Agriculture: ಮನೆಯ ತಾರಸಿನಲ್ಲಿ 200ಕ್ಕೂ ಹೆಚ್ಚು ಬೆಳೆ: ಜೋಸೆಫ್ ಲೋಬೋ ಸಾಧನೆ

ಮನೆಯ ತಾರಸಿನಲ್ಲಿ ಕೃಷಿ ತೋಟ; 200ಕ್ಕೂ ಅಧಿಕ ಬಗೆಯ ಹಣ್ಣು ಹಂಪಲು, ಹೂವು, ತರಕಾರಿ, ಔಷಧೀಯ ಸಸ್ಯಗಳನ್ನು ಬೆಳೆಸುವ ಜೋಸೆಫ್‌

Team Udayavani, Nov 29, 2023, 3:56 PM IST

13-katapady

ಕಟಪಾಡಿ: ಮನೆಯ ತಾರಸಿಯನ್ನೇ ಕೃಷಿಯ ತೋಟವಾಗಿಸಿ ಹಣ್ಣು ಹಂಪಲು, ಮಲ್ಲಿಗೆ ಸಹಿತ ಹೂವು, ಔಷಧೀಯ ಸಸ್ಯಗಳು, ತರಕಾರಿಗಳನ್ನು ಬೆಳೆಯುವ ಮೂಲಕ ಉಡುಪಿ ಜಿಲ್ಲೆಯ ಶಂಕರಪುರ ಕಂಚಿನಕೆರೆ ಬಿಜಿಕ್ರೆಕಾಡು ನಿವಾಸಿ ಜೋಸೆಫ್‌ ಲೋಬೋ ಅವರು ತನ್ನ ಆಹಾರದಲ್ಲಿ ಬಹುತೇಕ ಸ್ವಾವಲಂಬಿಯಾಗಿದ್ದಾರೆ.

ತನ್ನ ವಾಸದ ಮನೆಯ ಸುಮಾರು 1200 ಚದರ ಅಡಿ ತಾರಸಿಯಲ್ಲಿ ಕಾಸರಗೋಡು-7 ತಳಿಯ ಗೇರು, ಆಲ್‌ ಸೀಸನ್‌ ಮಾವು, ಚಿಕ್ಕು, ಪೀನಟ್‌ ಬಟರ್‌, 7 ವಿವಿಧ ಬಗೆಯ ಚೆರಿ ಹಣ್ಣುಗಳು, ಬಿಳಿ ನೇರಳೆ, ಬೀಜ ರಹಿತ ಲಿಂಬೆ, ಮಿರಾಕಲ್‌ ಫ್ರುಟ್‌, ಔಷಧೀಯ ಸಸ್ಯಗಳು, ಜೇನು ಸಾಕಣೆ, ವಿವಿಧ ರೀತಿಯ ತರಕಾರಿಗಳನ್ನು ಬೆಳೆಸುತ್ತಿದ್ದು, ಸುಮಾರು 200ಕ್ಕೂ ವಿವಿಧ ತಳಿಯ ಗಿಡಗಳು ಇವರ ತಾರಸಿಯಲ್ಲಿ ಬೆಳೆಯುತ್ತಿದ್ದು ತನ್ನ ಆಹಾರದಲ್ಲಿ ತಾನು ಸ್ವಾವಲಂಬಿಯಾಗಿದ್ದು ಮಾತ್ರವಲ್ಲದೇ ಜೇನು ಸಾಕಣೆ, ಹೈನುಗಾರಿಕೆಯನ್ನು ನಡೆಸುವ ಮೂಲಕ ಗಿಡಗಳಿಗೆ ಜೈವಿಕ ಗೊಬ್ಬರ, ನೈಸರ್ಗಿಕ ಜೇನು ಉತ್ಪಾದನೆಯನ್ನೂ ನಡೆಸುತ್ತಿದ್ದಾರೆ.

