7 ತಿಂಗಳ ಬಳಿಕ ತೆರೆದ ಕಾರ್ಪ್‌ ಬ್ಯಾಂಕ್‌ ಹೆರಿಟೇಜ್‌ ಮ್ಯೂಸಿಯಂ

ಪ್ರಾಚೀನ-ನವೀನ ನಾಣ್ಯ-ನೋಟುಗಳ ಬೃಹತ್‌ ಸಂಗ್ರಹಾಲಯ

Team Udayavani, Nov 5, 2020, 5:49 AM IST

7 ತಿಂಗಳ ಬಳಿಕ ತೆರೆದ ಕಾರ್ಪ್‌ ಬ್ಯಾಂಕ್‌ ಹೆರಿಟೇಜ್‌ ಮ್ಯೂಸಿಯಂ

ಕಾರ್ಪೊರೇಶನ್‌ ಬ್ಯಾಂಕ್‌ ಹೆರಿಟೇಜ್‌ ಮ್ಯೂಸಿಯಮ್‌ನ ಒಳಾಂಗಣ ದೃಶ್ಯ.

ಉಡುಪಿ: ಹಲವು ರಾಜರ ಕಾಲದ ನಾಣ್ಯಗಳು, ಬ್ರಿಟಿಷರು, ಪೋರ್ಚು ಗೀಸರ ಕಾಲದಿಂದ ಇಂದಿನವರೆಗಿರುವ ನಾನಾ ನೋಟುಗಳು, ಆಸ್ಟ್ರೇಲಿಯಾದ 1,000 ಕೆ.ಜಿ. ತೂಕದ ನಾಣ್ಯದ ಚಿತ್ರ ಹೀಗೆ ಅನೇಕ ರೀತಿಯ ನಾಣ್ಯ-ನೋಟುಗಳನ್ನು ನೋಡುವ ಉತ್ಸಾಹಿಗಳಿಗೆ ಹಾಜಿ ಅಬ್ದುಲ್ಲಾ ಮೆಮೋರಿಯಲ್‌ ಕಾರ್ಪೊರೇಶನ್‌ ಬ್ಯಾಂಕ್‌ ಹೆರಿಟೇಜ್‌ ಮ್ಯೂಸಿಯಂ ಮತ್ತೆ ತೆರೆದುಕೊಂಡಿದೆ.

ನವೀಕರಣದ ಬಳಿಕ
ಕಾರ್ಪೊರೇಶನ್‌ ಬ್ಯಾಂಕ್‌ ಸ್ಥಾಪಕ ಹಾಜಿ ಅಬ್ದುಲ್ಲಾ ಸಾಹೇಬರ ಮನೆಯಾಗಿದ್ದ ಈ ಸ್ಥಳವೀಗ ಅಪೂರ್ವ ವಸ್ತುಗಳ ಸಂಗ್ರಹವಾಗಿದೆ. ಮ್ಯೂಸಿಯಂನ್ನು ಮಾರ್ಚ್‌ 22ರಂದು ಕೊರೊನಾ ಕಾರಣದಿಂದ ಬಂದ್‌ ಮಾಡಲಾಗಿತ್ತು. 7 ತಿಂಗಳ ಬಳಿಕ ನ.3ರಂದು ತೆರೆಯಲಾಗಿದೆ. 2011ರಲ್ಲಿ ಈ ಮ್ಯೂಸಿಯಂ ಅನ್ನು ವಿತ್ತ ಸಚಿವ ಪ್ರಣವ್‌ ಮುಖರ್ಜಿಯವರು ಉದ್ಘಾಟಿಸಿದ್ದರು.

ಏನೇನಿವೆ?
ರಾಜರ ಕಾಲದ ನಾಣ್ಯಗಳಲ್ಲಿ ಚಿನ್ನ, ಬೆಳ್ಳಿ, ತಾಮ್ರದ ನಾಣ್ಯಗಳಿವೆ. ಸುಮಾರು 1,500 ನಾಣ್ಯಗಳು, ಸುಮಾರು 700 ನೋಟುಗಳಿವೆ. ಇದರ ಜತೆ ಕಾರ್ಪೊರೇಶನ್‌ ಬ್ಯಾಂಕಿನ ಆರಂಭಿಕ ಆಡಳಿತ ಮಂಡಳಿಯ ನಿರ್ದೇಶಕರ ಚಿತ್ರಗಳು, 1934ರಲ್ಲಿ ಗಾಂಧೀಜಿಯವರು ಬಂದ ಸಂದರ್ಭ ಅಬ್ದುಲ್ಲಾ ಸಾಹೇಬರ ಅಧ್ಯಕ್ಷತೆಯಲ್ಲಿ ಸ್ವಾಗತಿಸಿದ ಅಪೂರ್ವ ಕ್ಷಣಗಳು, ಅಬ್ದುಲ್ಲಾ ಸಾಹೇಬರು ನಿಧನ ಹೊಂದಿದಾಗ ಉಡುಪಿಯಲ್ಲಿ ಸೇರಿದ ಜನಸಾಗರದ ಚಿತ್ರಗಳೂ ಇವೆ. 121 ವರ್ಷ ಇತಿಹಾಸದ ಕಟ್ಟಡದಲ್ಲಿ ವಿಶಿಷ್ಟ ದಾರುಶಿಲ್ಪಗಳನ್ನು (ಬರ್ಮಾ ಟಿಂಬರ್‌) ನೋಡಬಹುದಾಗಿದೆ ಎನ್ನುತ್ತಾರೆ ಕ್ಯುರೇಟರ್‌ ಜಯಪ್ರಕಾಶ್‌ ರಾವ್‌.

ಪ್ರವೇಶ ಸಮಯ
ನಿತ್ಯ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ರವಿವಾರ ಮತ್ತು ರಜಾ ದಿನಗಳಲ್ಲಿ ತೆರೆದಿರುವುದಿಲ್ಲ. ಎರಡು ಮತ್ತು ನಾಲ್ಕನೆಯ ಶನಿವಾರವೂ ತೆರೆದಿರುತ್ತದೆ.

ನಿಷೇಧವಾದ ಎಲ್ಲ ನೋಟುಗಳು ಇಲ್ಲಿವೆ!
ಮೊದಲ ಬಾರಿಗೆ ನೋಟು ನಿಷೇಧವಾಗಿದ್ದು 1946ರಲ್ಲಿ. ಆಗ ಬ್ರಿಟಿಷರು 10,000 ರೂ., 1,000 ರೂ. ನೋಟುಗಳನ್ನು ನಿಷೇಧ ಮಾಡಿದ್ದರು. 1978ರಲ್ಲಿ ಮೊರಾರ್ಜಿ ದೇಸಾಯಿಯವರ ಸರಕಾರ 1,000 ರೂ., 5,000 ರೂ., 10,000 ರೂ. ನೋಟುಗಳನ್ನು ನಿಷೇಧ ಮಾಡಿತ್ತು. 2016ರಲ್ಲಿ ಕೇಂದ್ರ ಸರಕಾರ 500, 1,000 ರೂ. ನೋಟು ನಿಷೇಧ ಮಾಡಿತು. ಈ ಎಲ್ಲ ನೋಟುಗಳೂ ಇಲ್ಲಿವೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.