ಹತಾಶ ಮಾತೆಯರಿಂದಲೇ ಅಂಗನವಾಡಿ ಛಾವಣಿ ದುರಸ್ತಿ

ಕುಸಿಯುವ ಭೀತಿಯಿದ್ದರೂ ದುರಸ್ತಿಗೆ ಇಲಾಖೆಯಿಂದ ಅನುದಾನ ನಿರಾಕರಣೆ

Team Udayavani, Mar 19, 2020, 4:48 AM IST

anganavadi

ಬೆಳ್ತಂಗಡಿ: ಮೂಲ ಸವಲತ್ತು ಒದಗಿಸುವ ಜತೆಗೆ ಕನ್ನಡ ಮಾಧ್ಯಮವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಲಾಖೆ, ಜನ ಪ್ರತಿನಿಧಿಗಳ ಮೇಲಿದ್ದರೂ ನಿರ್ಲಕ್ಷ್ಯ ವಹಿಸ ಲಾಗುತ್ತಿದೆ ಎಂಬುದಕ್ಕೆ ತಾ|ನ ಕಡಿರುದ್ಯಾವರ ಗ್ರಾಮದ ಕಾನರ್ಪ ಅಂಗನವಾಡಿ ಸಾಕ್ಷಿ. ಕಳೆದ ಮಳೆಗಾಲದಲ್ಲಿ ಅಂಗನವಾಡಿ ಕೇಂದ್ರದ ಛಾವಣಿ ಕುಸಿತದ ಭೀತಿ ಎದು ರಾಗಿತ್ತು. 30 ವರ್ಷಗಳ ಹಿಂದೆ ನಿರ್ಮಿ ಸಿದ್ದ, ಇನ್ನೇನು ಕುಸಿಯುವಂತಿದ್ದ ಸೂರು ದುರಸ್ತಿಯ ಅನುದಾನಕ್ಕಾಗಿ ಅಂಗಲಾಚಿ ದರೂ ಸ್ಥಳೀಯಾಡಳಿತವಾಗಲೀ ಜಿ.ಪಂ., ಇಲಾಖೆಯಾಗಲೀ ಕ್ರಮ ಕೈಗೊಳ್ಳಲಿಲ್ಲ.

ಅನುದಾನಕ್ಕೆ ಪರದಾಟ
ಕಳೆದ ಮಳೆಗಾಲದಲ್ಲಿ ಅಂಗನವಾಡಿ ಛಾವಣಿ ಅಡ್ಡಹಾಸು, ರೀಪು, ಹೆಂಚು ಮುರಿದು ಬೀಳುವ ಪರಿಸ್ಥಿತಿ ಎದುರಾಗಿತ್ತು. ಅಕ್ಟೋಬರ್‌ ಅವಧಿಗೆ ಅಂಗನವಾಡಿ ಶಿಕ್ಷಕಿ ಮಕ್ಕಳ ಹೆತ್ತವರ ಗಮನಕ್ಕೆ ತಂದಿದ್ದರು. ಗ್ರಾ.ಪಂ. ಸಭೆಗಳಲ್ಲಿ ಅಂಗನವಾಡಿ ಮಕ್ಕಳ ಹೆತ್ತವರ ಸಮಿತಿ ಸದಸ್ಯ ರಾಘವೇಂದ್ರ ಭಟ್‌ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಈ ಕುರಿತು ಶಾಸಕರಿಗೆ ಮನವಿ ನೀಡಿ ದಾಗಲೂ ಅನುದಾನ ನಿರೀಕ್ಷಿಸಿದ್ದು ಕೈ ಸೇರಿಲ್ಲ. ಇತ್ತ ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿಯಲ್ಲಿ ಚರ್ಚಿಸಿದಾಗ ಮನವಿ ನೀಡುವುದೇ ಬೇಡ ಎಂಬ ಹಾರಿಕೆ ಉತ್ತರ ಎದುರಾಗಿತ್ತು.

ಆಶ್ರಯಿಸಿದ ಸ್ತ್ರೀ ಶಕ್ತಿ
ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸ್ಥಳೀಯ ಸ್ತ್ರೀಶಕ್ತಿ ಸಂಘಟನೆ ನೇತೃತ್ವದಲ್ಲಿ ಮಕ್ಕಳ ಹೆತ್ತವರು ಸ್ಥಳೀಯ ದಾನಿಗಳ ನೆರವಿ ನಿಂದ ಒಂದೇ ದಿನದಲ್ಲಿ ಛಾವಣಿ ದುರಸ್ತಿ ಗೊಳಿಸಿದ್ದಾರೆ. 10ರಿಂದ 12 ಸಾವಿರ ರೂ. ಸಂಗ್ರಹಿಸಿ 50 ಹೆಂಚು, 1.20 ಕ್ವಿಂಟಲ್‌ ರಾಡ್‌ ಬಳಸಿ ಛಾವಣಿ ನಿರ್ಮಿಸಿದ್ದಾರೆ.

ಸ್ಥಳೀಯ 4 ಸ್ತ್ರೀ ಶಕ್ತಿ ಸಂಘಟನೆಗಳ
ಸದಸ್ಯೆ ಯರು ಹಾಗೂ ಮಕ್ಕಳ ತಾಯಂದಿರು 30 ಮಂದಿ ಸೇರಿ 10 ಮಂದಿ ಪುರುಷರ ಸಹಾಯದಿಂದ ಮಾ. 17ರಂದು ಒಂದೇ ದಿನದಲ್ಲಿ ಛಾವಣಿ ಯನ್ನು ದುರಸ್ತಿಗೊಳಿಸಿದ್ದಾರೆ.

