ಇಚ್ಲಂಪಾಡಿಯಲ್ಲಿ ಗುಡ್ಡ ಕುಸಿತ: ಆಟೋರಿಕ್ಷಾ, 4 ದ್ವಿಚಕ್ರ ವಾಹನಕ್ಕೆ ಹಾನಿ
Team Udayavani, Jul 18, 2022, 11:56 PM IST
ಸುಬ್ರಹ್ಮಣ್ಯ: ಇಚ್ಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ ಗುಡ್ಡ ಕುಸಿತಗೊಂಡ ಪರಿಣಾಮ 1 ಆಟೋರಿಕ್ಷಾ ಹಾಗೂ ನಾಲ್ಕು ದ್ವಿಚಕ್ರ ವಾಹನಗಳು ಹಾನಿಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ರವಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಕೊರಮೇರು ನಿವಾಸಿ ನೋಣಯ್ಯ ಗೌಡ ಅವರ ಮನೆಯ ಹಿಂಬದಿಯ ಗುಡ್ಡ ಕುಸಿದಿದ್ದು ಅಲ್ಲಿ ನಿಲ್ಲಿಸಿದ್ದ ಅವರ ಸಹೋದರ ಕೇಶವ ಗೌಡರ ಆಟೋರಿಕ್ಷಾ, ನೋಣಯ್ಯ ಗೌಡರ ಸ್ಕೂಟರ್ ಹಾಗೂ ನೆರೆ ಮನೆಯ ವಸಂತ ಗೌಡರ ಸ್ಕೂಟರ್, ಹೊನ್ನಪ್ಪ ಗೌಡ ಅವರಿಗೆ ಸೇರಿದ ಎರಡು ಸ್ಕೂಟರ್ ಹಾನಿಗೊಂಡಿವೆ.
ಎರಡು ದ್ವಿಚಕ್ರ ವಾಹನಗಳು ಸಂಪೂರ್ಣ ಮಣ್ಣಿನ ಅಡಿಯಲ್ಲಿ ಹೂತುಹೋಗಿದ್ದು ಜೆಸಿಬಿ ಸಹಾಯದಿಂದ ಮಣ್ಣು ತೆರವುಗೊಳಿಸಿ ಅವುಗಳನ್ನು ಹೊರ ತೆಗೆಯಲಾಯಿತು. ಹೊನ್ನಪ್ಪ ಗೌಡ ಹಾಗೂ ವಸಂತ ಗೌಡರು ತಮ್ಮ ಮನೆಯ ರಸ್ತೆ ದುರಸ್ತಿಯಾಗುತ್ತಿದ್ದ ಹಿನ್ನೆಲೆಯಲ್ಲಿ ನೋಣಯ್ಯ ಗೌಡರ ಮನೆಯಲ್ಲಿ ವಾಹನ ನಿಲ್ಲಿಸಿ ಹೋಗಿದ್ದರು. ಮಣ್ಣು ಕುಸಿದಿರುವುದರಿಂದ ನೋಣಯ್ಯ ಗೌಡರ ಮನೆಗೂ ಹಾನಿಯಾಗಿದೆ.
ಕೌಕ್ರಾಡಿ ಗ್ರಾ.ಪಂ.ಸದಸ್ಯ ವಿಶ್ವನಾಥ ಗೌಡ ಕೊರಮೇರು, ಇಚ್ಲಂಪಾಡಿ ಗ್ರಾಮ ಸಹಾಯಕ ಅನಿಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