಕನ್‌ ಬಸವನ ಹುಳು (African giant snail) ಇನ್ನಿಲ್ಲದಂತೆ ಕೃಷಿಕರನ್ನು ಹೈರಾಣಾಗಿಸುತ್ತಿದೆ.  ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ 100 ಎಕ್ರೆ ಪ್ರದೇಶದಲ್ಲಿ ಆಫ್ರಿಕನ್‌ ಬಸವನ ಹುಳುವಿನ ಕಾಟ ವಿಪರೀತವಾಗಿದೆ. ಐದಾರು ವರ್ಷಗಳ ಹಿಂದೆ ಕಾಸರಗೋಡು ಸೇರಿದಂತೆ ಆಲಂಕಾರು, ಸವಣೂರು, ಕೊçಲ ಗ್ರಾಮಗಳ ಕೃಷಿಕರಿಗೆ ಮಗ್ಗಲು ಮುಳ್ಳಾಗಿದ್ದ ಆಫ್ರಿಕನ್‌ ಬಸವನ ಹುಳು ಪ್ರಸಕ್ತ ಉರುವಾಲು ಗ್ರಾಮದಲ್ಲಿ ವ್ಯಾಪಕವಾಗಿದೆ.

ವಿಷಕ್ಕೂ ಜಗ್ಗುತ್ತಿಲ್ಲ
ನಿಶಾಚರಿಯಾಗಿರುವ ಇವು ಅಡಿಕೆಯ ಹಿಂಗಾರ, ತರ ಕಾರಿ ಬೆಳೆಗಳನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ತಿಂದುಬಿಡುತ್ತಿವೆ. ಅನೇಕ ಕೀಟನಾಶಕಗಳನ್ನು ಪ್ರಯೋಗಿಸಿದರೂ ಪ್ರಯೋಜನ ಶೂನ್ಯ ಎನ್ನುತ್ತಾರೆ ರೈತರು. ತೋಟಗಾರಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಗಣನೆಗೆ ತೆಗೆದುಕೊಂಡಂತಿಲ್ಲ ಎಂಬುದು ಕೃಷಿಕರ ಅಳಲು.

ಗೊಬ್ಬರದೊಂದಿಗೆ ಬಂತೇ?
ಉರುವಾಲು ಗ್ರಾಮದ ಕೃಷಿಕರು ಕೋಳಿ, ಕುರಿ ಗೊಬ್ಬರವನ್ನು ಹೊರ ಜಿಲ್ಲೆಗಳಿಂದ ತರಿಸಿದ್ದು, ಅದರೊಂದಿಗೆ ಇವು ಬಂದಿರಬಹುದೇ ಎಂಬ ಶಂಕೆ ಕೃಷಿಕರದು.

ವೈರಿಗಳಿಗೂ ಬೇಡ!
ಆಫ್ರಿಕನ್‌ ಹುಳುಗಳು ತರಕಾರಿ, ಬಸಳೆ, ಸುವರ್ಣಗೆಡ್ಡೆ, ಕೆಸುಗಳನ್ನು ಕೂಡ ನಾಶ ಮಾಡುತ್ತಿವೆ. ಗದ್ದೆಯಲ್ಲಿ ಪೈರು ತಿಂದು ಮುಗಿದ ಬಳಿಕ ಮಣ್ಣನ್ನು ತಿನ್ನಲು ಆರಂಭಿಸುತ್ತವೆ. ಇವು ಸತ್ತರೆ ಪರಿಸರವಿಡೀ ದುರ್ನಾತ. ಚಿಪ್ಪು ತುಂಬಾ ಗಟ್ಟಿ ಜತೆಗೆ ವಿಷಕಾರಿ. ಮನುಷ್ಯನ ಕಾಲಿಗೆ ಚುಚ್ಚಿದಲ್ಲಿ ಕೊಳೆಯಲಾರಂಭಿಸುತ್ತದೆ. ಇತರ ಕೀಟಗಳ ವೈರಿಗಳು ಎನಿಸಿಕೊಂಡಿರುವ ಸಣ್ಣಪುಟ್ಟ ಪ್ರಾಣಿ-ಪಕ್ಷಿಗಳಿಗೂ ಈ ಹುಳು ವಜ್ಯì. ಆದ್ದರಿಂದ ಸಂತಾನ ವೃದ್ಧಿಯಾಗುತ್ತಿದೆ.

ವರ್ಷಕ್ಕೆ 10 ಸಾವಿರ ಮೊಟ್ಟೆ
ಒಂದು ಹುಳು ವರ್ಷಕ್ಕೆ 10,000ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಮಳೆ ಆರಂಭದೊಂದಿಗೆ ಕಾಣಿಸುವ ಇವು ಬಿಸಿಲು ಬಂದಾಕ್ಷಣ ನೆರಳಿಗಾಗಿ ಪಂಪ್‌ ಶೆಡ್‌, ಮರ, ಮನೆಗಳ ಗೋಡೆಗಳನ್ನು ಆಶ್ರಯಿಸುತ್ತವೆ. ಕನಿಷ್ಠ 150ರಿಂದ 200 ಗ್ರಾಂ ತೂಕ ಹೊಂದಿರುತ್ತವೆ.

ಸೂಕ್ತ ಔಷಧ ಸಿಂಪಡಿಸಿದಲ್ಲಿ ಆಫ್ರಿಕನ್‌ ಬಸವನ ಹುಳು ಬಾಧೆ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ. Metaldehyde ಔಷಧ ಸಿಂಪಡಿಸಬೇಕು. ಯಾವ ಪ್ರಮಾಣ ಎಂಬುದನ್ನು ತಿಳಿಯ ಪಡಿಸಲು ತೋಟಗಾರಿಕೆ ಇಲಾಖೆ ಅಧಿ ಕಾರಿ ಗಳನ್ನು ಸ್ಥಳಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು.
– ಎಚ್‌.ಆರ್‌. ನಾಯಕ್‌, ಉಪ ನಿರ್ದೇಶಕರು

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.