ಕುಡಿಯುವ ನೀರು : ಕಾರ್ಯ ಯೋಜನೆ ಪರಿಶೀಲನೆ
Team Udayavani, May 18, 2020, 5:00 AM IST
ಉಡುಪಿ: ನಗರಸಭೆ ಹಾಗೂ ಅದಕ್ಕೆ ಹೊಂದಿಕೊಂಡ ಗ್ರಾ.ಪಂ.ಗೆ ಕುಡಿಯುವ ನೀರನ್ನು ಪೂರೈಸುವ ಕಾರ್ಯಯೋಜನೆಯ ಹಾಗೂ ನೀರಿನ ಸಮಸ್ಯೆ ನಿವಾರಿಸುವ ಬಗ್ಗೆ ಶಾಸಕ ರಘುಪತಿ ಭಟ್ ಅವರು ಪರಿಶೀಲನೆ ನಡೆಸಿದರು.
ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಬಗ್ಗೆ ಇಂದಿನ ದಿನದವರೆಗೆ 35 ದಿವಸಗಳ ನಿರಂತರ ಹಿರಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಶಿರೂರು ಮಠದ ಗುಂಡಿಯಿಂದ ಪಂಪ್ ಮೂಲಕ ನೀರನ್ನು ಮೇಲಕ್ಕೆ ಎತ್ತಿ ಮಾಣೈ ಹಾಗೂ ಭಂಡಾರಿ ಗುಂಡಿ ಎಂಬಲ್ಲಿ ನೀರು ಸಂಗ್ರಹವಾಗುತ್ತಿರುವ ಬಗ್ಗೆ ಹಾಗೂ ನೀರಿನ ಒಳಹರಿವು ಮತ್ತು ಶೇಖರಣೆ ಬಗ್ಗೆ ಪ್ರಾರಂಭದಿಂದ ಇಂದಿನವರೆಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭ ಕಳೆದ ವರುಷ 5 ದಿನಕ್ಕೊಮ್ಮೆ ಕುಡಿಯುವ ನೀರು ಕೊಟ್ಟಿದ್ದು, ಈ ವರ್ಷ ಪ್ರತಿದಿನ ಕುಡಿಯುವ ನೀರು ಪೂರೈಸುವಂತೆ ಆಗಿದೆ. ಬಜೆ ಡ್ಯಾಮ್ನಲ್ಲಿ ಸಂಗ್ರಹವಾದ ನೀರು ಮುಂದಿನ 60 ದಿನಗಳ ವರೆಗೆ ನಗರಸಭೆ ಹಾಗೂ ಅದಕ್ಕೆ ಹೊಂದಿಕೊಂಡ ಗ್ರಾ.ಪಂ.ಗಳಿಗೆ ಪ್ರತಿದಿನ ಕುಡಿಯುವ ನೀರಿನ ಆವಶ್ಯಕತೆಗಳನ್ನು ಪೂರೈಸುವ ಬಗ್ಗೆ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರು ಸಂಬಂಧಪಟ್ಟ ನಗರಸಭೆ ಕಾರ್ಯಪಾಲ ಅಭಿಯಂತರಿಗೆ ಮತ್ತು ಸಿಬಂದಿವರ್ಗದವರಿಗೆ ನೀರಿನ ಸಂಗ್ರಹಣೆಯ ಬಗ್ಗೆ ಮತ್ತು ನಿಗದಿತ ಕಾಲದಲ್ಲಿ ನೀರು ಶೇಖರಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