ಮಲ್ಪೆ: ಬಸ್ ತಂಗುದಾಣ ಕೆಡವಿದರೂ ಇನ್ನೂ ತೆರವಾಗದ ಅವಶೇಷಗಳು
Team Udayavani, Sep 4, 2022, 2:43 PM IST
ಮಲ್ಪೆ: ಮಲ್ಪೆ ಮುಖ್ಯರಸ್ತೆ ಹಳೆ ಪೋಸ್ಟ್ ಆಪೀಸಿನ ಬಳಿ ಇದ್ದ ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿದ್ದ ಬಸ್ ತಂಗುದಾಣವನ್ನು ತಿಂಗಳ ಹಿಂದೆ ನಗರಸಭೆ ಕೆಡವಿದರೂ ಅದರ ಕಾಂಕ್ರೀಟ್ ಸ್ಲ್ಯಾಬ್, ಪಿಲ್ಲರ್ಗಳನ್ನು ತೆರವುಗೊಳಿಸದೆ ಅಲ್ಲೇ ಬಿಟ್ಟು ಹೋಗಿರುವುದು ಸಾರ್ವಜನಿಕರಿಗೆ ಸಮಸ್ಯೆಯುಂಟು ಮಾಡಿದೆ.
ಶಿಥಿಲಗೊಂಡ ಬಸ್ ತಂಗುದಾಣದ ಬಗ್ಗೆ ಪತ್ರಿಕೆಯಲ್ಲಿ ಬಂದ ತತ್ಕ್ಷಣ ನಗರಸಭೆ ಕೆಡವಲು ಮುಂದಾಗಿತ್ತು. ಆದರೆ ಕೆಡವಿದ ಆನಂತರ ಸ್ಲ್ಯಾಬ್ ಹಾಗೂ ಇನ್ನಿತರ ತ್ಯಾಜ್ಯವನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ. ಕಾಂಕ್ರಿಟ್ ಒಳಗಿದ್ದ ಕಬ್ಬಿಣದ ರಾಡ್ಗಳು ಕಾಂಕ್ರಿಟ್ನೊಂದಿಗೆ ಚೆಲ್ಲಪಿಲ್ಲಿಯಾಗಿ ಹರಡಿದ್ದು ಇದರಿಂದ ಇಲ್ಲಿ ಬಸ್ಸು ಕಾಯಲು ಬಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತದೆ. ಪ್ರಯಾಣಿಕರು ಬಸ್ ಕಾಯಲು ರಸ್ತೆಯಲ್ಲೆ ನಿಲ್ಲುವ ಪ್ರಸಂಗ ಎದುರಾಗಿದೆ. ಇದು ಅಪಘಾತಕ್ಕೂ ಅಹ್ವಾನ ನೀಡಿದಂತಾಗುತ್ತದೆ. ತತ್ಕ್ಷಣ ಅವಶೇಷಗಳನ್ನು ಇಲ್ಲಿಂದ ತೆರವುಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಇಲ್ಲಿ ತಂಗುದಾಣ ಇಲ್ಲದೆ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಮಳೆ ಬಸಿಲಿಗೆ ಮೈಯೊಡ್ಡಿ ರಸ್ತೆ ಬದಿ ಬಸ್ಗಾಗಿ ಕಾಯುವ ಸ್ಥಿತಿ ಉಂಟಾಗಿದೆ. ತತ್ಕ್ಷಣದಲ್ಲಿ ಸಂಬಂಧಪಟ್ಟ ಆಡಳಿತ ಇಲ್ಲಿ ತಾತ್ಕಾಲಿಕ ನೆಲೆಯಲ್ಲಿ ಬಸ್ಸು ತಂಗುದಾಣವನ್ನು ನಿರ್ಮಿಸಬೇಕು ಎಂದು ಸಮಾಜ ಸೇವಕರಾದ ಸೀrವನ್ ಅಮನ್ನ, ತುಕರಾಮ ಸುವರ್ಣ ಆಗ್ರಹಿಸಿದ್ದಾರೆ.
ಅವಶೇಷಗಳ ತೆರವಿಗೆ ಕ್ರಮ: ಬಸ್ ತಂಗುದಾಣವನ್ನು ಕೆಡವುವ ಸಂದರ್ಭದಲ್ಲೇ ಅದರ ಅವಶೇಷಗಳನ್ನು ಅಲ್ಲಿಂದ ತೆರವುಗೊಳಿಸಲು ಹೇಳಲಾಗಿತ್ತು. ಸ್ಲ್ಯಾಬ್ಗಳು ಅಲ್ಲಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ತತ್ಕ್ಷಣ ಸಂಬಂಧಪಟ್ಟವರಿಗೆ ತೆರವುಗೊಳಿಸಲು ತಿಳಿಸಲಾಗುತ್ತದೆ. –ಸುಮಿತ್ರಾ ನಾಯಕ್, ಅಧ್ಯಕ್ಷರು ಉಡುಪಿ ನಗರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