ಇಡ್ಕಿದು ಗ್ರಾ.ಪಂ.ನಲ್ಲಿ ರೇಬಿಸ್‌ ಲಸಿಕೆ ಕ್ರಾಂತಿ! ಒಂದೇ ದಿನ 500ರಷ್ಟು ಚುಚ್ಚುಮದ್ದು

27 ವರ್ಷಗಳಿಂದ ಗ್ರಾಮದ ಬಹುತೇಕ ನಾಯಿಗಳಿಗೆ ಲಸಿಕೆ

Team Udayavani, Mar 19, 2023, 6:50 AM IST

ಇಡ್ಕಿದು ಗ್ರಾ.ಪಂ.ನಲ್ಲಿ ರೇಬಿಸ್‌ ಲಸಿಕೆ ಕ್ರಾಂತಿ! ಒಂದೇ ದಿನ 500ರಷ್ಟು ಚುಚ್ಚುಮದ್ದು

ಬಂಟ್ವಾಳ: ನಾಯಿಗಳಿಗೆ ರೇಬಿಸ್‌ ಬರದಂತೆ ಲಸಿಕೆ ನೀಡುವ ಪ್ರಕ್ರಿಯೆ ಅಲ್ಲಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಯಾವುದೇ ಊರಿನ ಶಿಬಿರದಲ್ಲಿ ಹತ್ತಿಪ್ಪತ್ತು ನಾಯಿಗಳಿಗೆ ನೀಡಲಾಗುತ್ತದೆ. ಆದರೆ ಇಲ್ಲಿನ ಹಳ್ಳಿಯೊಂದರಲ್ಲಿ 27 ವರ್ಷಗಳಿಂದ ಸತತವಾಗಿ ನಿರ್ದಿಷ್ಟ ಸಮಯಕ್ಕೆ ಶಿಬಿರ ನಡೆಯುತ್ತಿದ್ದು, ಊರಿನ ಶೇ. 80ರಷ್ಟು ನಾಯಿಗಳಿಗೂ ಲಸಿಕೆ ನೀಡುತ್ತಿರುವುದು ವಿಶೇಷವಾಗಿದೆ.

ಇಂತಹ ಮಾದರಿ ಕಾರ್ಯ ನಡೆ ಯುತ್ತಿರುವುದು ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾ.ಪಂ. ವ್ಯಾಪ್ತಿಯ ಇಡ್ಕಿದು ಮತ್ತು ಕುಳ ಗ್ರಾಮಗಳಲ್ಲಿ. ಶಿಬಿರದ ಮೂಲಕ ಶೇ. 60ರಿಂದ 70ರಷ್ಟು ನಾಯಿಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಶೇ. 10ರಷ್ಟು ನಾಯಿಗಳ ಮಾಲಕರು ತಾವೇ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಾರೆ. ಹೀಗಿರುವಾಗ ಗ್ರಾಮಕ್ಕೆ ಹೊರಗಿನಿಂದ ರೇಬಿಸ್‌ ಪೀಡಿತ ನಾಯಿ ಬಂದು ಕಚ್ಚಿದರೂ ಯಾವುದೇ ಆತಂಕವಿರದು ಎನ್ನುತ್ತಾರೆ ವೈದ್ಯರು.

ವಾರ್ಷಿಕ 500ರಷ್ಟು ಲಸಿಕೆ
ಊರಿನ ಪಶು ವೈದ್ಯ ಡಾ| ಕೆ.ಎಂ. ಕೃಷ್ಣ ಭಟ್ಟರು 1997ರಲ್ಲಿ ಗ್ರಾಮದಲ್ಲಿ ಈ ಲಸಿಕೆ ಶಿಬಿರ ಆರಂಭಿಸಿದ್ದು, ಪ್ರತೀ ವರ್ಷ ಒಂದೇ ದಿನಾಂಕದಂದು ನಡೆಯುವುದು ವಿಶೇಷ. ಈ ವರ್ಷದ ಶಿಬಿರ ಮಾ. 14ರಂದು ನಡೆದಿದೆ. ಸುಮಾರು 25 ಕೇಂದ್ರಗಳಲ್ಲಿ ಶಿಬಿರ ಆಯೋಜಿಸುತ್ತಿದ್ದು, ಒಟ್ಟು 5 ತಂಡಗಳು ತಲಾ 5 ಶಿಬಿರಗಳನ್ನು ನಡೆಸುತ್ತವೆ. ಪ್ರತೀ ವರ್ಷ ಸುಮಾರು 500 ನಾಯಿಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಇಡ್ಕಿದು ಪಂಚಾಯತ್‌ ಪಿಡಿಒ ಗೋಕುಲದಾಸ್‌ ಭಕ್ತ ತಿಳಿಸಿದ್ದಾರೆ.

