ಕರಾವಳಿಯ ಯಾತ್ರಿಕರು ಅಪಾಯದಿಂದ ಪಾರು: ಯಾತ್ರೆ ಹೊರಟಿದ್ದ ತಂಡದವರ ಮಾತು


Team Udayavani, Jun 4, 2023, 7:10 AM IST

ಕರಾವಳಿಯ ಯಾತ್ರಿಕರು ಅಪಾಯದಿಂದ ಪಾರು: ಯಾತ್ರೆ ಹೊರಟಿದ್ದ ತಂಡದವರ ಮಾತು

ಕಾರ್ಕಳ/ಬೆಳ್ತಂಗಡಿ: ಪಥ ಬದಲಾವಣೆಗಾಗಿ ಎಂಜಿನನ್ನು ಒಂದು ತುದಿಯಿಂದ ಇನ್ನೊಂದು ತುದಿಗೆ ಬದಲಾಯಿಸಿದ್ದರಿಂದಾಗಿ ಶುಕ್ರವಾರ ರಾತ್ರಿ ಸಂಭವಿಸಿದ ರೈಲು ಅಪಘಾತದಲ್ಲಿ ನಾವು ಅದೃಷ್ಟವಶಾತ್‌ ಪಾರಾದೆವು. ನಮ್ಮ ಜೀವ ಉಳಿಯಿತು.

ಇದು ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಅಪಘಾತಕ್ಕೀಡಾದ ಹೌರಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಜೈನರ ಪವಿತ್ರ ಕ್ಷೇತ್ರ ಝಾರ್ಖಂಡ್‌ನ‌ ಸಮ್ಮೇದ ಶಿಖರ್ಜಿಗೆ ಯಾತ್ರೆ ಹೊರಟಿದ್ದ ಕರಾ ವಳಿಯ ತಂಡದಲ್ಲಿದ್ದ ಕಾರ್ಕಳದ ಗುಣ ವರ್ಮ ಜೈನ್‌ ಜೋಡುರಸ್ತೆ ಅವರ ಅಭಿಪ್ರಾಯ.

ಯಾತ್ರೆ ಹೊರಟಿದ್ದರು
ಬೆಂಗಳೂರಿನಿಂದ ಹೊರಟ ಹೌರಾ ಎಕ್ಸ್‌ಪ್ರೆಸ್‌ – ಕೋರಮಂಡಲ್‌ ಎಕ್ಸ್‌ ಪ್ರಸ್‌ ಮತ್ತು ಗೂಡ್ಸ್‌ ರೈಲು ಗಳು ಢಿಕ್ಕಿಯಾಗಿ ಸಂಭವಿಸಿದ ಅವಘಡ ದಲ್ಲಿ ಅಪಾರ ಸಾವು-ನೋವು ಸಂಭವಿಸಿತ್ತು. ಮಹಿಮಾ ಸಾಗರ ಮುನಿ ಮಹಾರಾಜರು ಜೂ. 1ರಿಂದ ಝಾರ್ಖಂಡ್‌ ಸಮ್ಮೇಳನದ ಶಿಖರ್ಜಿ ಯಾತ್ರೆ ಯನ್ನು ಸಂಕಲ್ಪಿಸಿದ್ದು, ಅದರಲ್ಲಿ ಪಾಲ್ಗೊಳ್ಳಲು ಕಳಸದ 110 ಯಾತ್ರಿಕರ ಜತೆ ಕಾರ್ಕಳದ 7 ಜನ ಮತ್ತು ದಕ್ಷಿಣ ಕನ್ನಡದ ವಿವಿಧ ಭಾಗಗಳ 15 ಜನ ಸೇರಿದಂತೆ ಕರಾವಳಿಯ ಒಟ್ಟು 22 ಮಂದಿ ಹೊರಟಿದ್ದರು. ಜೂ. 1ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನಿಂದ ರೈಲು ಹೊರಟಿತ್ತು. ಹೌರಾ ತಲುಪಲು 2 ತಾಸು ಬಾಕಿ ಇರುವಾಗ ರಾತ್ರಿ 8ರ ವೇಳೆಗೆ ಬಾಲಸೋರ್‌ ಬಳಿ ರೈಲು ದುರಂತ ಸಂಭವಿಸಿತು.

