ಇಡ್ಕಿದು ಗ್ರಾ.ಪಂ.ನಲ್ಲಿ ರೇಬಿಸ್‌ ಲಸಿಕೆ ಕ್ರಾಂತಿ! ಒಂದೇ ದಿನ 500ರಷ್ಟು ಚುಚ್ಚುಮದ್ದು

27 ವರ್ಷಗಳಿಂದ ಗ್ರಾಮದ ಬಹುತೇಕ ನಾಯಿಗಳಿಗೆ ಲಸಿಕೆ

Team Udayavani, Mar 19, 2023, 6:50 AM IST

ಇಡ್ಕಿದು ಗ್ರಾ.ಪಂ.ನಲ್ಲಿ ರೇಬಿಸ್‌ ಲಸಿಕೆ ಕ್ರಾಂತಿ! ಒಂದೇ ದಿನ 500ರಷ್ಟು ಚುಚ್ಚುಮದ್ದು

ಬಂಟ್ವಾಳ: ನಾಯಿಗಳಿಗೆ ರೇಬಿಸ್‌ ಬರದಂತೆ ಲಸಿಕೆ ನೀಡುವ ಪ್ರಕ್ರಿಯೆ ಅಲ್ಲಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಯಾವುದೇ ಊರಿನ ಶಿಬಿರದಲ್ಲಿ ಹತ್ತಿಪ್ಪತ್ತು ನಾಯಿಗಳಿಗೆ ನೀಡಲಾಗುತ್ತದೆ. ಆದರೆ ಇಲ್ಲಿನ ಹಳ್ಳಿಯೊಂದರಲ್ಲಿ 27 ವರ್ಷಗಳಿಂದ ಸತತವಾಗಿ ನಿರ್ದಿಷ್ಟ ಸಮಯಕ್ಕೆ ಶಿಬಿರ ನಡೆಯುತ್ತಿದ್ದು, ಊರಿನ ಶೇ. 80ರಷ್ಟು ನಾಯಿಗಳಿಗೂ ಲಸಿಕೆ ನೀಡುತ್ತಿರುವುದು ವಿಶೇಷವಾಗಿದೆ.

ಇಂತಹ ಮಾದರಿ ಕಾರ್ಯ ನಡೆ ಯುತ್ತಿರುವುದು ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾ.ಪಂ. ವ್ಯಾಪ್ತಿಯ ಇಡ್ಕಿದು ಮತ್ತು ಕುಳ ಗ್ರಾಮಗಳಲ್ಲಿ. ಶಿಬಿರದ ಮೂಲಕ ಶೇ. 60ರಿಂದ 70ರಷ್ಟು ನಾಯಿಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಶೇ. 10ರಷ್ಟು ನಾಯಿಗಳ ಮಾಲಕರು ತಾವೇ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಾರೆ. ಹೀಗಿರುವಾಗ ಗ್ರಾಮಕ್ಕೆ ಹೊರಗಿನಿಂದ ರೇಬಿಸ್‌ ಪೀಡಿತ ನಾಯಿ ಬಂದು ಕಚ್ಚಿದರೂ ಯಾವುದೇ ಆತಂಕವಿರದು ಎನ್ನುತ್ತಾರೆ ವೈದ್ಯರು.

ವಾರ್ಷಿಕ 500ರಷ್ಟು ಲಸಿಕೆ
ಊರಿನ ಪಶು ವೈದ್ಯ ಡಾ| ಕೆ.ಎಂ. ಕೃಷ್ಣ ಭಟ್ಟರು 1997ರಲ್ಲಿ ಗ್ರಾಮದಲ್ಲಿ ಈ ಲಸಿಕೆ ಶಿಬಿರ ಆರಂಭಿಸಿದ್ದು, ಪ್ರತೀ ವರ್ಷ ಒಂದೇ ದಿನಾಂಕದಂದು ನಡೆಯುವುದು ವಿಶೇಷ. ಈ ವರ್ಷದ ಶಿಬಿರ ಮಾ. 14ರಂದು ನಡೆದಿದೆ. ಸುಮಾರು 25 ಕೇಂದ್ರಗಳಲ್ಲಿ ಶಿಬಿರ ಆಯೋಜಿಸುತ್ತಿದ್ದು, ಒಟ್ಟು 5 ತಂಡಗಳು ತಲಾ 5 ಶಿಬಿರಗಳನ್ನು ನಡೆಸುತ್ತವೆ. ಪ್ರತೀ ವರ್ಷ ಸುಮಾರು 500 ನಾಯಿಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಇಡ್ಕಿದು ಪಂಚಾಯತ್‌ ಪಿಡಿಒ ಗೋಕುಲದಾಸ್‌ ಭಕ್ತ ತಿಳಿಸಿದ್ದಾರೆ.

