ಎಸ್‌ಸಿ-ಎಸ್‌ಟಿಗಳ ಭೂಮಿಗಿಲ್ಲ ಕನ್ವರ್ಷನ್‌; ಮನೆ ಕಟ್ಟಲು ಬ್ಯಾಂಕ್‌ ಲೋನ್‌ಗೆ ಪರದಾಟ!


Team Udayavani, Sep 26, 2022, 7:10 AM IST

ಎಸ್‌ಸಿ-ಎಸ್‌ಟಿಗಳ ಭೂಮಿಗಿಲ್ಲ ಕನ್ವರ್ಷನ್‌; ಮನೆ ಕಟ್ಟಲು ಬ್ಯಾಂಕ್‌ ಲೋನ್‌ಗೆ ಪರದಾಟ!

ಸಾಂದರ್ಭಿಕ ಚಿತ್ರ.

ಪುತ್ತೂರು: ಪರಿಶಿಷ್ಟ ಜಾತಿ/ ಸಮುದಾಯದವರಿಗೆ ಸರಕಾರದಿಂದ ಮಂಜೂರಾಗುವ ಭೂಮಿಯನ್ನು ವಸತಿ ಅಥವಾ ವಾಣಿಜ್ಯ ಬಳಕೆಗೆ ಭೂ ಪರಿವರ್ತನೆ (ಕನ್ವರ್ಷನ್‌) ಮಾಡುವ ಅವಕಾಶ ಇಲ್ಲವೆಂಬ ಕಾನೂನು ಅವರ ಪಾಲಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆ ಅನ್ವಯ ಭೂಮಿ ಮಾರಾಟಕ್ಕೆ ಅವಕಾಶವಿಲ್ಲ. ಫ‌ಲಾನುಭವಿಗಳು ಸ್ವಂತ ಬಳಕೆಗೆ ವಸತಿ ಅಥವಾ ವಾಣಿಜ್ಯ ಕಟ್ಟಡ ನಿರ್ಮಿಸಲು ಉದ್ದೇಶಿಸಿದರೂ ಭೂಪರಿವರ್ತನೆಗೆ ಅವಕಾಶ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇಲ್ಲವಾಗಿದೆ. ಒಟ್ಟಿನಲ್ಲಿ ಇಲಾಖೆಗಳು ಕೂಡ ಸಮಸ್ಯೆಗೆ ಪರಿಹಾರ ನೀಡಲಾಗದೆ ಸರಕಾರದ ಕಡೆಗೆ ಬೆರಳು ತೋರಿಸುವ ಸ್ಥಿತಿ ನಿರ್ಮಾಣ ಆಗಿದೆ.

ಸಮಸ್ಯೆ ಏನು?
ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಕೃಷಿ ಬಳಕೆಗಾಗಿ ಸರಕಾರ ಭೂಮಿಯನ್ನು ಮಂಜೂರು ಮಾಡಿರುತ್ತದೆ. ಅದನ್ನು ಅನ್ಯ ಉದ್ದೇಶಗಳಿಗೆ ಬಳಸಲು ಪರಿವರ್ತನೆ ಮಾಡಿದರೆ ಅದು ಬಲಾಡ್ಯರ ಪಾಲಾಗುತ್ತದೆ. ಹೀಗಾಗಿ ಕನ್ವರ್ಷನ್‌ಗೆ ಅವಕಾಶವಿಲ್ಲ ಎಂದು ಸರಕಾರವು ಒಂದು ವರ್ಷದ ಹಿಂದೆ ಆದೇಶ ನೀಡಿತ್ತು.

ಫಲಾನುಭವಿಯು ಸರಕಾರದ ವಸತಿ ಯೋಜನೆಯಡಿ ಅಥವಾ ಸ್ವತಃ ಮನೆ ಕಟ್ಟಲು ಪಂಚಾಯತ್‌ಗೆ ಅರ್ಜಿ ಸಲ್ಲಿಸುವ ಸಂದರ್ಭ ಭೂ ಪರಿವರ್ತನೆ ಪತ್ರ ಸಲ್ಲಿಸಬೇಕು. ಆದರೆ ಜಮೀನಿನ (ಭೂ ನ್ಯಾಯ ಮಂಡಳಿಯಿಂದ ಮಂಜೂರಾತಿ ಹೊರತುಪಡಿಸಿ) ಕನ್ವರ್ಷನ್‌ಗೆ ಅವಕಾಶವೇ ಇಲ್ಲದಿರುವಾಗ ಪತ್ರ ಸಲ್ಲಿಸುವುದೆಲ್ಲಿಂದ? ಜಮೀನನ್ನು ವಾಣಿಜ್ಯ ಬಳಕೆಗಾಗಿ ಭೂ ಪರಿವರ್ತನೆ ಮಾಡಿದರೆ ಜಮೀನಿನ ಮಾರುಕಟ್ಟೆ ಮೌಲ್ಯ ಹೆಚ್ಚಾಗಿ ಬ್ಯಾಂಕ್‌ನಿಂದ ಅಧಿಕ ಸಾಲ ಸೌಲಭ್ಯ ಸಿಗುತ್ತದೆ. ಸರಕಾರದ ಸಹಾಯಧನದಿಂದ ಮಾತ್ರ ಮನೆ ಕಟ್ಟಲು ಸಾಧ್ಯವಾಗದಿರುವಾಗ ಕನ್ವರ್ಷನ್‌ ಆಗಿರುವ ಪತ್ರ ಇರಿಸಿದಲ್ಲಿ ಬ್ಯಾಂಕ್‌ನಿಂದ ಹೆಚ್ಚು ಸಾಲ ದೊರೆತು ಅನುಕೂಲವಾಗುತ್ತಿತ್ತು. ಆದರೆ ಈ ಸೌಲಭ್ಯವನ್ನು ಅವರು ಪಡೆಯಲಾಗುತ್ತಿಲ್ಲ.

ಭೂ ಪರಿವರ್ತನೆ ಕಡ್ಡಾಯ ಬೇಕು
ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಣಿಜ್ಯ ಅಥವಾ ವಾಸ್ತವ್ಯ ಆಧಾರಿತ ಕಟ್ಟಡ ನಿರ್ಮಿಸಲು ಆ ಸ್ಥಳ ಕನ್ವರ್ಷನ್‌ ಆಗಿರಬೇಕು. ಬಳಿಕ ಗ್ರಾ.ಪಂ.ನಲ್ಲಿ 9/11ಎಗೆ ಅರ್ಜಿ ಸಲ್ಲಿಸಬೇಕು. ಕನ್ವರ್ಷನ್‌ ನಕ್ಷೆ, ಆದೇಶ ಸಹಿತ ಇತರ ದಾಖಲೆಯೊಂದಿಗೆ ಫಲಾನುಭವಿಯು ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ ಬಳಿಕ “ಇ ಸ್ವತ್ತು’ ಸಾಫ್ಟ್ವೇರ್‌ ಮೂಲಕ ಗ್ರಾ.ಪಂ. ಸಿಬಂದಿ ಅಪ್‌ಲೋಡ್‌ ಮಾಡುತ್ತಾರೆ. 9/11 “ಎ’ ಇಲ್ಲದೆ ಪಂಚಾಯತ್‌ಗೆ ಕಟ್ಟಡ ಪರವಾನಿಗೆ ಪತ್ರಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಕಟ್ಟಡ ಪರವಾನಿಗೆ, 9/11 ಇಲ್ಲದೆ ಸಾಲಕ್ಕೆ ಅರ್ಜಿ ಸಲ್ಲಿಸಲಾಗದು. ಪರವಾನಿಗೆ ಪತ್ರ ಇಲ್ಲದೆ ಸರಕಾರದ ಸಹಾಯಧನದಲ್ಲಿ ನಿರ್ಮಿಸಲಾಗುವ ಮನೆ ಸಹಿತ ಯಾವುದೇ ಕಟ್ಟಡ ನಿರ್ಮಾಣ ಆರಂಭಿಸಲಾಗುತ್ತಿಲ್ಲ.

ಭೂ ಪರಿವರ್ತನೆ ಇಲ್ಲದೆ ಮನೆ ಕಟ್ಟಲು, ಸಾಲ ಪಡೆಯಲು ಅಡ್ಡಿಯಾಗಿ ದಲಿತರು ಸವಲತ್ತಿಗಾಗಿ ಕಚೇರಿ ಕಚೇರಿ ಅಲೆದಾಡುವ ಸ್ಥಿತಿ ಉಂಟಾಗಿದೆ. ಸರಕಾರವು ಎಸ್‌ಸಿ-ಎಸ್‌ಟಿಗಳಿಗೆ ಕಟ್ಟಡ ಪರವಾನಿಗೆಗೆ, ಬ್ಯಾಂಕ್‌ ಲೋನ್‌ಗೆ ಭೂ ಪರಿವರ್ತನೆ ಪತ್ರ ಕಡ್ಡಾಯ ಅಲ್ಲ ಎಂಬ ನಿಯಮ ಜಾರಿಗೆ ತರಬೇಕು ಅಥವಾ ಭೂ ಪರಿವರ್ತನೆಗೆ ಅವಕಾಶ ನೀಡಬೇಕು.
– ಮುಖೇಶ್‌ ಕೆಮ್ಮಿಂಜೆ
ಮಾಜಿ ಸದಸ್ಯರು ನಗರಸಭೆ

ಭೂ ಪರಿವರ್ತನೆ ಪತ್ರ ಇಲ್ಲದೆ ಎಸ್‌ಸಿ-ಎಸ್‌ಟಿ ವರ್ಗಕ್ಕೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದೆ. ಒಂದೆರಡು ಜಿಲ್ಲೆಗಳಿಗೆ ಮಾತ್ರ ನಿಯಮ ಸಡಿಲಿಕೆ ಮಾಡಿ ಸುತ್ತೋಲೆ ಹೊರಡಿಸಲು
ಅವಕಾಶ ಇಲ್ಲ. ನಿಯಮಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕಾನೂನು ವಿಭಾಗದ ಅಭಿಪ್ರಾಯ ಪಡೆಯಲು ಚಿಂತನೆ ನಡೆದಿದೆ. ಭೂ ಪರಿವರ್ತನೆಗೆ ಅವಕಾಶ ನೀಡಲು ಸರಕಾರವು ಅನುಮತಿ ನೀಡುವ ವಿಚಾರವು ಪರಿಶೀಲನೆಯ ಹಂತದಲ್ಲಿದೆ.
– ಸಿ. ಬಲರಾಮ್‌, ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ, ಕರ್ನಾಟಕ ಸರಕಾರ

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

udAgricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Agricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

Sullia: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ 2ವರ್ಷ: ಈವರೆಗೂ 7ಮಂದಿಯ ಪತ್ತೆಯೇ ಆಗಿಲ್ಲ!

Sullia: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ 2ವರ್ಷ: ಈವರೆಗೂ 7ಮಂದಿಯ ಪತ್ತೆಯೇ ಆಗಿಲ್ಲ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.