ಕಾಂಕ್ರೀಟ್‌ ಛಾವಣಿಗೆ ಆಗ್ರಹ
ಕಾನರ್ಪ ಅಂಗನವಾಡಿಯಲ್ಲಿ 3ರಿಂದ 6 ವರ್ಷ ಪ್ರಾಯದ 19 ಮಕ್ಕಳು ನಿರಂತರವಾಗಿ ಶಾಲೆಗೆ ಹಾಜರಾಗುತ್ತಿದ್ದು, 0-3 ವರ್ಷ ಪ್ರಾಯದ 32 ಕಂದಮ್ಮಗಳು, 3-6 ವರ್ಷ ಪ್ರಾಯದ 19 ಮಕ್ಕಳು ಇದೇ ಅಂಗನವಾಡಿ ಆಶ್ರಯಿಸಿದ್ದಾರೆ. ಇಷ್ಟಾದರೂ ಕಟ್ಟಡ ಛಾವಣಿ ದುರಸ್ತಿಗೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದು ದುರಂತ. ಮಂದಿನ ದಿನಗಳಲ್ಲಿ ಕಾಂಕ್ರೀಟ್‌ ಛಾವಣಿ ನಿರ್ಮಿಸುವಂತೆ ಹೆತ್ತವರು ಆಗ್ರಹಿಸಿದ್ದಾರೆ.

ಪ್ರತಿವರ್ಷ ಅನುದಾನ
ಪ್ರತಿ ವರ್ಷ ಅಂಗನವಾಡಿ ಕಟ್ಟಡ ದುರಸ್ತಿಗೆ ಇಲಾಖೆ ಅನುದಾನ ಒದಗಿಸು ತ್ತದೆ. ಕಳೆದ ವರ್ಷ 68 ಅಂಗನವಾಡಿ ದುರಸ್ತಿಗೆ 74 ಲಕ್ಷ ರೂ., ಈ ವರ್ಷ 48 ಅಂಗನವಾಡಿ ದುರಸ್ತಿಗೆ 22 ಲಕ್ಷ ರೂ. ಅನುದಾನ ನೀಡಲಾಗಿದೆ. ಸಂಬಂಧ ಪಟ್ಟ ತಾ.ಪಂ. ಸದಸ್ಯರು ಅನುದಾನ ಹಂಚುವ ಜವಾಬ್ದಾರಿ ಹೊಂದಿರುತ್ತಾರೆ.
 - ಪ್ರಿಯಾ ಆಗ್ನೆಸ್‌, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ದಾನಿಗಳು, ಹೆತ್ತವರ ಸಹಕಾರ
ಕಟ್ಟಡ ಛಾವಣಿ ದುರಸ್ತಿಗೆ ಹಲವು ಬಾರಿ ಮೇಲಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಮಕ್ಕಳ ಜೀವ ಹಾನಿ ಸಂಭವಿಸುವ ಮುನ್ನ ಅನಿವಾರ್ಯವಾಗಿ ಸ್ಥಳೀಯ ದಾನಿಗಳು, ಹೆತ್ತವರ ಸಹಕಾರ ದಿಂದ ಕಟ್ಟಡ ದುರಸ್ತಿಗೊಳಿಸಲಾಗಿದೆ.
– ಗೌರಿ ಆರ್‌.ಕೆ., ಕಾನರ್ಪ ಅಂಗನವಾಡಿ ಕಾರ್ಯಕರ್ತೆ

 ಒಂದೇ ದಿನದಲ್ಲಿ ಛಾವಣಿ ನಿರ್ಮಾಣ ಮಳೆಗಾಲಕ್ಕೂ ಮುನ್ನ ಅಂಗನವಾಡಿ ದುರಸ್ತಿ ಅನಿವಾರ್ಯವಾದ್ದರಿಂದ ಸ್ಥಳೀಯ ದಾನಿಗಳ ನೆರವಿನಿಂದ, ಸ್ತ್ರೀಶಕ್ತಿಯರ ಕರ ಸೇವೆಯಿಂದ 12 ಸಾವಿರ ರೂ. ವೆಚ್ಚದಲ್ಲಿ ಒಂದೇ ದಿನದಲ್ಲಿ ಛಾವಣಿ ನಿರ್ಮಿಸಿದ್ದೇವೆ.
 -ರಾಘವೇಂದ್ರ ಭಟ್‌, ಹೆತ್ತವರು

ಮಕ್ಕಳ ಹೆತ್ತವರಿಂದಲೇ ಅಂಗನವಾಡಿ ದುರಸ್ತಿ ಕಾರ್ಯ.

- ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

Sullia ವಿದ್ಯುತ್‌ ಲೈನ್‌ಗೆ ಬಿದ್ದ ಮರ; ಹಾನಿ,ವಿದ್ಯುತ್‌ ವ್ಯತ್ಯಯ

Sullia ವಿದ್ಯುತ್‌ ಲೈನ್‌ಗೆ ಬಿದ್ದ ಮರ; ಹಾನಿ,ವಿದ್ಯುತ್‌ ವ್ಯತ್ಯಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.