ಬಾಂಬ್‌ ಸಿಡಿದಂತೆ ಸದ್ದು!
ನಾವಿದ್ದ ರೈಲು ಸಾಗುತ್ತಿತ್ತು. ರಾತ್ರಿ 8ರ ವೇಳೆಗೆ ಏಕಾಏಕಿ ಬಾಂಬ್‌ ಸಿಡಿದಂತೆ ಜೋರಾದ ಸದ್ದು ಕೇಳಿಸಿತು. ಒಮ್ಮೆಲೆ ನಡುಗಿ ರೈಲು ನಿಂತಿತು. ಗಾಬರಿಯಿಂದ ಇಳಿದು ನೋಡುತ್ತಿದ್ದಂತೆ 500 ಮೀಟರ್‌ ಅಂತರದಲ್ಲಿ ದುರಂತ ವೊಂದು ಸಂಭವಿಸಿತ್ತು. ನಾವಿದ್ದ ರೈಲು ಢಿಕ್ಕಿಯಾದ ವಿಚಾರ ತಿಳಿಯುತ್ತಲೇ ಗಾಬರಿಗೊಂಡೆವು. ಅಪಘಾತ ಸಂಭವಿಸಿದ ಸ್ಥಳ ಬಯಲು ಪ್ರದೇಶವಾಗಿತ್ತು. ರಾತ್ರಿಯಾದ್ದರಿಂದ ಏನಾಯಿತು ಎನ್ನುವುದು ಕ್ಷಣಕ್ಕೆ ಗೊತ್ತಾಗಲಿಲ್ಲ. ಆ ವೇಳೆಗಾಗಲೇ ಪೊಲೀಸ್‌ ಸೇರಿದಂತೆ ರೈಲುಗಳಲ್ಲಿದ್ದ ಸಾವಿರಾರು ಜನರು ಜಮಾಯಿಸಿದ್ದರು. ಸ್ಥಳೀಯರು ಬೋಗಿಗಳಲ್ಲಿದ್ದ ಜನರನ್ನು ಹೊರಗೆ ಕರೆದುಕೊಂಡು ಬರುತ್ತಿದ್ದು ರಕ್ಷಣ ಕಾರ್ಯ ವೇಗವಾಗಿ ನಡೆಯುತ್ತಿತ್ತು. ಗಾಯಾಳುಗಳ ಚೀರಾಟ ಮುಗಿಲು ಮುಟ್ಟಿತ್ತು. ರಕ್ತದ ಓಕುಳಿ ಹರಿಯುತ್ತಿದ್ದುದನ್ನು ದೂರದಿಂದ ಕಂಡೆವು. ಸಮೀಪಕ್ಕೆ ಹೋಗಲು ಪೊಲೀಸರು ಬಿಡುತ್ತಿರಲಿಲ್ಲ ಎಂದು ಗುಣವರ್ಮ ದೂರವಾಣಿ ಮೂಲಕ ಮಾಹಿತಿ ನೀಡಿದರು. ನಾವೀಗ ಯಾತ್ರೆ ಮುಂದುವರಿಸಿದ್ದು ಎಲ್ಲರೂ ಕ್ಷೇಮವಾಗಿದ್ದೇವೆ. ನಮ್ಮನ್ನು ನಿಲ್ದಾಣಗಳಲ್ಲಿ ಚೆನ್ನಾಗಿ ನೋಡಿಕೊಂಡರು ಎಂದಿದ್ದಾರೆ.