ಶಿಬಿರಕ್ಕೆ ಸುಮಾರು 40 ಸಾವಿರ ರೂ. ಖರ್ಚಾಗುತ್ತದೆ. 500 ಲಸಿಕೆಗಳಿಗೆ 22 ಸಾವಿರ ರೂ. ಬೇಕಾಗುತ್ತದೆ. ಪಶು ಇಲಾಖೆಯ ಸಹಕಾರವಿದ್ದು, ಗ್ರಾ.ಪಂ. ನೇತೃತ್ವ ವಹಿಸಿಕೊಳ್ಳುತ್ತಿದೆ. ಇಡ್ಕಿದು ಸಿಎ ಬ್ಯಾಂಕ್‌, ಹಾಲು ಸೊಸೈಟಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ನೆರವಾಗುತ್ತವೆ. ಗ್ರಾಮದ ಸೇಸಪ್ಪ ಕೆರ್ದೇಲ್‌ ಅವರು ತನ್ನ ನಾಯಿಗೆ 12 ವರ್ಷಗಳಿಂದ ನಿರಂತರವಾಗಿ ಲಸಿಕೆ ಹಾಕಿಸುತ್ತಿದ್ದು, ಅದೂ ಒಂದು ದಾಖಲೆಯಾಗಿದೆ ಎಂದು ಪಂಚಾಯತ್‌ ಅಧಿಕಾರಿಗಳು ಹೇಳುತ್ತಾರೆ.

27 ವರ್ಷಗಳ ಹಿಂದೆ ಆರಂಭ
ವೃತ್ತಿನಿರತ ಪಶುವೈದ್ಯರ ವೇದಿಕೆಯ ಮೂಲಕ 1996ರಲ್ಲಿ ಜಿಲ್ಲೆಯ ಪಶು ವೈದ್ಯರ ತಂಡ ಲಸಿಕೆ ಕಾರ್ಯವನ್ನು ಆರಂಭಿಸಿದ್ದು, ಡಾ| ಕೆ.ಎಂ. ಕೃಷ್ಣ ಭಟ್ಟರು ವೇದಿಕೆಯ ಅಧ್ಯಕ್ಷರಾಗಿದ್ದರು. ಪಶುವೈದ್ಯದಲ್ಲಿ 40 ವರ್ಷಗಳ ಅನುಭವ ಹೊಂದಿರುವ ಕೃಷ್ಣ ಭಟ್ಟರು ಪ್ರಾರಂಭದಲ್ಲಿ ಸರಕಾರಿ ಸೇವೆಯಲ್ಲಿದ್ದು, ಪ್ರಸ್ತುತ ಉಪ್ಪಿನಂಗಡಿಯಲ್ಲಿ ಕ್ಲಿನಿಕ್‌ ಹೊಂದಿದ್ದಾರೆ.

ಪಶುವೈದ್ಯರ ವೇದಿಕೆಯ ಮೂಲಕ ಪ್ರಾರಂಭದ ಕೆಲವು ವರ್ಷ ನಿಡ್ಲೆ, ಏತಡ್ಕ, ಕೊಣಾಜೆ ಭಾಗದಲ್ಲಿ ಲಸಿಕೆ ಶಿಬಿರ ನಡೆದಿತ್ತು. ಇಡ್ಕಿದುವಲ್ಲಿ ಈಗಲೂ ಮುಂದುವರಿದಿದೆ.
– ಡಾ| ಕೆ.ಎಂ. ಕೃಷ್ಣ ಭಟ್‌, ಪಶು ವೈದ್ಯ

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

3-madikeri-2

Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

Tragedy: ಪೈಪ್ ಲೈನ್ ಚೆಕ್ ಮಾಡುವ ವೇಳೆ ದುರಂತ: ನೀರಿನ ಟ್ಯಾಂಕ್ ಗೆ ಬಿದ್ದು ಮೂವರ ದುರ್ಮರಣ

Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ

Exam 2

SSLC ಪರೀಕ್ಷೆ-2 ಜೂನ್‌ 7ರಿಂದ ; ನೋಂದಣಿಗೆ ಮೇ 16ರ ವರೆಗೆ ಅವಕಾಶ

34

GT Vs CSK: ನಿರ್ಗಮನ ಬಾಗಿಲಲ್ಲಿ ಗುಜರಾತ್‌ ಪ್ಲೇ ಆಫ್‌ ಜಪದಲ್ಲಿ ಚೆನ್ನೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

Sampaje: ತಂದೆ ಮಗಳ ಮೇಲೆ ಪ್ರಕರಣ ದಾಖಲು

Sampaje: ತಂದೆ ಮಗಳ ಮೇಲೆ ಪ್ರಕರಣ ದಾಖಲು

4

ಬೆಳ್ತಂಗಡಿಯಲ್ಲಿ ಬಸ್‌-ಟ್ಯಾಂಕರ್‌ ಅಪಘಾತ: ತಪ್ಪಿದ ಭಾರೀ ಅನಾಹುತ, 20 ಮಂದಿಗೆ ಗಾಯ

6-sslc-result

SSLC Result: ಬೆಳ್ತಂಗಡಿಯ ಚಿನ್ಮಯ್ ಜಿ.ಕೆ. (624) ರಾಜ್ಯಕ್ಕೆ ದ್ವಿತೀಯ

3-1

K. Vasantha Bangera: ಹುಟ್ಟೂರಿಗೆ ಆಗಮಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ ಪಾರ್ಥಿವ ಶರೀರ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

3-madikeri-2

Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.