Elephant Attack: ಬೆಳ್ತಂಗಡಿ: ಸಂತ್ರಸ್ತರಿಗೆ ತಲಾ 60 ಸಾ.ರೂ. ಪರಿಹಾರ
Team Udayavani, Dec 2, 2023, 12:00 AM IST
ಬೆಳ್ತಂಗಡಿ: ನೆರಿಯ-ಕಕ್ಕಿಂಜೆ ರಸ್ತೆಯ ಬಯಲು ಬಸ್ತಿಯಲ್ಲಿ ಕಳೆದ ನ. 27ರ ರಾತ್ರಿ ಒಂಟಿ ಸಲಗವು ಕಾರಿಗೆ ಹಾನಿ ಮಾಡಿ ಇಬ್ಬರನ್ನು ಗಾಯಗೊಳಿಸಿದ ಘಟನೆಯ ಬಳಿಕ ಆನೆಯು ಮಿಯಾರು ಅರಣ್ಯವಾಗಿ ಅರಸಿನಮಕ್ಕಿ, ಶಿಶಿಲದಿಂದ ಶಿರಾಡಿ ಘಾಟಿ ಅರಣ್ಯಪ್ರದೇಶದತ್ತ ಸಂಚರಿಸಿ ರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಮೂವರಿಗೆ ತಲಾ 60 ಸಾವಿರ ರೂ. ಹಾಗೂ ವಾಹನ ಜಖಂಗೊಂಡಿರುವುದರಿಂದ 20 ಸಾವಿರ ರೂ. ಪರಿಹಾರ ಅರಣ್ಯ ಇಲಾಖೆಯಿಂದ ಸಿಗಲಿದೆ. ಈ ಹಿನ್ನೆಲೆಯಲ್ಲಿ ಗಾಯಗೊಂಡವರ ಅರ್ಜಿ ಪಡೆದು ಪರಿಹಾರಕ್ಕಾಗಿ ಅರಣ್ಯ ಇಲಾಖೆ ಆನ್ಲೈನ್ ನೋಂದಣಿ ಮಾಡಿದೆ ಎಂದು ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ನೆರಿಯ, ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ, ಮುಂಡಾಜೆ, ಕಲ್ಮಂಜ, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಚಿಬಿದ್ರೆ, ಶಿಶಿಲ, ಶಿಬಾಜೆ, ಹತ್ಯಡ್ಕ ಮೊದಲಾದ ಗ್ರಾಮಗಳಲ್ಲಿ ನಿರಂತರ ಕೃಷಿ ಹಾನಿ ಮಾಡುತ್ತಿರುವ ಕಾಡಾನೆಗಳು ಇದೀಗ ಜನ-ವಾಹನಗಳ ಮೇಲು ದಾಳಿ ಮುಂದಾಗಿರುವುದು, ಮನೆ ಪರಿಸರ ಸುತ್ತ ಸುಳಿದಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಬ್ಬರ್ ಟ್ಯಾಪಿಂಗ್ ಸಹಿತ ಮುಂಜಾನೆ ಕೆಲಸಕ್ಕೆ ಸಾಗುವ ಹೈನುಗಾರರು ಹಾಗೂ ರಾತ್ರಿ ಕರ್ತವ್ಯದಿಂದ ಮರಳುವವರು ಭಯ ದಲ್ಲೇ ಸಂಚರಿಸುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್