Belthangady ತಾಲೂಕಿನಲ್ಲಿ ಉತ್ತಮ ಮಳೆ: ಮುಂಡಾಜೆ ಪೇಟೆ ಅಂಗಡಿಗೆ, ಮನೆಗಳಿಗೆ ನುಗ್ಗಿದ ನೀರು
Team Udayavani, Oct 9, 2023, 6:11 PM IST
ಬೆಳ್ತಂಗಡಿ: ತಾಲೂಕಿನಲ್ಲಿ ಸೋಮವಾರ ಸಂಜೆ ಸಿಡಿಲು, ಗುಡುಗು ಸಹಿತ ಉತ್ತಮ ಮಳೆ ಸುರಿಯಲಾರಂಬಿಸಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ ಪುಂಜಾಲಕಟ್ಟೆ- ಚಾರ್ಮಾಡಿ ಕಾಮಗಾರಿಯಿಂದ ಮಳೆ ನೀರು ಮುಂಡಾಜೆ ಪೇಟೆಯ ಕೆಲ ಅಂಗಡಿ, ಮನೆಗಳಿಗೆ ನುಗ್ಗುತ್ತಿರುವ ದೃಶ್ಯ ಕಂಡುಬಂದಿದೆ.
ಮುಂಡಾಜೆ, ಕಡಿರುದ್ಯಾವರ, ಕಕ್ಕಿಂಜೆ, ಚಾರ್ಮಾಡಿ ವಿಪರೀತ ಗುಡುಗು ಸಹಿತ ಮಳೆಯಾಗಿದ್ದು, ರಸ್ತೆಗಳೆಲ್ಲ ನೀರು ತುಂಬಿ ಕೆರೆಯಂತಾಗಿದೆ.
ಇದನ್ನೂ ಓದಿ:World Cup 2023: ತಂಡದೊಂದಿಗೆ ಪ್ರಯಾಣಿಸದ ಗಿಲ್; ಎರಡನೇ ಪಂದ್ಯಕ್ಕೂ ಅಲಭ್ಯ
ಹೆದ್ದಾರಿ ಕಾಮಗಾರಿ ಹಿನ್ನೆಲೆ ರಸ್ತೆ ಕೆಸರಮಯವಾಗಿತ್ತು. ಇದೀಗ ಮಳೆಯಿಂದ ನೀರು ಏಕಾಏಕಿ ಹರಿದು ಮನೆಗಳಿಗೆ ನುಗ್ಗುತ್ತಿರುವ ದೃಶ್ಯ ಕಂಡುಬಂದಿದೆ.