ಮಲ್ಪೆ: ಬಸ್ ತಂಗುದಾಣದ ಅವಶೇಷ ತೆರವು
Team Udayavani, Sep 6, 2022, 11:39 AM IST
ಮಲ್ಪೆ: ಅಪಾಯದ ಸ್ಥಿತಿಯಲ್ಲಿದ್ದ ಬಸ್ಸು ತಂಗುದಾಣದ ಅವಶೇಷಗಳನ್ನು ನಗರಸಭೆ ಅಲ್ಲಿಂದ ತೆರವುಗೊಳಿಸುವ ಮೂಲಕ ಕೊನೆಗೂ ಮುಕ್ತಿ ದೊರಕಿಸಿದ್ದಾರೆ.
ಮಲ್ಪೆ ಮುಖ್ಯರಸ್ತೆ ಹಳೆ ಪೋಸ್ಟ್ ಆಫೀಸಿನ ಬಳಿ ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿದ್ದ ಬಸ್ ತಂಗುದಾಣವನ್ನು ತಿಂಗಳ ಹಿಂದೆ ನಗರಸಭೆ ಕೆಡವಿದರೂ ಅದರ ಕಾಂಕ್ರೀಟ್ ಸ್ಲ್ಯಾಬ್, ಪಿಲ್ಲರ್ಗಳನ್ನು ತೆರವುಗೊಳಿಸದೆ ಅಲ್ಲೆ ಬಿಟ್ಟು ಹೋಗಿರುವುದು ಸಾರ್ವಜನಿಕರಿಗೆ ಸಮಸ್ಯೆಯನ್ನು ಉಂಟು ಮಾಡಿತ್ತು. ಕಾಂಕ್ರೀಟ್ ಒಳಗಿದ್ದ ಕಬ್ಬಿಣದ ರಾಡ್ಗಳು ಕಾಂಕ್ರೀಟ್ ನೊಂದಿಗೆ ಚೆಲ್ಲಾಪಿಲ್ಲಿಯಾಗಿ ಹರಡಿದ್ದು ಇದರಿಂದ ಇಲ್ಲಿ ಬಸ್ ಕಾಯಲು ಬಂದ ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು.
ಈ ಬಗ್ಗೆ ಉದಯವಾಣಿ ಸೆ. 4ರ ರವಿವಾರದ ಸುದಿನದಲ್ಲಿ ಬಸ್ ತಂಗುದಾಣ ಕೆಡವಿದರೂ ಇನ್ನೂ ತೆರವಾಗದ ಅವಶೇಷಗಳು ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟವಾಗಿತ್ತು. ತತ್ಕ್ಷಣ ಎಚ್ಚೆತ್ತ ಇಲಾಖೆ ವರದಿಗೆ ಸ್ಪಂದಿಸಿ ಸೋಮವಾರ ಬೆಳಗ್ಗಿನಿಂದಲೇ ಸ್ಲ್ಯಾಬ್ ಅನ್ನು ತುಂಡರಿಸಿ ಮತ್ತು ಕಬ್ಬಿಣದ ರಾಡ್ ಗಳನ್ನು ಬೇರ್ಪಡಿಸುವ ಮೂಲಕ ತೆರವು ಕಾರ್ಯ ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು