ಬಡವರಿಗೆ ಅನ್ಯಾಯವಾದಲ್ಲಿ ನಗರಸಭೆಗೆ ಬಂದು ಕುಳಿತುಕೊಳ್ಳುವೆ
ಅಧಿಕಾರಿಗಳ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಕೆ
Team Udayavani, May 27, 2023, 3:48 PM IST
ಪುತ್ತೂರು: ನಗರಸಭೆ ವ್ಯಾಪ್ತಿಯ ಬಡವರಿಗೆ ಅನ್ಯಾಯವಾದಲ್ಲಿ ನಗರಸಭೆ ಕಚೇರಿಗೆ ಬಂದು ಕುಳಿತು ಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ. ನಾನು ಅಧಿಕಾರದ ಆಸೆಗೋಸ್ಕರ ಜನಪ್ರತಿ ನಿಧಿಯಾದವನಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಘಟನೆ ಪುತ್ತೂರು ನಗರ ಸಭೆಯಲ್ಲಿ ನಡೆದಿದೆ.
ಶುಕ್ರವಾರ ನಗರಸಭೆಯಲ್ಲಿ ಅಭಿವೃದ್ಧಿ ಕೆಲಸಗಳ ಕುರಿತು ಅವರು ಅಧಿಕಾರಿಗಳ ಜತೆಗೆ ಸಭೆ ನಡೆಸಿದರು. ಜನರಿಗೆ ಸರ ಕಾರದ ಸವಲತ್ತುಗಳು ನೇರವಾಗಿ ದೊರಕಿಸಿ ಕೊಡಬೇಕು ಅನ್ನುವುದೇ ನನ್ನ ಮೂಲ ಉದ್ದೇಶವಾಗಿದ್ದು, ಅಧಿಕಾರಿಗಳು ಜನರಿಗೆ ಪ್ರಾಮಾಣಿಕ ಸೇವೆ ನೀಡಬೇಕು ಎಂದರು.
ಅಧಿಕಾರಿಗಳ ಸಹಕಾರವಿಲ್ಲದೆ ಯಾವುದೇ ಕೆಲಸ ಸಾಧ್ಯವಿಲ್ಲ. ಎಲ್ಲವನ್ನೂ ಕಾನೂನಿನಿಂದಲೇ ನೋಡಿದರೆ ಜನ ಸ್ಪಂದನೆಯ ಸೇವೆ ನೀಡಲು ಸಾಧ್ಯವಿಲ್ಲ. ಮನುಷ್ಯತ್ವದ ಸ್ಪಂದನೆಯೂ ಇರಲಿ ಎಂದು ಸಲಹೆ ನೀಡಿದರು. ಪೌರಾಯುಕ್ತ ಮಧು ಎಸ್. ಮನೋ ಹರ್ ಅವರಿಂದ ಶಾಸಕರು ಸಮಗ್ರ ಮಾಹಿತಿ ಪಡೆದು ಅಭಿವೃದ್ಧಿ ಸಾಧ್ಯತೆ ಗಳ ಕುರಿತು ಅವಲೋಕನ ನಡೆಸಿದರು.
ಚರಂಡಿಗಳ ದುರಸ್ತಿ: ಸೂಚನೆ
ನಗರದ ಚರಂಡಿಗಳ ಅಭಿವೃದ್ಧಿ ಕುರಿತು ಮಾಹಿತಿ ಪಡೆದುಕೊಂಡ ಶಾಸಕರು, ಈ ಕುರಿತು ಯೋಜನೆಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 2018-19 ರಲ್ಲಿ ಯುಜಿಡಿ ಯೋಜನೆಯಲ್ಲಿ ರೂ. 154 ಕೋಟಿಯ ಡಿಪಿಆರ್ ರೂಪಿಸಲಾಗಿತ್ತು. ಯೋಜನಾ ವೆಚ್ಚ ಅಧಿಕವಾದ್ದರಿಂದ ಮತ್ತು 40 ಕಿ.ಮೀ. ಜಾಗ ಒತ್ತುವರಿ ಮಾಡಬೇಕಾದ ಅಗತ್ಯ ಬಿದ್ದ ಕಾರಣ ಯೋಜನೆ ಮುಂದುವರೆಯಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಗರೋತ್ಥನಾದಲ್ಲಿ 25 ಕೋಟಿಯ ಯೋಜ ನೆಗಳಿಗೆ ಟೆಂಡರ್ ಆಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಶಾಸಕರ ಗಮನಕ್ಕೆ ತಂದರು. ನಗರಸಭೆಗೆ ಸಂಬಂಧಿಸಿದ ವಿವಿಧ ಅಧಿಕಾರಿಗಳು, ಸಿಬಂದಿ ವರ್ಗದವರು ಸಭೆಯಲ್ಲಿ ಪಾಲ್ಗೊಂಡರು.
ಸೂರು ಸಮಸ್ಯೆ
ನಿವೇಶನಕ್ಕಾಗಿ ಸಾವಿರಾರು ಅರ್ಜಿಗಳು ಬಾಕಿ ಇರುವ ಬಗ್ಗೆ ಶಾಸಕರಿಗೆ ಉತ್ತರಿ ಸಿದ ಪೌರಾಯುಕ್ತರು, ಸುಮಾರು 1978 ಅರ್ಜಿಗಳು ನಿವೇಶನ ಕೋರಿ ಸಲ್ಲಿಕೆಯಾಗಿವೆ. 1.8 ಎಕ್ರೆ ಜಾಗದಲ್ಲಿ 68 ನಿವೇಶನ ಗುರುತಿಸಲಾಗಿದೆ. ಸಿಂಗಾಣಿಯಲ್ಲಿ ಪೌರಕಾರ್ಮಿಕರಿಗೆ ವಸತಿ ನಿರ್ಮಾಣಕ್ಕೆ ಜಾಗ ಗುರುತಿಸ ಲಾಗಿದೆ. ಉಳಿದಂತೆ ಹಲವು ಜಾಗಗ ಳನ್ನು ಗುರುತಿಸಿದರೂ ವಿವಿಧ ಕಾರಣ ಗಳಿಗೆ ನೀಡಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದರು.
ಸಿಬಂದಿ ಕೊರತೆ
ನಗರಸಭೆಗೆ 236 ಮಂದಿ ಅಧಿಕಾರಿ, ಸಿಬಂದಿಯ ಆವಶ್ಯಕತೆ ಇದೆ. ಆದರೆ ಪ್ರಸ್ತುತ 38 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 199 ಸಿಬಂದಿ ಕೊರತೆ ಇದೆ. 11 ಮಂದಿ ಖಾಯಂ ಪೌರ ಕಾರ್ಮಿಕರಿದ್ದು, 45 ಮಂದಿಯ ಖಾಯಂ ಮಾಡಲು ಡಿಸಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅದರಲ್ಲಿ 34 ಮಂದಿಯನ್ನು ಆಯ್ಕೆ ಮಾಡಲಾಗಿದೆ. 5 ಮಂದಿ ಎಂಜಿನಿ ಯರ್ ಹುದ್ದೆಗಳಲ್ಲಿ 3 ಹುದ್ದೆ ಮಾತ್ರ ಭರ್ತಿಯಾಗಿದ್ದು, ಅದರಲ್ಲೂ ಇಬ್ಬರಿಗೆ ಬೇರೆ ತಾ| ನ ಜವಾಬ್ದಾರಿ ಇದೆ ಎಂದು ಪೌರಾಯುಕ್ತರು ಶಾಸಕರ ಗಮನಕ್ಕೆ ತಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್