ಸರ್ವ ಸಾಂಬಾರ್‌ ಗಿಡ, ಮಸಾಲ ಸೊಪ್ಪು, ರುದ್ರಾಕ್ಷಿ ಗಿಡ, ಕರ್ಪೂರ ಗಿಡ, ಹಿರೇಹಳ್ಳಿ ಡಾರ್ಫ್‌, ಖರ್ಜೂದ ಗಿಡ, ಪಾಟ್‌ ಬನಾನ, ಕರಿಮೆಣಸು ಕೂಡಾ, ಅಡಕೆ ಗಿಡ ಇವರ ತಾರಸಿಯಲ್ಲಿ ಬೆಳೆಯುತ್ತಿದ್ದಾರೆ.

ರಾಜ್ಯದಲ್ಲಿ  ಪ್ರಥಮ ಜಲಕೃಷಿ  ಕೃಷಿಕ:

ಪಟ್ಟಣಗಳಲ್ಲಿನ ಮನೆ ಮಂದಿಗೆ ತಮ್ಮ ಬಿಡುವಿಲ್ಲದ ಜೀವನದ ನಡುವೆಯೂ ಮನೆಯ ತಾರಸಿಯಲ್ಲಿ, ಲಭ್ಯ ಸ್ಥಳಾವಕಾಶದಲ್ಲಿ  ಜಲಕೃಷಿ ವಿಧಾನದ ಮೂಲಕ ತರಕಾರಿ, ಹಣ್ಣು ಹಂಪಲು, ಹೂವಿನ ಗಿಡಗಳನ್ನು ಬೆಳೆಯಲು ಸಾಧ್ಯವಿದೆ ಎಂಬ ನಿಟ್ಟಿನಲ್ಲಿ ಪ್ರಥಮವಾಗಿ ಜಲಕೃಷಿ ವಿಧಾನದ ಮಲ್ಲಿಗೆಯನ್ನು ಬೆಳೆಸಲು ಆರಂಭಿಸಿದ ರಾಜ್ಯದ ಪ್ರಥಮ ಪ್ರಯೋಗ ಶೀಲ ಕೃಷಿಕರಾಗಿ ಗುರುತಿಸಿಕೊಂಡು ಸಮ್ಮಾನಗಳಿಗೂ ಪಾತ್ರರಾಗಿರುವ ಜೋಸೆಫ್‌ ಲೋಬೋ ತಿಳಿಸುತ್ತಿದ್ದು, ಪತ್ನಿ ನೀಮಾ ಲೋಬೋ, ಕರಾಟೆಯಲ್ಲಿ ಅಂತಾರಾಷ್ಟ್ರೀಯ ಚಿನ್ನದ ಪದಕ ವಿಜೇತ ಪುತ್ರಿ ಜೆನಿಶಾ ಲೋಬೋ (ವಿದ್ಯಾರ್ಥಿನಿ)ಅವರ ಸಹಕಾರವನ್ನು ಸ್ಮರಿಸುತ್ತಾರೆ.

ನೆರಳು, ಮರದ ಬೇರುಗಳ ಹಾವಳಿ -ಮಲ್ಲಿಗೆ ಕೃಷಿ ವೈಫಲ್ಯವೇ ಪ್ರೇರಣೆ:

