ಚೀನ ಆಮದಿತ ವಸ್ತುಗಳನ್ನು ಬಹಿಷ್ಕರಿಸಿ; ಪರಿಸರಸಹ್ಯ, ಸರಳ ನಾಗರಪಂಚಮಿ ಆಚರಿಸಿ


Team Udayavani, Jul 24, 2020, 12:56 PM IST

ಚೀನ ಆಮದಿತ ವಸ್ತುಗಳನ್ನು ಬಹಿಷ್ಕರಿಸಿ; ಪರಿಸರಸಹ್ಯ, ಸರಳ ನಾಗರಪಂಚಮಿ ಆಚರಿಸಿ

ಸಾಂದರ್ಭಿಕ ಚಿತ್ರ

ಉಡುಪಿ: ವರ್ಷಾರಂಭದ ಮೊದಲ ಹಬ್ಬ ನಾಗರಪಂಚಮಿಯನ್ನು ಶನಿವಾರ ಆಚರಿಸಲಾಗುತ್ತದೆ. ನಾಗರ ಪಂಚಮಿ ಎಂದಾಕ್ಷಣ ತನುತಂಬಿಲ ನಾಗನ ಕಲ್ಲಿಗೆ ಎರೆಯುವುದು ವಾಡಿಕೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ನಾಗರಪಂಚಮಿಯನ್ನು ಸರಳವಾಗಿ ಆಚರಿಸುವಂತೆ ಸರಕಾರವೇ ಸೂಚಿಸಿದೆ. ನಾಗರಪಂಚಮಿ ದಿನ ಆಯಾ ಕುಟುಂಬಿಕರೆಲ್ಲರೂ ಒಟ್ಟುಗೂಡಿ ಮೂಲ ಸ್ಥಾನದಲ್ಲಿ ಆಚರಿಸುವುದು ಹಿಂದಿನಿಂದ ಬಂದ ಸಂಪ್ರದಾಯ. ಈ ಬಾರಿ ದೇಗುಲ, ಮೂಲಸ್ಥಾನಗಳಲ್ಲಿ ಸಾಮೂಹಿಕ ಆಚರಣೆ ಇಲ್ಲ. ಸಾಂಪ್ರದಾಯಿಕವಾಗಿ ಪುರೋಹಿತರ ಉಪಸ್ಥಿತಿಯಲ್ಲಿ ನಡೆಸಲು ಹೆಚ್ಚಿನವರು ನಿರ್ಧರಿಸಿದ್ದಾರೆ.

ಪರಿಸರ ಸಂರಕ್ಷಿಸಿ
ನಾಗನಿಗೆ ಬೇಕಾಗಿರುವುದೇ ಪ್ರಕೃತಿದತ್ತ ಹಚ್ಚಹಸುರಿನ ಪರಿಸರ. ಆದರೆ ಇತ್ತೀಚೆಗೆ ನಾವು ಇದನ್ನೇ ಹಾಳುಗೆಡವುತ್ತಿದ್ದೇವೆ. ಸರಳ ಆಚರಣೆಯಾದರೂ ಪ್ಲಾಸ್ಟಿಕ್‌ ಚೀಲ ಸಹಿತ ಒಂದಿಷ್ಟು ಪರಿಸರನಾಶಕ ವಸ್ತುಗಳೊಂದಿಗೇ ನಾಗಬನಕ್ಕೆ ಹೋಗುವುದು ಸಹಜ ಎಂಬ ಜೀವನ ಮಟ್ಟಕ್ಕೆ ತಲುಪಿದ್ದೇವೆ. ಈ ವರ್ಷದಿಂದಲಾದರೂ ಇದನ್ನು ಕೈಬಿಡುವುದು ಉತ್ತಮ.
ಪರಿಸರ ಅಸಹ್ಯ ಅಗರ್‌ಬತ್ತಿ!

