ಬೆಳ್ತಂಗಡಿ; ಜಿಲ್ಲೆಯಲ್ಲಿಯೇ ಪ್ರಥಮ ಮಲಿನ ನೀರು ಶುದ್ಧೀಕರಣ ಘಟಕ

ಶುದ್ಧೀಕರಣ ಘಟಕವು ಪ್ರತಿದಿನ 2,000 ಲೀ. ನೀರು ಶುದ್ಧೀಕರಣ ಸಾಮರ್ಥ್ಯ ಹೊಂದಿದೆ.

Team Udayavani, Feb 3, 2023, 3:10 PM IST

ಬೆಳ್ತಂಗಡಿ; ಜಿಲ್ಲೆಯಲ್ಲಿಯೇ ಪ್ರಥಮ ಮಲಿನ ನೀರು ಶುದ್ಧೀಕರಣ ಘಟಕ

ಬೆಳ್ತಂಗಡಿ: ಮಾನವನ ನೇರ ನಿರ್ಲಕ್ಷ್ಯ ಹಾಗೂ ದುರಾಸೆಯಿಂದ ಭವಿಷ್ಯದ ಪರಿಸರ ಅಕ್ಷರಶಃ ಮಾಲಿನ್ಯಕರವಾಗಲಿದೆ. ಇದನ್ನು ಇಂದೇ ಸರಿಪಡಿಸಿ ಸುಸ್ಥಿತಿಗೆ ತರುವ ಉದ್ದೇಶದಿಂದ ಬೆಳ್ತಂಗಡಿ ಪ.ಪಂ. ಮುಂದಡಿಯಿಟ್ಟಿದ್ದು, ಪಟ್ಟಣ ವ್ಯಾಪ್ತಿಯ ಶೌಚಾಲಯದ ದ್ರವ ತ್ಯಾಜ್ಯವನ್ನು ಶುದ್ಧೀಕರಿಸಿ ಮರುಬಳಕೆಗೆ ಯೋಗ್ಯವಾಗಿಸುವ ಘಟಕ ಸ್ಥಾಪಿಸಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆ.ಯು. ಎಸ್‌. ಮತ್ತು ಡಿ.ಬಿ.)ಯಿಂದ ಯೋಜನೆ ಅನುಷ್ಠಾನಗೊಳಿಸಿದ್ದು 6.7 ಕೋ.ರೂ. ಘಟಕ ವೆಚ್ಚ, 5 ವರ್ಷಗಳ ನಿರ್ವಹಣೆ, ಸಕ್ಕಿಂಗ್‌ಯಂತ್ರ ಸಹಿತ ಒಟ್ಟು 10 ಕೋ. ರೂ. ಅನುದಾನದಡಿ ಮಲಿನ ನೀರು ಶುದ್ಧೀಕರಣ ಘಟಕವನ್ನು ಹುಬ್ಬಳ್ಳಿಯ ಸಿವಿಕೆ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದ್ದಾರೆ. ಪ.ಪಂ.ಗೆ ಸೇರಿರುವ ಕೊಯ್ಯೂರು ಗ್ರಾಮದ ಅರಳಿಯಲ್ಲಿರುವ 3 ಎಕ್ರೆ ಘನತ್ಯಾಜ್ಯ ಘಟಕದಲ್ಲಿ 50 ಸೆಂಟ್ಸ್‌ ಸ್ಥಳದಲ್ಲಿ ಘಟಕ ನಿರ್ಮಿಸಲಾಗಿದೆ.

3,972 ಕಟ್ಟಡಗಳ ಮಲಿನ ನೀರು ಶುದ್ಧೀಕರಣ
ಪ.ಪಂ. ವ್ಯಾಪ್ತಿಯಲ್ಲಿರುವ 2,714 ಗೃಹ, 1,258 ವಾಣಿಜ್ಯ ಸೇರಿ 3,972 ಕಟ್ಟಡಗಳ ಶೌಚಾಲಯದ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಕಾರ್ಯ ಆಗಲಿದೆ. ಇದಕ್ಕೆ
ಪೂರಕವಾಗಿ ಹುಣ್ಸೆಕಟ್ಟೆ ಹಾಗೂ ರೆಂಕೆದಗುತ್ತು ಕಾಲನಿಗಳಲ್ಲಿನ ಪ್ರತ್ಯೇಕ ಶೌಚಾಲಯದ ನೀರಿನ ಭೂಗತ ಶೇಖರಣೆ ಘಟಕ ನಿರ್ಮಿಸಲಾಗಿದೆ. ಮನೆಗಳ ಶೌಚಾಲಯದಿಂದ ಈ ಘಟಕಕ್ಕೆ ನೇರ ಪೈಪ್‌ಲೈನ್‌ ಸಂಪರ್ಕ ನೀಡಲಾಗಿದೆ. ಕಾಲನಿ, ಪಟ್ಟಣದ ಇತರ ಗೃಹ, ವಾಣಿಜ್ಯದ ದ್ರವತ್ಯಾಜ್ಯವನ್ನು ಮುಂದೆ ಯುಜಿಡಿಗೆ ಬಿಡದೆ ನೇರವಾಗಿ ಸಕ್ಕಿಂಗ್‌ ಯಂತ್ರದ ಮೂಲಕ ಕೊಯ್ಯೂರು ಘಟಕಕ್ಕೆ ಕೊಂಡೊಯ್ದು ಶುದ್ಧೀಕರಿಸುವ ಯೋಜನೆಯಾಗಿದೆ.

ಘಟಕದ ಪ್ರಯೋಜನ
ಮಲಿನ ನೀರು ನೇರವಾಗಿ ಸಮುದ್ರ ಅಥವಾ ಹೊಳೆಗೆ ಸೇರುವುದನ್ನು ತಡೆಯುವುದು ಇದರ ಮೂಲ ಉದ್ದೇಶವಾಗಿದೆ. ಈಗಾಗಲೇ ಬೆಂಗಳೂರು ಸಹಿತ ಮಹಾನಗರಗಳಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ ಪ.ಪಂ. ಮುಂದಡಿಯಿಟ್ಟಿದೆ. ಶುದ್ಧೀಕರಣ ಘಟಕಕ್ಕೆ ಶೌಚಾಲಯದ ತ್ಯಾಜ್ಯನೀರು ರವಾನಿಸಲು 6,000 ಲೀಟರ್‌ ಸಾಮರ್ಥ್ಯದ ನೂತನ ಸಕ್ಕಿಂಗ್‌ ಯಂತ್ರ ಜತೆಗೆ ಪ.ಪಂ. ಹಳೆಯ 3,000 ಲೀ. ಸಾಮರ್ಥ್ಯದ ಸಕ್ಕಿಂಗ್‌ ಯಂತ್ರ
ಕಾರ್ಯಾಚರಿಸುತ್ತದೆ. ಶುದ್ಧೀಕರಣ ಘಟಕವು ಪ್ರತಿದಿನ 2,000 ಲೀ. ನೀರು ಶುದ್ಧೀಕರಣ ಸಾಮರ್ಥ್ಯ ಹೊಂದಿದೆ.

ನೀರಿನ ಮರುಬಳಕೆ ಹೇಗೆ?
ಆರು ಪ್ರತ್ಯೇಕ ಘಟಕಗಳು ವಿವಿಧ ರೀತಿಯ ಸಂಸ್ಕರಣ ತಂತ್ರಜ್ಞಾನದೊಂದಿಗೆ ಕಲ್ಮಶ ನೀರನ್ನು ಮರುಬಳಕೆಗೆ ಯೋಗ್ಯ ವಾಗುವಂತೆ ಪರಿವರ್ತಿಸುತ್ತದೆ. ಈ ನೀರು ಕುಡಿಯಲು ಯೋಗ್ಯವಲ್ಲದಿದ್ದರೂ ಕೃಷಿ, ತೋಟ, ಉದ್ಯಾನವನ, ಶೌಚಾಲಯ ಫ್ಲಶಿಂಗ್‌, ಹೂತೋಟ, ಕೈಗಾರಿಕೆಗೆ ಬಳಸಲು ಯೋಗ್ಯ ನೀರಾಗಲಿದೆ.
ಪ್ರಾಯೋಗಿಕವಾಗಿ ಈಗಾಗಲೇ ನೀರನ್ನು ಶುದ್ಧೀಕರಿಸಿ ಬಳಸಲಾಗುತ್ತಿದೆ.

