ನೆಟ್ಟಣದ ಹಳೆ ಮುಳುಗು ಸೇತುವೆ ತೆರವು
ಎರಡು ವರ್ಷಗಳ ಹಿಂದೆ ನೂತನ ಸೇತುವೆ ಸಂಚಾರಕ್ಕೆ ಮುಕ್ತ
Team Udayavani, Jan 22, 2022, 5:32 PM IST
ಸುಬ್ರಹ್ಮಣ್ಯ: ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣ ದಲ್ಲಿದ್ದ ಹಳೆ ಮುಳುಗು ಸೇತುವೆಯನ್ನು ಯಂತ್ರದ ಸಹಾಯದಿಂದ ತೆರವು ಮಾಡ ಲಾಗಿದೆ. ಇದರೊಂದಿದೆ ಸುಬ್ರಹ್ಮಣ್ಯ- ಕಡಬ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕಡಬ ತಾಲೂಕು ವ್ಯಾಪ್ತಿಯಲ್ಲಿ ಮೂರು ಹಳೆ ಸೇತುವೆಗಳನ್ನು ತೆರವು ಮಾಡಿದಂತಾಗಿದೆ.
ನೆಟ್ಟಣ ಪೇಟೆಯ ಸಮೀಪ ಹರಿಯುತ್ತಿರುವ ಹೊಳೆಗೆ ಸೇತುವೆ ನಿರ್ಮಿಸಲಾಗಿತ್ತು. ಆದರೆ ಭಾರೀ ಮಳೆ ಬಂದಲ್ಲಿ ಈ ಸೇತುವೆ ಮುಳುಗಡೆಯಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಹಿನ್ನಲೆಯಲ್ಲಿ ಸಮೀಪದಲ್ಲೇ ಹೊಸ ಸೇತುವೆ ನಿರ್ಮಾಣ ಗೊಂಡು ಎರಡು ವರ್ಷಗಳ ಹಿಂದೆ ಸಂಚಾರಕ್ಕೆ ಮುಕ್ತವಾಗಿತ್ತು. ಹಳೆ ಸೇತುವೆ ನಿರುಪಯುಕ್ತವಾಗಿತ್ತು. ಇದೀಗ ಹಳೆ ನಿರುಪಯುಕ್ತ ಸೇತುವೆಯನ್ನು ಯಂತ್ರದ ಸಹಾಯದಿಂದ ತೆರವು ನಡೆಯಿತು.
ಮಳೆಗಾಲದಲ್ಲಿ ಈ ಮುಳುಗು ಸೇತು ವೆಗಳು ಮುಳುಗಿ ಸಂಚಾರಕ್ಕೆ ಅಡಚನೆ ಯಾಗುತ್ತಿದ್ದು, ಹಲವಾರು ಕಾರ್ಯ ಕ್ರಮಗಳಿಗೆ, ಅಗತ್ಯ ಕೆಲಸ ಕಾರ್ಯ ಗಳಿಗೆ ತೆರಳಲು ಸಂಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಮುಳುಗು ಸೇತುವೆಗಳು ಮಳೆಗಾಲದ ಸಮಯದಲ್ಲಿ ವರ್ಷಕ್ಕೆ 3-4 ದಿನವಾದರೂ ಮುಳು ಗಡೆಯಾಗುತ್ತಿತ್ತು. ಈ ಸಂದ ರ್ಭದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗುತ್ತಿತ್ತು. ರಜೆ ಸಿಕ್ಕಿರುವುದು ಒಂದು ರೀತಿಯಲ್ಲಿ ಆ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಖುಷಿಯ ವಿಷಯವೂ ಆಗುತ್ತಿತ್ತು.
ಮುಳುಗು ಸೇತುವೆಗಳಿಗೆ ಮುಕ್ತಿ
ಒಟ್ಟಿನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನಲ್ಲಿ ಹೆಚ್ಚಿನ ಮುಳುಗು ಸೇತುವೆಗಳಿಗೆ ಬದಲಿ ಹೊಸ ಸೇತುವೆಗಳು ಈಗಾಗಲೇ ನಿರ್ಮಾಣ ಗೊಂಡಿರುವುದರೊಂದಿಗೆ, ಮುಳುಗು ಸೇತುವೆ ಸಮಸ್ಯೆ ಮುಕ್ತಿ ಕಾಣುವ ಹಂತದಲ್ಲಿದೆ. ಈ ಹಿಂದೆ ಮುಳುಗು ಸೇತುವೆ ಯಿಂದ ಪಡುತ್ತಿದ್ದ ಸಂಕಷ್ಟದಿಂದ ಮುಕ್ತಿ ಸಿಕ್ಕಿದೆ. ಬಿಳಿನೆಲೆ ಕೈಕಂಬ ಬಳಿಯ ಕೋಟೆ ಹೊಳೆಗೆ ನೂತನ ಸೇತುವೆ ಮಂಜೂರು ಗೊಂಡಿದ್ದು ಶೀಘ್ರ ಇಲ್ಲಿಗೂ ಹೊಸ ಸೇತುವೆ ನಿರ್ಮಾಣವಾಗಲಿದೆ.
ಹೊಸ ಸೇತುವೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಹಳೆ ಸೇತುಗಳ ತೆರವು ನಡೆಸ ಲಾಗುತ್ತದೆ. ಮುಂಜಾಗ್ರತಾ ಕ್ರಮದ ಹಿನ್ನೆಲೆ ಯಲ್ಲೂ ಈ ಕಾರ್ಯ ನಡೆಸ ಲಾಗುತ್ತದೆ ಎಂದು ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
3 ಸೇತುವೆಗಳ ತೆರವು
ಕಡಬ ಸಮೀಪದ ಹೊಸಮಠದಲ್ಲಿ ಗುಂಡ್ಯ ಹೊಳೆಗೆ ನಿರ್ಮಿಸಲಾಗಿದ್ದ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ನದಿಗೆ ನಿರ್ಮಿಸಲಾಗಿದ್ದ ಹಳೆ ಸೇತುವೆಯನ್ನು ಕಳೆದ ವರ್ಷ ಯಂತ್ರದ ಸಹಾಯದಿಂದ ತೆರವು ಮಾಡಲಾಗಿತ್ತು. ಇದೀಗ ನೆಟ್ಟಣದ ಹಳೆ ಸೇತುವೆ ಆ ಪಟ್ಟಿಗೆ ಸೇರಿತು. ಅಂದಿನ ಕಾಲದಲ್ಲಿ ನಿರ್ಮಾಣ ಗೊಂಡ ಈ ಹಳೆಯ ಮುಳುಗು ಸೇತುವೆ ಇನ್ನು ನೆನಪು ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