Wild Elephant; ಕನ್ಯಾಡಿ: ಒಂಟಿ ಸಲಗದ ದಾಂಧಲೆ
Team Udayavani, Mar 7, 2024, 10:56 AM IST
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಾರ್ಯ ಕಲ್ಕಾಜೆ ಪರಿಸರ ಹಾಗೂ ಕನ್ಯಾಡಿ ಸಮೀಪ ಎರಡು ದಿನಗಳಿಂದ ಒಂಟಿ ಸಲಗವು ಕೃಷಿ ಪ್ರದೇಶಕ್ಕೆ ನುಗ್ಗಿ ತೆಂಗು, ಬಾಳೆ ಗಿಡಗಳನ್ನು ಧ್ವಂಸಗೊಳಿಸುತ್ತಿದೆ.
ಮಾ. 4ರಂದು ಧರ್ಮಸ್ಥಳದ ಪಾಂಗಳ, ಎರ್ಮಾಳ ಮತ್ತು ಅಂಬ್ಯದಲ್ಲಿ ಕಾಣಿಸಿಕೊಂಡಿದ್ದ ಆನೆ ಪಟಾಕಿ ಸಿಡಿಸಿದ ಶಬ್ದಕ್ಕೆ ಭಯಗೊಂಡು ಇತ್ತ ದಾಳಿಯಿಟ್ಟಿದೆ.
ಮಾ. 5ರಂದು ಬೆಳಗ್ಗೆ ನರೇಶ್ ಹಾಗೂ ಹರೀಶ್ ಗೌಡ ಅವರ ತೋಟದಲ್ಲಿ ಒಂಟಿ ಸಲಗ ಬಾಳೆ ಗಿಡಗಳನ್ನು ಸಂಪೂರ್ಣವಾಗಿ ನಾಶ ಮಾಡಿ ಹೋಗಿದೆ. ತಡರಾತ್ರಿ 2 ಗಂಟೆ ಹೊತ್ತಿಗೆ ನಾಯಿಗಳ ಬೊಗಳುವಿಕೆಯಿಂದ ಆನೆ ಬಂದಿರುವ ವಿಚಾರ ಗೊತ್ತಾಗಿದ್ದು, ಮನೆಯವರು ಊರಿನವರೆಗೆ ಜಾಗರೂಕತರಾಗಿರುವಂತೆ ಫೋನ್ ಕರೆ ಮೂಲಕ ಮತ್ತು ಸಂದೇಶದ ಮೂಲಕ ತಿಳಿಸಿದ್ದಾರೆ.
ಮಾ. 6ರಂದು ಮುಂಜಾನೆ 4ರ ಸುಮಾರಿಗೆ ಕನ್ಯಾಡಿಯಿಂದ ನೀರ ಚಿಲುಮೆ ಪ್ರದೇಶದಲ್ಲಿ ಕಾಣಿಸಿ ಕೊಂಡ ಸಲಗ ಚಂದ್ರಕಾಂತ್ ಅವರ ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ತಿಂದು ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