ತನ್ನ 18 ಸೆಂಟ್ಸ್‌ ಸ್ಥಳದಲ್ಲಿ ನೆರಳು, ಮರದ ಬೇರುಗಳ ಹಾವಳಿಯಿಂದ ಮಲ್ಲಿಗೆ ಬೆಳೆಯುವಲ್ಲಿ ಕಂಡಂತಹ ವೈಫಲ್ಯವು ತಾರಸಿ ಕೃಷಿಗೆ ಪ್ರೇರಣೆಯಾಗಿದ್ದು ಯಶಸ್ವಿಯಾಗಿದ್ದೇನೆ ಎನ್ನುವ ಜೋಸೆಫ್‌ ಲೋಬೋ ಅವರು ರಾಜ್ಯಾದ್ಯಂತ ನಡೆಯುವ ಕೃಷಿ ಮೇಳಗಳಿಗೆ ತೆರಳಿ ಅಲ್ಲಿ ಕಂಡು ಬರುವ ವಿಶೇಷ ತಳಿಗಳ ಗಿಡಗಳನ್ನು (ವಿದೇಶೀ ತಳಿ)ಬೆಳೆಸುವ ಪ್ರಯೋಗ ಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದು, ಅವಶ್ಯಕ ಇದ್ದವರಿಗೆ ತೋಟ ಸಿದ್ಧಪಡಿಸಿಕೊಡುವ ಕಾಯಕ ನಿರತರಾಗಿದ್ದಾರೆ. ಇವರ ಈ ಸಾಧನೆಗೆ ಮನ್ನಣೆ ಲಬಿಸುತ್ತಿದ್ದು, ವಿವಿಧ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು ಸಂಪನ್ಮೂಲ ವ್ಯಕ್ತಿಯಾಗಿ ಅವರ ಯಶೋಗಾಥೆಯನ್ನು ಬಳಸಿಕೊಳ್ಳುತ್ತಿದ್ದು, ಯುವಜನಾಂಗವು ಹಸುರು ಪ್ರಕೃತಿ ಬೆಳೆಸುವಲ್ಲಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಯೋಗ ಶೀಲ ಥಾರಸಿ ಕೃಷಿಕ ಜೋಸೆಫ್‌ ಲೋಬೋ ಮನದ ಮಾತಿನಂತೆ ತನ್ನ  ತಾರಸಿ ಕೃಷಿಯಲ್ಲಿ ಜೈವಿಕ-ನಿಸರ್ಗದತ್ತ ಲಭ್ಯ ಹಣ್ಣು ಹಂಪಲು, ತರಕಾರಿ ಮನೆಬಳಕೆಗೆ ಮತ್ತು ನೆಂಟರಿಷ್ಟರು ಆಪೆ¤àಷ್ಟರಿಗೆ ಕೊಡಲು ಬಳಸುತ್ತೇನೆ. ಮಿಕ್ಕುಳಿದವು ಬಾನಾಡಿಗಳಿಗೆ, ಪ್ರಾಣಿಗಳಿಗೆ ಆಹಾರವಾಗುತ್ತದೆ. ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ. ಮನೆಯ ಥಾರಸಿ ಕೃಷಿ ತೋಟವಾಗಿದ್ದು, ಮನೆಯೊಳಗೆ ತಂಪಾದ ವಾತಾವರಣವು ಆರೋಗ್ಯಕ್ಕೆ ಪೂರಕ- ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದೇನೆ.

ನೀಮಾ ಲೋಬೋ ತಿಳಿಸುವಂತೆ  ಇನ್ನೊಬ್ಬರ ಕೈ ಕೆಳಗೆ ದುಡಿಯುವ ಬದಲು ನಮ್ಮ ನೈಸರ್ಗಿಕ ಆಹಾರದಲ್ಲಿ ಸ್ವಾವಲಂಬಿಗಳಾಗಿ ನಮ್ಮ ಆರೋಗ್ಯ-ನೆಮ್ಮದಿ ತಾರಸಿ ಕೃಷಿಯಲ್ಲಿ ಲಭಿಸುತ್ತಿದೆ. ಹಾಗಾಗಿ ಪತಿಯೊಂದಿಗೆ ಕೈ ಜೋಡಿಸುತ್ತಿದ್ದೇನೆ.

-ವಿಜಯ ಆಚಾರ್ಯ ಉಚ್ಚಿಲ

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Fraud Case ಟರಿಂಗ್‌ ವ್ಯವಹಾರದ ಕಮಿಷನ್‌ ಹೆಸರಲ್ಲಿ ವಂಚನೆ

Fraud Case ಟರಿಂಗ್‌ ವ್ಯವಹಾರದ ಕಮಿಷನ್‌ ಹೆಸರಲ್ಲಿ ವಂಚನೆ

Udupi 36 ವರ್ಷಗಳ ಹಿಂದಿನ ಆರೋಪಿ ಬಂಧನ

Udupi 36 ವರ್ಷಗಳ ಹಿಂದಿನ ಆರೋಪಿ ಬಂಧನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.