ಶಿಬಿರಕ್ಕೆ ಸುಮಾರು 40 ಸಾವಿರ ರೂ. ಖರ್ಚಾಗುತ್ತದೆ. 500 ಲಸಿಕೆಗಳಿಗೆ 22 ಸಾವಿರ ರೂ. ಬೇಕಾಗುತ್ತದೆ. ಪಶು ಇಲಾಖೆಯ ಸಹಕಾರವಿದ್ದು, ಗ್ರಾ.ಪಂ. ನೇತೃತ್ವ ವಹಿಸಿಕೊಳ್ಳುತ್ತಿದೆ. ಇಡ್ಕಿದು ಸಿಎ ಬ್ಯಾಂಕ್‌, ಹಾಲು ಸೊಸೈಟಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ನೆರವಾಗುತ್ತವೆ. ಗ್ರಾಮದ ಸೇಸಪ್ಪ ಕೆರ್ದೇಲ್‌ ಅವರು ತನ್ನ ನಾಯಿಗೆ 12 ವರ್ಷಗಳಿಂದ ನಿರಂತರವಾಗಿ ಲಸಿಕೆ ಹಾಕಿಸುತ್ತಿದ್ದು, ಅದೂ ಒಂದು ದಾಖಲೆಯಾಗಿದೆ ಎಂದು ಪಂಚಾಯತ್‌ ಅಧಿಕಾರಿಗಳು ಹೇಳುತ್ತಾರೆ.

27 ವರ್ಷಗಳ ಹಿಂದೆ ಆರಂಭ
ವೃತ್ತಿನಿರತ ಪಶುವೈದ್ಯರ ವೇದಿಕೆಯ ಮೂಲಕ 1996ರಲ್ಲಿ ಜಿಲ್ಲೆಯ ಪಶು ವೈದ್ಯರ ತಂಡ ಲಸಿಕೆ ಕಾರ್ಯವನ್ನು ಆರಂಭಿಸಿದ್ದು, ಡಾ| ಕೆ.ಎಂ. ಕೃಷ್ಣ ಭಟ್ಟರು ವೇದಿಕೆಯ ಅಧ್ಯಕ್ಷರಾಗಿದ್ದರು. ಪಶುವೈದ್ಯದಲ್ಲಿ 40 ವರ್ಷಗಳ ಅನುಭವ ಹೊಂದಿರುವ ಕೃಷ್ಣ ಭಟ್ಟರು ಪ್ರಾರಂಭದಲ್ಲಿ ಸರಕಾರಿ ಸೇವೆಯಲ್ಲಿದ್ದು, ಪ್ರಸ್ತುತ ಉಪ್ಪಿನಂಗಡಿಯಲ್ಲಿ ಕ್ಲಿನಿಕ್‌ ಹೊಂದಿದ್ದಾರೆ.

ಪಶುವೈದ್ಯರ ವೇದಿಕೆಯ ಮೂಲಕ ಪ್ರಾರಂಭದ ಕೆಲವು ವರ್ಷ ನಿಡ್ಲೆ, ಏತಡ್ಕ, ಕೊಣಾಜೆ ಭಾಗದಲ್ಲಿ ಲಸಿಕೆ ಶಿಬಿರ ನಡೆದಿತ್ತು. ಇಡ್ಕಿದುವಲ್ಲಿ ಈಗಲೂ ಮುಂದುವರಿದಿದೆ.
– ಡಾ| ಕೆ.ಎಂ. ಕೃಷ್ಣ ಭಟ್‌, ಪಶು ವೈದ್ಯ

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

Green revolution ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

roadNational Highways ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Kundapura ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕ, ಸಿಬಂದಿಗೆ ಹಲ್ಲೆ

Kundapura ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕ, ಸಿಬಂದಿಗೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Padubidri : ಸಹೋದರರ ಹೊಡೆದಾಟ: ಪ್ರಕರಣ ದಾಖಲು

Padubidri : ಸಹೋದರರ ಹೊಡೆದಾಟ: ಪ್ರಕರಣ ದಾಖಲು

Puttur ಲಕ್ಕಿ ಡ್ರಾ ನಂಬಿ 5.34 ಲ.ರೂ. ಕಳೆದುಕೊಂಡರು

Puttur ಲಕ್ಕಿ ಡ್ರಾ ನಂಬಿ 5.34 ಲ.ರೂ. ಕಳೆದುಕೊಂಡರು

Kadaba: ಐತ್ತೂರಿನಲ್ಲಿ ಕಾಡಾನೆ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Kadaba: ಐತ್ತೂರಿನಲ್ಲಿ ಕಾಡಾನೆ ದಾಳಿ; ವ್ಯಕ್ತಿಗೆ ಗಂಭೀರ ಗಾಯ

udVitla ವಿದ್ಯಾರ್ಥಿನಿಗೆ ಕಿರುಕುಳ: ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲು

Vitla ವಿದ್ಯಾರ್ಥಿನಿಗೆ ಕಿರುಕುಳ: ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲು

MUST WATCH

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

ಹೊಸ ಸೇರ್ಪಡೆ

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

Green revolution ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

roadNational Highways ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.