ಕೊಡ್ಮಾಣ್‌ : ರಸ್ತೆ ಸಮಸ್ಯೆಗಳೇ ಗ್ರಾಮದ ಸವಾಲು


Team Udayavani, Aug 6, 2021, 3:40 AM IST

ಕೊಡ್ಮಾಣ್‌ : ರಸ್ತೆ ಸಮಸ್ಯೆಗಳೇ ಗ್ರಾಮದ ಸವಾಲು

ಹಳ್ಳಿಗಳೇ ನಮ್ಮ ದೇಶದ ಜೀವಾಳ. ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ರಾಜ್ಯ, ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮಗಳ ಸಮಸ್ಯೆಗಳ ಬಗ್ಗೆ ಆಡಳಿತ ವರ್ಗ, ಜನ ಪ್ರತಿನಿಧಿಗಳ ಗಮನ ಸೆಳೆಯಲು “ಉದಯವಾಣಿ ಸುದಿನ’ವು “ಒಂದು ಊರು-ಹಲವು ದೂರು’ ಎಂಬ ಹೊಸ ಸರಣಿಯನ್ನು ಆರಂಭಿಸಿದೆ. ಕೊಡ್ಮಾಣ್‌ ಗ್ರಾಮವನ್ನು ಕಾಡುವ  ಪ್ರಮುಖ ಸಮಸ್ಯೆಗಳಲ್ಲಿ ರಸ್ತೆಯ ಸಮಸ್ಯೆಯೂ ಒಂದು. ಇದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಂದಿನ ಈ ಸರಣಿಯಲ್ಲಿದೆ.

ಬಂಟ್ವಾಳ: ರಸ್ತೆಯೇ ಈ ಗ್ರಾಮೀಣ ಭಾಗದ ಮೂಲ ಸಮಸ್ಯೆಯಾಗಿದ್ದು, ಹದಗೆಟ್ಟ ರಸ್ತೆಗಳಲ್ಲೇ ಸಂಚರಿಸಬೇಕಾದ ಸ್ಥಿತಿ ಇಲ್ಲಿನ ಜನರದ್ದಾಗಿದೆ. ಇದು ಮೇರಮಜಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಕೊಡ್ಮಾಣ್‌ ಗ್ರಾಮದ ಪರಿಸ್ಥಿತಿಯಾಗಿದೆ. ಗ್ರಾಮದಲ್ಲಿ ಕೊಂಚ ಮಟ್ಟಿನ ನೀರಿನ ಸಮಸ್ಯೆ ಇದ್ದರೂ, ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ರಸ್ತೆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.

ಕೊಡ್ಮಾಣ್‌ಪ್ರದೇಶವು ತೀರಾ ಹಳ್ಳಿ ಪ್ರದೇಶವಾಗಿದ್ದು, ಕೃಷಿ ಈ ಭಾಗದ ಮಂದಿಯ ಪ್ರಮುಖ ಕಸುಬಾಗಿದೆ. ಉಳಿದಂತೆ ಹೇಳಿಕೊಳ್ಳುವ ವಾಣಿಜ್ಯ ಚಟುವಟಿಕೆಗಳು ಇಲ್ಲಿಲ್ಲ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಿವೆ. ಹೆಚ್ಚಿನ ಆದಾಯಗಳು ಗ್ರಾಮಕ್ಕೆ ಇಲ್ಲದೇ ಇರುವುದರಿಂದ ಸರಕಾರಿ ಮಟ್ಟದಿಂದ ಅನು ದಾನ ಬಂದರಷ್ಟೇ ಅಭಿವೃದ್ಧಿ ಎನ್ನುವ ಸ್ಥಿತಿ.