ಕಾರ್ಕಳ, ಮೂಡುಬಿದಿರೆಯ ಯಾತ್ರಿಕರು
ಕಾರ್ಕಳದ ಗುಣವರ್ಮ ಜೈನ್‌, ದಿವ್ಯಸ್ತುತಿ ಜೈನ್‌, ರೆಂಜಾಳದ ಪ್ರದೀಪ್‌ ಇಂದ್ರ, ಕೆರ್ವಾಶೆಯ ಸಿಂಹಸೇನೇಂದ್ರ, ವಿದ್ಯಾನಂದ, ಮಾಳ ಗ್ರಾಮದ ಪುಟ್ಟ ರಾಜಯ್ಯ, ಚಂದ್ರಾವತಿ, ಬೆಳ್ತಂಗಡಿ ಗುರುವಾಯನಕೆರೆ ಜೈನ್‌ ಪೇಟೆಯ ಸುಷ್ಮಾ ಮತ್ತು ಹಿತೇಂದ್ರ ದಂಪತಿ, ವೇಣೂರಿನ ಮಮತಾ ಜೈನ್‌, ಆಶಾಲತಾ ಜೈನ್‌, ದಿವ್ಯಶ್ರೀ ಕುತ್ತೋಡಿ ಉಜಿರೆಯ ರತ್ನಶ್ರೀ ದೊಂಡೋಲೆ, ಶಾಂತಿರಾಜ್‌, ಅರ್ಪಣಾ, ಚಾರ್ವಿ ಪ್ರೀತಿ, ಅರ್ಚನಾ, ರಂಜಿತಾ, ಸುಜಿತ್‌, ಮೂಡುಬಿದಿರೆಯ ಕಿಶೋರ್‌ ಕುಮಾರ್‌, ತ್ರಿಶಲಾ, ಪದ್ಮಶ್ರೀ, ರೈಲಿನಲ್ಲಿದ್ದವರು.

ಪ್ರಯಾಣ ಮುಂದುವರಿಕೆ
ಅಪಘಾತಕ್ಕೀಡಾದ ಮೂರು ಬೋಗಿ ಗಳನ್ನು ತೊರೆದು ಹೌರಾ- ಬೆಂಗಳೂರು ಎಕ್ಸ್‌ಪ್ರೆಸ್‌ ರಾತ್ರಿ 12 ಗಂಟೆಯ ವೇಳೆಗೆ ಪ್ರಯಾಣ ಮುಂದುವರಿಸಿತು. ಜೂ. 3ರ ಬೆಳಗ್ಗೆ ಹೌರಾ ತಲುಪಬೇಕಿದ್ದ ರೈಲು ಮಧ್ಯಾಹ್ನ 2.10ಕ್ಕೆ ತಲುಪಿದೆ. ಜೂ. 4ರ ಮುಂಜಾನೆ ಝಾರ್ಖಂಡ್‌ನ‌ ಪರಶು ನಾಥ್‌ ನಿಲ್ದಾಣ ತಲುಪಿ ಅಲ್ಲಿಂದ 27 ಕಿ.ಮೀ. ದೂರದಲ್ಲಿರುವ ಶಿಖರ್ಜಿಗೆ ನಡೆದು ಸಾಗಲಿದ್ದೇವೆ ಎಂದರು.

ಬ್ರೇಕ್‌ ಹಾಕಿದ ಅನುಭವ
ನಮ್ಮ ತಂಡವು ಉಜಿರೆ ಮತ್ತು ವೇಣೂರಿನಿಂದ ಕಳಸಕ್ಕೆ ತೆರಳಿ ಮೇ 31 ರಂದು ಬೆಂಗಳೂರು ಮೂಲಕ ರೈಲಿನಲ್ಲಿ ಪ್ರಯಾಣ ಮುಂದುವರಿಸಿತ್ತು. ಯಶವಂತಪುರ-ಹೌರಾ ಎಕ್ಸ್‌ಪ್ರೆಸ್‌ನ ಎಸ್‌-6 ಮತ್ತು 7 ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದೆವು. ಅಪಘಾತದ ಸಮಯ ನಾವೆಲ್ಲ ಭಜನೆ ನಿರತರಾಗಿದ್ದೆವು. ಏಕಾಏಕಿ ಬ್ರೇಕ್‌ ಹಾಕಿದ ಅನುಭವವಾಯಿತು. ಹೊರಗೆ ನೋಡಿದರೆ ಅಪಘಾತ ಸಂಭವಿಸಿತ್ತು. ಮಧ್ಯರಾತ್ರಿ 1.30ರ ಸುಮಾರಿಗೆ ರೈಲು ಮತ್ತೆ ಹೊರಟಿತು. ಎಲ್ಲರೂ ಸುರಕ್ಷಿತರಾಗಿದ್ದೇವೆ. ಜೂ. 9ರಂದು ಹಿಂದಿರುಗಲಿದ್ದೇವೆ ಎಂದು ತಂಡದ ಸದಸ್ಯೆ ಆಶಾಲತಾ ಜೈನ್‌ ವೇಣೂರು ತಿಳಿಸಿದ್ದಾರೆ.

