ಪುತ್ತೂರು: ಸೋಮವಾರ ಜನಸಂದಣಿ
Team Udayavani, May 12, 2020, 5:08 AM IST
ಪುತ್ತೂರು: ಲಾಕ್ಡೌನ್ ಸಡಿಲಿಕೆ ಬಳಿಕ ವಾರದ ಪ್ರಥಮ ದಿನ ಸೋಮವಾರ ನಗರದಲ್ಲಿ ವಾಹನ, ಜನರ ಓಡಾಟ ಅಧಿಕ ಕಂಡು ಬಂತು.
ಲಾಕ್ಡೌನ್ ಆರಂಭವಾದ ಬಳಿಕ ವಾರದ ಸಂತೆ ಸ್ಥಗಿತ ಗೊಂಡಿದೆ. ಆದರೂ ವಿವಿಧ ಕಾರಣಗಳಿಗಾಗಿ ಈಗಲೂ ಸೋಮವಾರ ಜನ, ವಾಹನಗಳ ಸಂಚಾರ ಹೆಚ್ಚು ಕಂಡು ಬರುತ್ತಿದೆ. ನಗರದ ವಿವಿಧ ರಾಷ್ಟ್ರೀಕೃತ ಬ್ಯಾಂಕ್ಗಳ ಮುಂಭಾಗದಲ್ಲಿ ಕ್ಯೂ ಕಂಡುಬಂತು. ಪೊಲೀಸರು ಇಲ್ಲದಿರುವುದರಿಂದ ಸೋಮವಾರ ನಗರದ ಬ್ಯಾಂಕ್ ಒಂದರಲ್ಲಿ ಸಾಮಾಜಿಕ ಅಂತರವೂ ಪಾಲನೆ ಯಾಗಿರಲಿಲ್ಲ. ಪರಿಸ್ಥಿತಿ ವಿಕೋ ಪಕ್ಕೆ ಹೋಗುತ್ತಿರುವುದನ್ನು ಗಮ ನಿಸಿದ ಪೊಲೀಸರು ಆಗಮಿಸಿ ಎಚ್ಚರಿಕೆ ನೀಡಿದರು.
ಎಟಿಎಂಗಳು ಬಂದ್
ಸ್ಯಾನಿಟೈಸರ್ ಇಲ್ಲದೆ, ಸಾಮಾ ಜಿಕ ಅಂತರವೂ ಕಾಪಾಡಿಕೊಳ್ಳಲು ಸಾಧ್ಯವಾಗದೆ ಇರುವುದರಿಂದ ಬಹು ತೇಕ ಬ್ಯಾಂಕ್ಗಳು ಎಟಿಎಂಗೆ ಹಣ ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ಖಾತೆಯಿಂದ ಹಣ ಹಿಂದೆಗೆಯಲೂ ಕ್ಯೂ ನಿಲ್ಲಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.
ಸ್ವಯಂ ಬಂದ್ ತೀರ್ಮಾನ
ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ವ್ಯಾಪಾರಿಗಳು ಮಧ್ಯಾ ಹ್ನದ ತನಕ ಮಾತ್ರ ವ್ಯಾಪಾರ ನಡೆಸಲು ಮನಸ್ಸು ಮಾಡಿದ್ದಾರೆ. ನಗರದ ಹೆಚ್ಚಿನ ಕಡೆಗಳಲ್ಲಿ ಮಧ್ಯಾಹ್ನದ ಬಳಿಕ ಅಂಗಡಿ ಮುಚ್ಚಿ ರುವುದು ಕಂಡುಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