ಭಕ್ತಿಯಿಂದ ಅರ್ಪಿಸುವ ಈಗಿನ ಅಗರ್‌ಬತ್ತಿ (ಊದು ಬತ್ತಿ) ಎಷ್ಟು ಪರಿಸರ ಅಸಹ್ಯ? ಎಷ್ಟು ರಾಷ್ಟ್ರಘಾತಕ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಇದಕ್ಕೆ ಬಳಸುವುದು ಇದ್ದಿಲು ಪೌಡರ್‌, ಮರದ ಹುಡಿ, ರಾಸಾಯನಿಕ ಪರಿಮಳದ್ರವ್ಯ (ಕೆಮಿಕಲ್‌ ಸೆಂಟ್‌), ಬಿದಿರಿನ ಕಡ್ಡಿ. ಹಿಂದೆ ಇದೆಲ್ಲವೂ ಚೀನದಿಂದ ಬರುತ್ತಿತ್ತು. ಇತ್ತೀಚೆಗೆ ಕೆಲವು ಸಾಮಗ್ರಿಗಳ ಆಮದು ನಿಂತಿದೆಯೇ ವಿನಾ ಕೆಮಿಕಲ್‌ ಸೆಂಟ್‌, ಬಿದಿರಿನ ಕಡ್ಡಿ ಬರುವುದು ಚೀನ, ವಿಯೆಟ್ನಾಂನಿಂದಲೇ. ಇಡೀ ದೇಶಕ್ಕೆ ಒಂದು ತಿಂಗಳಿಗೆ 3,000 ರಿಂದ 4,000 ಟನ್‌ ಬಿದಿರು ಚೀನ, ವಿಯೆಟ್ನಾಂನಿಂದ ಆಮದು ಆಗುತ್ತಿದೆ. ಚೆನ್ನೈಗೆ ಹಡಗಿನ ಮೂಲಕ 300 ಕಂಟೈನರ್‌ (1 ಕಂಟೈನರ್‌ನಲ್ಲಿ 20 ಟನ್‌) ಕೆಮಿಕಲ್‌ ಸೆಂಟ್‌ ಚೀನದಿಂದ ಆಮದು ಆಗುತ್ತಿದೆ.

ಪರಿಶುದ್ಧ ಎಣ್ಣೆ ಸಿಗುತ್ತದೆಯೆ? ದೇವರಿಗೆ ಅರ್ಪಿಸುವ ದೀಪದೆಣ್ಣೆ ಕಥೆಯೇ ಬೇರೆ. ಒಂದು ಕೆಜಿ ಎಳ್ಳಿಗೆ ಸುಮಾರು 150 ರೂ. ಬೆಲೆ ಇದೆ. ಯಾಂತ್ರಿಕ ಮಾರ್ಗದಲ್ಲಿ ಶೇ. 48 ಎಣ್ಣೆ ಸಿಗುತ್ತದೆ. ಹಿಂದಿನ ಕಾಲದ ಗಾಣದ ಮಾರ್ಗದಲ್ಲಿ ಶೇ.40 ಎಣ್ಣೆ ಸಿಗುತ್ತದೆ. ಯಾಂತ್ರಿಕ ಮಾರ್ಗದಲ್ಲಿ 200 ಡಿಗ್ರಿ ಸೆಲಿಯಸ್‌ ಉಷ್ಣಾಂಶ ಹೊರಹೊಮ್ಮಿ ಎಣ್ಣೆಯ ಗುಣಮಟ್ಟ ಕುಸಿಯುತ್ತದೆ. ಮಾರುಕಟ್ಟೆಯಲ್ಲಿ ಅತಿ ಅಗ್ಗದ ಅಂದರೆ ಲೀ.ಗೆ 90 ರೂ.ಗೆ ದೀಪದೆಣ್ಣೆ ಮತ್ತು 360 ರೂ.ಗೆ ಅತ್ಯಂತ ಪರಿಶುದ್ಧ ಎಂದು ಹೇಳುವ ಎಳ್ಳೆಣ್ಣೆ ಸಿಗುತ್ತದೆ. ಆದರೆ ಎಳ್ಳಿನ ಬೆಲೆ, ಎಣ್ಣೆ ಮಿಲ್‌ಗೆ ಬಂಡವಾಳ ಹೂಡಿಕೆ, ನೌಕರರ ವೇತನ, ಲಾಭಾಂಶ ಸೇರಿದರೆ 360 ರೂ.ಗೂ ಸಿಗುವುದು ಅಸಂಭವ. ಗಾಣದ ರೀತಿಯಲ್ಲಿ ಕೆಲವು ಕಡೆ ಎಣ್ಣೆ ತೆಗೆಯುತ್ತಾರೆ. ಇದು ಸ್ವಲ್ಪ ದುಬಾರಿ ಇರುತ್ತದೆ. ಅದನ್ನು ಕೇಳಿ ಖರೀದಿಸಬೇಕು. ಅಪರಿಶುದ್ಧ ಎಣ್ಣೆಯ ದೀಪದಿಂದ ಪರಿಸರದ ಮೇಲೆ ಎಂತಹ ಪರಿಣಾಮ ಬೀರಬಹುದು?

ಬಾಳೆಹಣ್ಣು, ಹಾಲಿನ ಕಥೆ…
ಬಾಳೆಹಣ್ಣಿನ ಕಥೆಯೂ ಇದೇ ಆಗಿದೆ. ಮನೆಯಲ್ಲಿನ ಬಾಳೆಗಿಡದ ಹಣ್ಣು ಹೊರತು ಪಡಿಸಿ ಹೊರಗಡೆ ಹೆಚ್ಚಾಗಿ ರಾಸಾಯನಿಕ ಬಳಸಿ ಹಣ್ಣಾಗಿಸಿರುವ ಹಣ್ಣುಗಳೇ ಸಿಗು
ವುದು. ದೇವರ ಹೆಸರಿನಲ್ಲಿ ಖರೀದಿಸಿ ದರೂ ಅನಂತರ ಸೇವಿಸುವುದು ಮಾನವರು. ದೇವರಿಗೆ ಸಮರ್ಪಿಸುವ ಹಾಲಿನ ಕಥೆಯೂ ಇದಕ್ಕಿಂತ ಭಿನ್ನವಲ್ಲ. ದೇಸೀ ತಳಿಯ ದನಗಳನ್ನು ಸಾಕುವುದು, ಅಂತಹ ಪರಿಶುದ್ಧ ಹಾಲನ್ನು ಸ್ವೀಕರಿಸು ವುದು ಬಹಳ ಮುಖ್ಯ.

ಗೋಮಯದಿಂದ ಆಮ್ಲಜನಕ
ಕೆಮಿಕಲ್‌ ಸೆಂಟ್‌ನಿಂದ ಪರಿಮಳ ಬರಬಹುದೇ ವಿನಾ ಪ್ರಕೃತಿಗೆ ಪೂರಕವಾಗುತ್ತದೋ? ಇದು ಇಂಗಾಲಾಮ್ಲವನ್ನು ಹೊರಸೂಸುತ್ತದೆ. ನಮ್ಮ ಪದ್ಧತಿ ಇದಲ್ಲ. ಧೂಪವನ್ನು ಹಚ್ಚುವ ಬದಲು ಅಗರ್‌ಬತ್ತಿ ಕ್ರಮ ಚಾಲ್ತಿಗೆ ಬಂತು. ನಾವು ಧೂಪವನ್ನು ಬಳಸಬೇಕಾಗಿದೆ. ಇದು ಆಮ್ಲಜನಕವನ್ನು ಉತ್ಪಾದಿಸಿ ಜೀವಿಗಳಿಗೆ ಉಪಕಾರಿಯಾಗುತ್ತದೆ. ಇಂತಹ ಕಾರಣದಿಂದಾಗಿಯೇ ಧೂಪ-ದೀಪ-ನೈವೇದ್ಯ ಎಂಬ ಮಾತು ರೂಢಿಗೆ ಬಂತು. ಹಿಂದೆ ಧೂಪದ ಮರಗಳೇ ಸಾಲುಮರಗಳಾಗಿದ್ದವು. ಇದರ ತೊಗಟೆಯಿಂದ ಬರುವ ಮೇಣ, ದೇಸೀ ಹಸುಗಳ ಗೋಮಯ, ಭದ್ರಮುಷ್ಟಿ, ತುಪ್ಪವನ್ನು ಬಳಸಿ ಧೂಪದ ಕಡ್ಡಿಯನ್ನು ತಯಾರಿಸಲು ಸಾಧ್ಯ. ಇದನ್ನು ನಾವು ಅನೇಕರಿಗೆ ತರಬೇತಿ ಕೊಟ್ಟು ತಯಾರಿಸುತ್ತಿದ್ದೇವೆ. ಚೀನದ ವಸ್ತುಗಳನ್ನು ಖರೀದಿಸಿದರೆ ಶತ್ರುರಾಷ್ಟ್ರಗಳಿಗೆ ಸಹಾಯ ಮಾಡಿದಂತಲ್ಲವೆ ಎಂದು ಪ್ರಶ್ನಿಸುತ್ತಾರೆ ಆರೂರು ಪುಣ್ಯಕೋಟಿ ಗೋಶಾಲೆಯ ಭಕ್ತಿಭೂಷಣರು.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.