ಸಹಾಯವಾಣಿ
ಉಡುಪಿ: ರೈಲು ಅಪಘಾತದಲ್ಲಿ ಜಿಲ್ಲೆಗೆ ಸಂಬಂಧಿಸಿದ ಯಾರಾದರೂ ಸಿಲುಕಿದ್ದರೆ ಮಾಹಿತಿಯನ್ನು ಅವರಿಗೆ ಸಂಬಂಧಿಸಿದವರು ರಾಜ್ಯ ಸಹಾಯವಾಣಿ ಕೇಂದ್ರ 080 22253707 / 080 22340676 (ಸಹಾಯವಾಣಿ: 1070), ಉಡುಪಿ ಜಿಲ್ಲಾಧಿಕಾರಿ ಕಚೇರಿ (24ಗಿ7) ಜಿಲ್ಲಾ ವಿಪತ್ತು ನಿರ್ವಹಣ ಕೇಂದ್ರ 0820 -2574802 ಕರೆ ಮಾಡಿ ತಿಳಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.

ಪಂದ್ಯಕ್ಕೆ ತೆರಳಿದ ತಂಡಕ್ಕೆ ವಿಮಾನ ವ್ಯವಸ್ಥೆ
ಮಂಗಳೂರು: ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ವಾಲಿಬಾಲ್‌ ಪಂದ್ಯದಲ್ಲಿ ಭಾಗವಹಿಸಲು ತೆರಳಿದ್ದ ರಾಜ್ಯದ ತಂಡ ರೈಲು ದುರಂತದ ಕಾರಣ ಕೋಲ್ಕತ್ತಾದಲ್ಲೇ ಬಾಕಿಯಾಗಿದೆ. ಈ ತಂಡದಲ್ಲಿ ದ.ಕ. ಜಿಲ್ಲೆಯ ಇಬ್ಬರು ಬಾಲಕರು, ಓರ್ವ ಬಾಲಕಿ, ಕಾರ್ಕಳದ ಬಾಲಕ ಸೇರಿದಂತೆ 31 ಮಂದಿ ಇದ್ದಾರೆ. ಅವರಿಗೆ ಕೊಲ್ಕತ್ತಾದಿಂದ ವಿಮಾನದ ವ್ಯವಸ್ಥೆ ಮಾಡಲಾಗಿದ್ದು ರವಿವಾರ ಮರಳಲಿದ್ದಾರೆ.

ಅವರು ಪಂದ್ಯದಲ್ಲಿ ಭಾಗವಹಿಸಿ ಶನಿವಾರ ರೈಲಿನಲ್ಲಿ ಹೊರಡಬೇಕಿತ್ತು, ಆದರೆ ರೈಲು ದುರಂತದಿಂದ ರೈಲುಗಳು ರದ್ದಾದ ಕಾರಣ ಸಬ್‌ಜೂನಿಯರ್‌ ವಾಲಿಬಾಲ್‌ ತಂಡ ಕಳವಳಕ್ಕೊಳಗಾಗಿತ್ತು.

ಬಂಟ್ವಾಳ ಮಂಚಿಯ ವಿದ್ಯಾರ್ಥಿ ಅಬ್ದುಲ್‌ ಖಾದರ್‌ ಮುಹ್ಸಿನ್‌, ಸುಬ್ರಹ್ಮಣ್ಯ ನಿವಾಸಿ ಹಾಗೂ ಆಳ್ವಾಸ್‌ ಪಿಯು ಕಾಲೇಜಿನ ವಿದ್ಯಾರ್ಥಿ ಚಿನ್ಮಯ್‌ ಹಾಗೂ ಮಂಗಳೂರಿನ ದಿಶಾ ಹಾಗೂ ಕಾರ್ಕಳ ದುರ್ಗಾನಗರದ ಮಣಿಕಾಂತ್‌ ತಂಡದಲ್ಲಿದ್ದಾರೆ.

ಟಾಪ್ ನ್ಯೂಸ್

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.