ಕೊಡ್ಮಾಣ್‌ಗ್ರಾಮದ ಗ್ರಾ.ಪಂ.ವ್ಯಾಪ್ತಿಯು ಬಂಟ್ವಾಳ ತಾಲೂಕಿಗೆ ಸೇರಿದ್ದರೂ, ಈ ಪ್ರದೇಶವು ಮಂಗಳೂರು ವಿಧಾನಸಭೆ ಕ್ಷೇತ್ರಕ್ಕೆ ಸೇರುತ್ತದೆ. ಹಿಂದೆ ಇದು ವಿಟ್ಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಆ ಕ್ಷೇತ್ರ ವಿಲೀನಗೊಂಡ ಬಳಿಕ ಇಲ್ಲಿನ ಮೂರು ಗ್ರಾ.ಪಂ.ಗಳು ಮಂಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬಂದಿವೆ. ಸಾಮಾನ್ಯವಾಗಿ ಉದ್ದಿಮೆಗಳು, ವಾಣಿಜ್ಯ ಚಟುವಟಿಕೆಗಳು ಇದ್ದಾಗ ಅವುಗಳ ತೆರಿಗೆ, ಇತರ ನೆರವಿನಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ.

ಆದರೆ ಕೊಡ್ಮಾಣ್‌ಗ್ರಾಮದಲ್ಲಿ ಅಂತಹ ಉದ್ದಿಮೆಗಳು ಇಲ್ಲದೇ ಇರುವುದರಿಂದ ಎಲ್ಲ ಮೂಲ ಸೌಕರ್ಯಕ್ಕೂ ಸರಕಾರವನ್ನೇ ಕಾಯಬೇಕಾದ ಸ್ಥಿತಿ ಇದೆ. ಸರಕಾರಿ ವ್ಯವಸ್ಥೆಯ ಪ್ರಕಾರ ಪುದು ಪ್ರಾಥಮಿಕ ಆರೋಗ್ಯ ಕೇಂದ್ರವು ಈ ಗ್ರಾಮಕ್ಕೆ ಸಂಬಂಧಪಟ್ಟಿದೆ.ಆದರೆ ಗ್ರಾಮದ ಒಂದಷ್ಟು ಮಂದಿ ತಮ್ಮ ಆರೋಗ್ಯ ಸಂಬಂಧಿ ವಿಚಾರಗಳಿಗೆ ಬೆಂಜನಪದವು ಆರೋಗ್ಯ ಕೇಂದ್ರವನ್ನೂ ಆಶ್ರಯಿಸುತ್ತಾರೆ. ತಮ್ಮದೇ ಗ್ರಾ.ಪಂ. ಮೇರಮಜಲಿನಲ್ಲಿ ಆರೋಗ್ಯ ಕೇಂದ್ರಬೇಕು ಎಂಬ ಬೇಡಿಕೆಯೂ ಇದೆ.

 ರಸ್ತೆ ಅಭಿವೃದ್ಧಿಯ ಸವಾಲು:

ಗ್ರಾಮದ ಮೇರಮಜಲು ಕ್ರಾಸ್‌ ಕೊಡ್ಮಾಣ್‌ಮದಕ ರಸ್ತೆಯು ಸುಮಾರು 3 ಕಿ.ಮೀ. ಉದ್ದವಿದ್ದು, ಸಂಚಾರಕ್ಕೆ ತೀರಾ ದುಸ್ತರವಾಗಿದೆ. ಈ ರಸ್ತೆಯ ಕೊಂಚ ಭಾಗಕ್ಕೆ ಕಾಂಕ್ರೀಟ್‌ ಕಾಮಗಾರಿ ನಡೆದಿದ್ದರೂ, ಬಹುತೇಕ ಭಾಗ ಸಂಚಾರಿಸಲಾರದ ಪರಿಸ್ಥಿತಿಗೆ ತಲುಪಿದೆ. ಕೊಟ್ಟಿಂಜ-ಅಮ್ಮೆಮಾರ್‌ ರಸ್ತೆ, ಪೂಪಾಡಿಕಲ್ಲು-ಮೇರಮಜಲು ರಸ್ತೆಗಳು ಕೂಡ ಹದಗೆಟ್ಟಿವೆ.

