ಅಂಬೆಗಾಲಿಕ್ಕುತ್ತಿದೆ ಇಂದ್ರಾಳಿ, ಸಗ್ರಿ ವಾರ್ಡ್‌ಗಳ ಹೂಳೆತ್ತುವ ಕೆಲಸ

ಅಪಾಯಕಾರಿ ಮರಗಳಿವೆ,ಡ್ರೈನೇಜ್‌ನದ್ದೂ ಸಮಸ್ಯೆ

Team Udayavani, May 30, 2020, 5:16 AM IST

ಅಂಬೆಗಾಲಿಕ್ಕುತ್ತಿದೆ ಇಂದ್ರಾಳಿ, ಸಗ್ರಿ ವಾರ್ಡ್‌ಗಳ ಹೂಳೆತ್ತುವ ಕೆಲಸ

ಈ ಬೇಸಗೆಯಲ್ಲಿ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಬಹುತೇಕ ದಿನಗಳನ್ನು ಕೋವಿಡ್ 19 ಲಾಕ್‌ಡೌನ್‌ ನುಂಗಿ ಹಾಕಿದೆ. ನಿರ್ಬಂಧಗಳು ತೆರವಾಗಿ ಜನಜೀವನ ಸಹಜತೆಗೆ ಬರುತ್ತಿರುವ ಸಮಯವಿದು. ಇನ್ನುಳಿದ ಕೆಲವೇ ದಿನಗಳಲ್ಲಿ ಮಳೆಗಾಲದ ಸಿದ್ಧತೆಗಳು ಮುಗಿಯಬೇಕು ಎಂಬ ಆಗ್ರಹ ಈ ಸರಣಿಯ ಹಿಂದಿದೆ.

ಉಡುಪಿ: ವಾರ್ಡ್‌ಗಳಲ್ಲಿ ಮಳೆಗಾಲದ ಪೂರ್ವ ಸಿದ್ಧತೆಗಳ ವೇಗ ಹೆಚ್ಚಬೇಕಿರುವ ಈ ಸಮಯ ದಲ್ಲಿ ಉಡುಪಿ ನಗರಸಭೆಗೆ ಕಾರ್ಮಿಕರ ಅಭಾವವೇ ದೊಡ್ಡ ಸಮಸ್ಯೆ. ಇದರ ಪರಿಣಾಮ ಇಂದ್ರಾಳಿ ಮತ್ತು ಸಗ್ರಿ ವಾರ್ಡ್‌ಗಳಲ್ಲಿಯೂ ಎದ್ದು ಕಾಣಿಸುತ್ತಿದೆ.

ಈ ಎರಡೂ ವಾರ್ಡ್‌ಗಳಲ್ಲಿ ಮಳೆಗಾಲದ ಪೂರ್ವ ತಯಾರಿ ಇನ್ನೂ ಆರಂಭದ ಹಂತದಲ್ಲೇ ಇದೆ. ಕಳೆದ ವರ್ಷ ಈ ಹೊತ್ತಿಗಾಗಲೇ ಚರಂಡಿಗಳ ಹೂಳೆ ತ್ತುವುದೂ ಸೇರಿದಂತೆ ಇತರ ಕೆಲಸಕಾರ್ಯಗಳು ಮುಗಿದುಹೋಗಿದ್ದವು.

