ತ್ರಿಭಾಷೆಯ ʼಕರಿಹೈದ ಕರಿ ಅಜ್ಜʼ ಚಲನಚಿತ್ರಕ್ಕೆ ಮುಹೂರ್ತ
ಪರಶುರಾಮನ ಸೃಷ್ಟಿಯ ನಾಡಲ್ಲಿ ಕೊರಗಜ್ಜನ ಆಶೀರ್ವಾದವಿದೆ
Team Udayavani, Nov 7, 2022, 3:56 PM IST
ಬೆಳ್ತಂಗಡಿ: ಅವಿಭಜಿತ ದ.ಕ.ಜಿಲ್ಲೆ ಪರಶುರಾಮ ಸೃಷ್ಟಿಯ ನಾಡಿನಲ್ಲಿ ಕೊರಗಜ್ಜ ದೈವದ ಆಶೀರ್ವಾದದೊಂದಿಗೆ ಮೂಡಿ ಬರುತ್ತಿರುವ ಸಿನಿಮಾ ಬೆಳ್ತಂಗಡಿ ಕ್ಷೇತ್ರದಲ್ಲಿ ಮುಹೂರ್ತ ನೆರವೇರಿರುವುದು ಹರ್ಷ ತಂದಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲಂಸ್ ತ್ರಿವಿಕ್ರಮ್ ಬೆಳ್ತಂಗಡಿ ಅರ್ಪಿಸುವ ʼಕರಿಹೈದ ಕರಿ ಅಜ್ಜʼ ಚಲನಚಿತ್ರಕ್ಕೆ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಿ ಮಾತನಾಡಿದರು.
ಮೂರು ಭಾಷೆಯಲ್ಲಿ ಯಶಸ್ವಿಯಾಗಲಿ. ತುಳುನಾಡಿನ ಮಂದಿ ದಕ್ಷಿಭಾರತದಲ್ಲಿ ಹೆಸರುವಾಸಿಯಾಗಿದ್ದರು. ಆದರೆ ಕಾಂತಾರ ಸಿನೆಮಾದ ಮೂಲಕ ನಮ್ಮ ಸಂಸ್ಕೃತಿಯನ್ನು ಗೌರವಿಸಿದ್ದಾರೆ. ಹಾಗೆಯೇ ಕರಿಅಜ್ಜ ಚಲನಚಿತ್ರ ಜಗತ್ತಿನಾದ್ಯಂತ ಪಸರಿಸಲಿ ಎಂದು ಹಾರೈಸಿದರು.
ಶಾಸಕ ಹರೀಶ್ ಪೂಂಜ ಕ್ಯಾಮರಾ ಚಾಲನೆ ನೀಡಿದರು. ಕಮಲಾ ಸಪಲ್ಯ ಕ್ಲಾಪ್ ಮಾಡಿದರು. ಸಿನೆಮಾ ಕನ್ನಡ, ತುಳು, ಮಳೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ಕನ್ನಡದ ಹೆಸರಾಂತ ನಟಿಯರಾದ ತಾರಾ ಅನುರಾಧ, ಭವ್ಯಾ, ಹಾಲಿವುಡ್ ನಟ ಕಬೀರ್ ಬೇಡಿ ನಟಿಸಲಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರು, ಬಂಗಾಡಿ ಎರ್ಮಾಯಿ ಫಾಲ್ಸ್, ಬಳ್ಳಮಂಜದ ಪೇರೂರು ಹಾಗೂ ಇತರೆಡೆ ಶೂಟಿಂಗ್ ನಡೆಯಲಿದ್ದು, ಡಿಸೆಂಬರ್ ಒಳಗಾಗಿ ಚಲನಚಿತ್ರ ಪೂರ್ಣಗೊಂಡು ಮುಂದಿನ ಏಪ್ರಿಲ್ ನಲ್ಲಿ ತೆರೆಕಾಣಲಿದೆ ಎಂದು ನಿರ್ಮಾಪಕ ತ್ರಿವಿಕ್ರಮ್ ಉದಯವಾಣಿಗೆ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಅನುವಂಶಿಯ ಆಡಳಿತ ಮೊಕ್ತೇಸರ ಡಾ.ಎಂ.ಹರ್ಷ ಸಂಪಿಗೆತ್ತಾಯ, ಕಮಲಾ ಸಪಲ್ಯ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಮಚ್ಚಿನ ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ವಿದ್ಯಾಧರ ಶೆಟ್ಟಿ, ನಿರ್ದೇಶಕ ಸುಧೀರ್ ಅತ್ತಾವರ,
ನಟ ಭರತ್ ಸೂರ್ಯ, ನಟಿ ರಿತಿಕಾ, ಮಾಸ್ಟರ್ ಹರಿ, ಅಸೋಸಿಯೇಟ್ ಡೈರೆಕ್ಟರ್ ಮಧು ಮತ್ತು ಶ್ಯಾಮ್, ಸಿನಿಮಾಟೋಗ್ರಾಫರ್ ಪವನ್ ಕುಮಾರ್, ಗಣೇಶ್ ಕೆಳಮನೆ, ಮ್ಯಾನೇಜರ್ ಶಶಾಂಕ್ ಕೋಡಿ, ಸಂಗೀತ ಕೃಷ್ಣ ರವಿದಾಸ್ ಉಪಸ್ಥಿರಿದ್ದರು. ಚೇತನ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