

Team Udayavani, Oct 14, 2018, 11:59 AM IST
ವಿಟ್ಲ: ಇಲ್ಲಿನ ಪೇಟೆಯ ರಸ್ತೆಯನ್ನು ಕಾಂಕ್ರೀಟ್ಗೊಳಿಸಿ ಅಭಿವೃದ್ಧಿ ಪಡಿಸಲಾಗುವುದು. ರಸ್ತೆ ಕಾಮಗಾರಿ ವೇಳೆ ಚರಂಡಿ ವಿಸ್ತರಣೆ ಮಾಡಬೇಕು. ಹೆಚ್ಚಿನ ಅನುದಾನಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ವಿಟ್ಲದಲ್ಲಿ ಶುಕ್ರವಾರ ನಡೆದ ಲೋಕೋಪಯೋಗಿ ಇಲಾಖೆ, ಜಿ.ಪಂ. ಎಂಜಿನಿಯರ್ ಗಳ ಸಭೆಯಲ್ಲಿ ಮಾತನಾಡಿ ದರು. ಇದೇ ಸಂದರ್ಭ ವಿವಿಧ ಗ್ರಾಮದ ರಸ್ತೆಗಳ ಬಗ್ಗೆ ಗ್ರಾಮಸ್ಥರು ದೂರು ಸಲ್ಲಿಸಿದರು.
ಜಿ.ಪಂ. ಸದಸ್ಯೆ ಜಯಶ್ರೀ ಕೊಡಂ ದೂರು, ವಿಟ್ಲ ಪ.ಪಂ. ಅಧ್ಯಕ್ಷ ಅರುಣ್ ಎಂ. ವಿಟ್ಲ, ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯರಾದ ಮಂಜುನಾಥ ಕಲ್ಲಕಟ್ಟ, ಶ್ರೀಕೃಷ್ಣ, ವಿ. ರಾಮದಾಸ್ ಶೆಣೈ, ಇಂದಿರಾ ಅಡ್ಡಾಳಿ, ಉಷಾ ಕೃಷ್ಣಪ್ಪ, ಬಿಜೆಪಿ ನಗರಾಧ್ಯಕ್ಷ ಮೋಹನದಾಸ ಉಕ್ಕುಡ, ಕಾರ್ಯದರ್ಶಿ ಉದಯ ಆಲಂಗಾರು, ಸಾಜ ರಾಧಾಕೃಷ್ಣ ಆಳ್ವ, ಬಂಟ್ವಾಳ ಸ. ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಎಂಜಿನಿಯರ್ ಪ್ರೀತಂ, ಜಿ.ಪಂ. ಎಂಜಿನಿಯರ್ಗಳಾದ ನರೇಂದ್ರ ಬಾಬು, ಪದ್ಮರಾಜ್ ಗೌಡ, ಅಜಿತ್ ಮತ್ತಿತರರಿದ್ದರು.
ಕಾಮಗಾರಿ ನಡೆಸಲು ಸೂಚನೆ
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಮಂಗಳಪದವು ಅನಂತಾಡಿ, ಬಿಳಿಯೂರು ಪೆರ್ನೆ ರಸ್ತೆ ಕಾಮಗಾರಿ ತತ್ಕ್ಷಣ ಪೂರ್ತಿಯಾಗಬೇಕು. ಸಾರಡ್ಕ ಬಳಿ ಸಹಿತ ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡ ರಸ್ತೆಯನ್ನು ವಿಕೋಪದ ಅನುದಾನದಲ್ಲಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
Ad
You seem to have an Ad Blocker on.
To continue reading, please turn it off or whitelist Udayavani.