ಪಟ್ಟಣದಲ್ಲಿ ವಿರೋಧ
ಈ ಹಿಂದೆ ಘಟಕವು ಪಟ್ಟಣ ವ್ಯಾಪ್ತಿಯ ರೆಂಕೆದಗುತ್ತುವಿನ ಒಂದು ಎಕ್ರೆ ಸ್ಥಳದಲ್ಲಿ ಸ್ಥಾಪಿಸಲು ಮುಂದಾಗಿ ಕಾಮಗಾರಿ ಆರಂಭಗೊಂಡಿತ್ತು. ಆದರೆ ಸ್ಥಳೀಯರು ದುರ್ವಾಸನೆ ಬೀರುತ್ತದೆ ಎಂದು ವಿರೋಧಿಸಿದ್ದರು. ಇದರಿಂದ ಕೊಯ್ಯೂರು ತ್ಯಾಜ್ಯಘಟಕ ಪ್ರದೇಶಕ್ಕೆ ಸ್ಥಳಾಂತರಗೊಂಡಿತ್ತು. ಪಟ್ಟಣ ವ್ಯಾಪ್ತಿಯಲ್ಲಿ ಇದ್ದಿದ್ದರೆ ಸಾಗಾಟ ವೆಚ್ಚ ಉಳಿತಾಯ ಸಹಿತ ಸ್ಥಳೀಯವಾಗಿ ನೀರಿನ ಮರುಬಳಕೆಗೂ ಪ್ರಯೋಜನವಾಗುತ್ತಿತ್ತು.

ಶೀಘ್ರ ಲೋಕಾರ್ಪಣೆ
ನಗರ ವ್ಯಾಪ್ತಿಯಲ್ಲಿ ಹಿಂದೆ 5 ಸೆಂಟ್ಸ್‌ವರೆಗೆ ಮನೆಗೆ ನಿವೇಶನ ನೀಡಲಾಗುತ್ತಿತ್ತು. ಭೂಮಿಯ ಕೊರತೆ ಉಂಟಾದಂತೆ ಪ್ರಸಕ್ತ ಒಂದೂವರೆ ಸೆಂಟ್ಸ್‌ ನೀಡುವಂತಾಗಿದೆ. ಇಷ್ಟು ಸಣ್ಣ ಸ್ಥಳದಲ್ಲಿ ಶೌಚಾಲಯದ ಪಿಟ್‌ ನಿರ್ಮಿಸಲು ಕಷ್ಟಸಾಧ್ಯ. ಇದಕ್ಕಾಗಿ ತ್ಯಾಜ್ಯ ನೀರು ಅಂತರ್ಜಲ ಸೇರಿ ಕಲುಷಿತವಾಗದಂತೆ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಶೀಘ್ರವೇ ಲೋಕಾರ್ಪಣೆ ಮಾಡಲಾಗುವುದು.
-ಹರೀಶ್‌ ಪೂಂಜ, ಶಾಸಕರು