ಜತೆಗೆ ಬಾರೆಕ್ಕಾಡು ರಸ್ತೆಯೂ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅದರ ಅಭಿವೃದ್ಧಿಯ ಕೂಗು ಕೂಡ ಇದೆ. ಇದು ಗ್ರಾಮದ ಪ್ರಮುಖ ರಸ್ತೆಗಳ ಕಥೆಯಾದರೆ ಇನ್ನು ಹಲವು ರಸ್ತೆಗಳು ಇದೇ ರೀತಿ ಅಭಿವೃದ್ಧಿಗಾಗಿ ಕಾಯುತ್ತಿವೆ. ಒಂದಷ್ಟು ರಸ್ತೆಗಳು ಸಣ್ಣ ಅನುದಾನದ ಮೂಲಕ ಅಭಿವೃದ್ಧಿಗೊಂಡಿದ್ದರೂ, ಇನ್ನೂ ಸಾಕಷ್ಟು ಪ್ರದೇಶದ ರಸ್ತೆಗಳು ಅಭಿವೃದ್ಧಿಗೆ ಬಾಕಿ ಇವೆ.

ಕೊಡ್ಮಾಣ್‌ ಗ್ರಾಮದ ಮಧ್ಯೆ ರೈಲ್ವೇ ಟ್ರ್ಯಾಕ್‌ ಹಾದು ಹೋಗಿದ್ದು, ಅದು ಗ್ರಾಮವನ್ನು ಎರಡು ಪಾಲು ಮಾಡಿವೆ. ಒಂದು ಭಾಗದ ಮಂದಿ ಇನ್ನೊಂದು ಭಾಗಕ್ಕೆ ಸಂಚರಿಸ ಬೇಕಾದರೆ ಸುತ್ತು ಬಳಸಿ ಸಾಗಬೇಕಾದ ಸ್ಥಿತಿ ಇದೆ. ಶಾಲೆ, ಗ್ರಾ.ಪಂ. ಸೇರಿ ಇನ್ನಿತರ ಭಾಗಕ್ಕೆ ರೈಲ್ವೇ ಹಳಿ ದಾಟಿ ಬರಬೇಕಿದೆ.

ಶಾಲೆಗೆ ಬೇಕು ಕಟ್ಟಡ :

ಕೊಡ್ಮಾಣ್‌ ಪ್ರದೇಶದಲ್ಲಿ ಒಂದು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಿದ್ದು, ಮುಖ್ಯವಾಗಿ ಇಲ್ಲಿನ ಪ್ರೌಢಶಾಲೆಯು ಸತತವಾಗಿ ಶೇ. 100 ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಹೆಸರು ಪಡೆದುಕೊಂಡಿದೆ. ಫಲಿತಾಂಶ ಉತ್ತಮವಾಗಿದ್ದರೂ, ಶಾಲೆಯ ಕಟ್ಟಡದ ಕೊರತೆ ಇನ್ನೂ ನೀಗಿಲ್ಲ. ಇರುವ ಕಟ್ಟಡಗಳು ಸುಸಜ್ಜಿತವಾಗಿದ್ದರೂ, ಶಾಲೆಯ ಕಚೇರಿ ಕೊಠಡಿಯ ಬೇಡಿಕೆ ಇನ್ನೂ ಹಾಗೇ ಉಳಿದುಕೊಂಡಿದೆ. ಜತೆಗೆ ಗುಣಮಟ್ಟದ ಸುಸಜ್ಜಿತ ಶೌಚಾಲಯ ನಿರ್ಮಾಣವಾಗಬೇಕು ಎಂಬ ಕೂಗು ಕೂಡ ಕೇಳಿ ಬರುತ್ತಿದೆ.

 

ಕಿರಣ್‌ ಸರಪಾಡಿ

 

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.