Shirva: ಆಟಿ ಅಮಾವಾಸ್ಯೆ ಕಷಾಯ ವಿತರಣೆ
Team Udayavani, Jul 17, 2023, 7:34 AM IST
ಶಿರ್ವ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿರ್ವದ ಸಮಾಜ ಸೇವಕ ಅನಂತ್ರಾಯ ಶೆಣೈ ಅವರ ನೇತೃತ್ವದಲ್ಲಿ ಶಿರ್ವ ಪತಂಜಲಿ ಯೋಗ ಸಮಿತಿಯ ಕಚೇರಿಯಲ್ಲಿ ಆಟಿ ಅಮಾವಾಸ್ಯೆಯ ಈ ದಿನ (ಜು.17) ಹಾಲೆ ಮರದ ಕಷಾಯ ವಿತರಿಸಲಾಯಿತು.
ಜನರು ಜಾತಿ ಮತ ಭೇದವಿಲ್ಲದೆ ಮುಂಜಾನೆ 5 ಗಂಟೆಯಿಂದಲೇ ಕಷಾಯವನ್ನು ಪಡೆದುಕೊಂಡರು. ಬಾಟಲಿಯಲ್ಲಿ ಕಷಾಯ ಮತ್ತು ಮೆಂತೆ ಗಂಜಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸುಮಾರು 15 ಜನರ ತಂಡವು ಕಷಾಯ ತಯಾರಿಸಲು ಭಾಗವಹಿಸಿದ್ದು ಮುಂಜಾನೆಯಿಂದಲೇ ಜನರು ಸಾಲುಗಟ್ಟಿ ನಿಂತು ಕಷಾಯವನ್ನು ಸೇವಿಸಿ ಮನೆಮಂದಿಗೆ ಕೊಂಡೊಯ್ಯಲು ಬಂದಿದ್ದರು.