ಜಿಲ್ಲೆಯಲ್ಲಿ ಪ್ರಥಮ ಪ್ರಯೋಗ
ಹಸುರು ಪೀಠ ನ್ಯಾಯಾಲಯದಂತೆ ಮಲಿನ ನೀರು ಸಮುದ್ರ ಹಾಗೂ ಹೊಳೆಗೆ ಬಿಡುವಂತಿಲ್ಲ. ಅದರ ಆದೇಶದಂತೆ ಪ.ಪಂ.ನ ದೂರದೃಷ್ಟಿ ಯೋಜನೆಯಾಗಿ ಮಲಿನ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಯುಜಿಡಿ ನೀರಿನ ಸಂಸ್ಕರಣೆ ಜಿಲ್ಲೆಯಲ್ಲಿದೆ. ಆದರೆ ಈ ಪ್ರಯೋಗ ಜಿಲ್ಲೆಯಲ್ಲೇ ಪ್ರಥಮವಾಗಿದೆ. ಮುಂದೆ ಶೌಚಾಲಯ ಅಥವಾ ತ್ಯಾಜ್ಯ ನೀರನ್ನು ನೇರವಾಗಿ ಚರಂಡಿಗೆ ಬಿಟ್ಟಲ್ಲಿ ಕ್ರಮ ವಹಿಸಲಾಗುತ್ತದೆ.
– ರಾಜೇಶ್‌, ಪ.ಪಂ. ಮುಖ್ಯಾಧಿಕಾರಿ

ಚೈತ್ರೇಶ್‌ ಇಳಂತಿಲ

 

ಟಾಪ್ ನ್ಯೂಸ್

MI

ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್

1-sadsadsadasd

ಅಮೃತಪಾಲ್ ಸಿಂಗ್ ಜನಪ್ರಿಯತೆಗಾಗಿ ಮಂದೀಪ್ ಸಂಘಟನೆ ಪಿಗ್ಗಿಬ್ಯಾಕ್ ಮಾಡಿದನೇ?

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

1-sfsdf-sfsdfd

ಸ್ವಿಸ್ ಓಪನ್ ಸೂಪರ್ ಪ್ರಶಸ್ತಿ ಗೆದ್ದ ಸಾಯಿರಾಜ್-ಚಿರಾಗ್ ಜೋಡಿ

c-t-ravi

ಚಿಕ್ಕಮಗಳೂರಿನಲ್ಲಿ ಹಿಂದುತ್ವ ಹಾಗೂ ಅಭಿವೃದ್ದಿಯೇ ಗೆಲ್ಲುವುದು: ಸಿ.ಟಿ.ರವಿ

ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…

ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…

ಗೋರ್ಟಾ (ಬಿ) ಗ್ರಾಮದಲ್ಲಿ ಪಟೇಲ್ ಪ್ರತಿಮೆ ಮತ್ತು 103 ಅಡಿ ಧ್ವಜ ಸ್ತಂಭ ಲೋಕಾರ್ಪಣೆ

ಗೋರ್ಟಾ (ಬಿ) ಗ್ರಾಮದಲ್ಲಿ ಪಟೇಲ್ ಪ್ರತಿಮೆ ಮತ್ತು 103 ಅಡಿ ಧ್ವಜ ಸ್ತಂಭ ಲೋಕಾರ್ಪಣೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಸಂಪಾಜೆ; ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಸಂಪಾಜೆ; ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

puttur

ಮದಡ್ಕ ತೋಟಗಾರಿಕಾ ಕ್ಷೇತ್ರದಲ್ಲಿ ವಿನೂತನ ಪ್ರಯತ್ನ : ಉತ್ಪನ್ನ ಮಾರಾಟಕ್ಕೆ ಮಳಿಗೆ ಪ್ರಯೋಗ

ಸುಳ್ಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟಿಸ್‌

ಸುಳ್ಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟಿಸ್‌

belthangadi

ಬೆಳ್ತಂಗಡಿ: ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಸಿದ್ಧ

MUST WATCH

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

ಹೊಸ ಸೇರ್ಪಡೆ

MI

ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್

1-sadsadsadasd

ಅಮೃತಪಾಲ್ ಸಿಂಗ್ ಜನಪ್ರಿಯತೆಗಾಗಿ ಮಂದೀಪ್ ಸಂಘಟನೆ ಪಿಗ್ಗಿಬ್ಯಾಕ್ ಮಾಡಿದನೇ?

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಸಂಪಾಜೆ; ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಸಂಪಾಜೆ; ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.