ಹಲವು ವರ್ಷಗಳಿಂದ ಸಮಸ್ಯೆ
ಸಗ್ರಿ ಕುಂಡೇಲುವಿನಿಂದ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ, ರೈಲ್ವೇ ಬ್ರಿಡ್ಜ್ ಭಾಗ, ಸಗ್ರಿನೋಳೆ ದೇವರಾಯ ಪ್ರಭು ಮನೆಯಿಂದ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ವರೆಗಿನ ತೋಡುಗಳಲ್ಲಿ ಹೂಳು ತುಂಬಿದೆ. ಅಕ್ಕಪಕ್ಕದ ಪ್ರದೇಶ ಮತ್ತು ಗದ್ದೆಗಳಿಗೆ ನೀರು ಉಕ್ಕಿ ಹರಿಯುವುದು ಮಳೆಗಾಲದಲ್ಲಿ ಸಾಮಾನ್ಯ. ವಿದ್ಯಾರತ್ನನಗರ, ಲಕ್ಷ್ಮೀಂದ್ರ ನಗರ, ಹಯಗ್ರೀವ ನಗರ, ಆದಿ ಶಕ್ತಿ ದೇವಸ್ಥಾನ, ಬಾಲಾಜಿ ಲೇಔಟ್‌, ಸಗ್ರಿ ಚಕ್ರತೀರ್ಥ, ಮಲೆ ಜುಮಾದಿ ದೈವಸ್ಥಾನ, ಪುರುಷೋತ್ತಮ ನಗರ, ಮನೋಲಿಗುಜ್ಜಿ; ಇಂದ್ರಾಳಿ ವಾರ್ಡ್‌ನ ಅನಂತಕಲ್ಯಾಣ ಮುಖ್ಯರಸ್ತೆ, ಮಂಜುಶ್ರೀ ನಗರ, ಮಂಚಿಕುಮೇರಿ, ದುರ್ಗಾನಗರ, ಇಂದ್ರಾಳಿ, ವಿ.ಪಿ. ನಗರ ಇತ್ಯಾದಿ ಕಡೆ ಚರಂಡಿ ಹೂಳೆತ್ತುವ ಕೆಲಸ ಇನ್ನಷ್ಟೇ ಆಗಬೇಕಿದೆ.

ಡ್ರೈನೇಜ್‌, ದಾರಿ ದೀಪದ
ಸಮಸ್ಯೆ, ಅಪಾಯಕಾರಿ ಮರಗಳು
ವಿದ್ಯಾರತ್ನನಗರ ಭಾಗದಿಂದ ಕೊಳಚೆ ನೀರು ಸಗ್ರಿ ವಾರ್ಡ್‌ನ ಕೆಲವು ಭಾಗಕ್ಕೆ ಬರುತ್ತಿರುವುದು ದೊಡ್ಡ ಸಮಸ್ಯೆ. ಇದರಿಂದ 6-7 ಬಾವಿಗಳ ನೀರು ಕಲುಷಿತವಾಗಿದೆ. ಕೆಲವು ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ಈ ವ್ಯಾಪ್ತಿಯ ಅನೇಕ ಕಡೆ ದಾರಿ ದೀಪ ಹಾಳಾಗಿವೆ. ಇಂದ್ರಾಳಿ ಮುಖ್ಯ ರಸ್ತೆಯ ಕೆಲವು ಕಡೆ ಸರಿಪಡಿಸಿದ್ದರೆ ಹಲವೆಡೆ ಬಾಕಿಯಿವೆ. ಗುರುವಾರ ಇಂದ್ರಾಳಿ 2ನೇ ಕ್ರಾಸ್‌ ಬಳಿ ಮರ ಬಿದ್ದು ರಸ್ತೆ ಬ್ಲಾಕ್‌ ಆಗಿತ್ತು. ವಿದ್ಯುತ್‌ ಕಂಬಗಳಿಗೆ ಹಾನಿಯಾಗಿತ್ತು. ಶುಕ್ರವಾರ ಮರ ತೆರವುಗೊಳಿಸಲಾಗಿದೆ. ಇಂತಹ ಅಪಾಯಕಾರಿ ಮರಗಳು ಇಂದ್ರಾಳಿ ಹೈಸ್ಕೂಲ್‌ ಮತ್ತಿತರೆಡೆ ಇವೆ. ಇವುಗಳಿಂದ ಅಪಾಯ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸ್ಥಳೀಯ ನಿವಾಸಿ ಅರುಣ್‌ ಕುಮಾರ್‌ ಅವರ ಒತ್ತಾಯ.

