

Team Udayavani, Aug 3, 2022, 11:56 AM IST
ಅರಂತೋಡು : ಸುಳ್ಯ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಧಾರಾಕಾರ ಮಳೆ ಹಿನ್ನಲೆಯಲ್ಲಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಅರಂಬೂರು ಮತ್ತು ಬಿಳಿಯಾರಿನಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ ಇದರಿಂದ ಸರಾಗ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ ಸ್ಥಳಕ್ಕೆ ಪೊಲೀಸರು ಅಗ್ನಿ ಶಾಮಕ ದಳದವರು ಆಗಮಿಸಿದ್ದಾರೆ.
ಸದ್ಯ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಪಯಸ್ವಿನಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಪ್ರಮಾಣ ರಸ್ತೆಗೆ ನೀರು ಉಕ್ಕಿ ಹರಿದಿದೆ. ಅರಂಬೂರಿನಲ್ಲಿ ತೂಗು ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ತಾಲೂಕಿನ ಪೇರಡ್ಕ ಸೇತುವೆ ಮೇಲೆ ನೀರು ಉಕ್ಕಿ ಹರಿದಿದೆ ಸಂಪಾಜೆ ಸಮೀಪ ಹೆದ್ದಾರಿಯ ಬದಿಯಲ್ಲಿ ಗುಡ್ಡ ಕುಸಿದಿದ್ದು ಅರಂತೋಡು ತೊಡಿಕಾನ ರಸ್ತೆ ಬದಿಯೂ ಕುಸಿದಿದೆ.
ಇದನ್ನೂ ಓದಿ : ಟೀನೇಜ್ ಫೋಟೋ ಹಂಚಿಕೊಂಡ ಮೋಹಕ ತಾರೆ…ಸಾಮಾಜಿಕ ಜಾಲತಾಣದಲ್ಲಿ ವೈರಲ್
Ad
You seem to have an Ad Blocker on.
To continue reading, please turn it off or whitelist Udayavani.