ಸಂಪರ್ಕ ರಸ್ತೆ ಕಾಮಗಾರಿ ಬಾಕಿ
ಮಂಚಿ ಮೂಲಸ್ಥಾನದಿಂದ ಕುಕ್ಕಿಕಟ್ಟೆಯಾಗಿ ಮಣಿಪಾಲಕ್ಕೆ ತೆರಳುವ ರಸ್ತೆ, ಮಂಜುಶ್ರೀ ನಗರದಿಂದ ವಾಗ್ಲೆ ಸ್ಟೋರ್‌ ಬಳಿ ಸಂಪರ್ಕಿಸುವ ರಸ್ತೆಯ ಕಾಮಗಾರಿ ಬಾಕಿ ಇದೆ ಎಂದು ಸ್ಥಳೀಯರಾದ ರವೀಂದ್ರ ನಾಯಕ್‌ ಹೇಳಿದ್ದಾರೆ.

ಕೆಲಸ ನಿಧಾನ
ಕಳೆದ ವರ್ಷ ಇಷ್ಟು ಹೊತ್ತಿಗೆ ಚರಂಡಿಗಳಲ್ಲಿ ಬೆಳೆದ ಗಿಡಗಂಟಿಗಳನ್ನು ಕತ್ತರಿಸಿ ತೋಡನ್ನು ಸರಿಪಡಿಸಲಾಗಿತ್ತು. ಹಯಗ್ರೀವ ನಗರದ ಕೆಲವೆಡೆ ಸೋಮವಾರದಿಂದ ಹೂಳೆತ್ತುವ ಕೆಲಸ ಆರಂಭವಾಗಿದೆ. ವಾರಕ್ಕೊಮ್ಮೆ ಮಾತ್ರ ಕಾರ್ಮಿಕರು ಸಿಗುವುದರಿಂದ ನಿಧಾನವಾಗುತ್ತಿದೆ. ವಿದ್ಯಾರತ್ನ ಭಾಗದಲ್ಲಿ ಡ್ರೈನೇಜ್‌ ಅಸಮರ್ಪಕ ನಿರ್ವಹಣೆಯಿಂದಾಗಿ ಸಗ್ರಿ ವಾರ್ಡ್‌ನ ಕೆಲವು ಮನೆಗಳ ಬಾವಿ ನೀರು ಹಾಳಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತಾಡಿದರೂ ಬಗೆಹರಿದಿಲ್ಲ.
-ಭಾರತೀ ಪ್ರಶಾಂತ್‌,
19ನೇ ಸಗ್ರಿ ವಾರ್ಡ್‌, ನಗರಸಭೆ ಸದಸ್ಯೆ

ಪೂರ್ವ ತಯಾರಿ ಇನ್ನಷ್ಟೇ ಆಗಬೇಕು
ಮಳೆಗಾಲದ ಪೂರ್ವ ಸಿದ್ಧತೆ ಇನ್ನಷ್ಟೇ ವೇಗ ಪಡೆಯಬೇಕಿದೆ. ಜೆಸಿಬಿ ಬಳಸಿ ಎರಡು ದಿನಗಳ ಕಾಲ ಆಗುವಷ್ಟು ಕೆಲಸ ಇದೆ. ಕಾರ್ಮಿಕರ ಕೊರತೆ ಎದುರಾಗಿದೆ. ಅಗತ್ಯ ಕಾರ್ಮಿಕರನ್ನು ನೀಡುವಂತೆ ನಗರ ಸಭೆಯಲ್ಲಿ ಬೇಡಿಕೆ ಇರಿಸಿದ್ದೇವೆ.
-ಅಶೋಕ್‌ ನಾಯಕ್‌,
20ನೇ ಇಂದ್ರಾಳಿ ವಾರ್ಡ್‌, ನಗರಸಭೆ ಸದಸ್ಯ

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Fraud Case ಟರಿಂಗ್‌ ವ್ಯವಹಾರದ ಕಮಿಷನ್‌ ಹೆಸರಲ್ಲಿ ವಂಚನೆ

Fraud Case ಟರಿಂಗ್‌ ವ್ಯವಹಾರದ ಕಮಿಷನ್‌ ಹೆಸರಲ್ಲಿ ವಂಚನೆ

Udupi 36 ವರ್ಷಗಳ ಹಿಂದಿನ ಆರೋಪಿ ಬಂಧನ

Udupi 36 ವರ್ಷಗಳ ಹಿಂದಿನ ಆರೋಪಿ ಬಂಧನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.