ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗ ಭೀತಿ
ಅರೆಬರೆ ಒಳಚರಂಡಿ, ರಸ್ತೆಗೆ ಹಾನಿ
Team Udayavani, Sep 23, 2020, 4:29 AM IST
ನಗರದಿಂದ ಮುಖ್ಯ ಪೇಟೆವರೆಗೆ ಅಲ್ಲಲ್ಲಿ ಬಿದ್ದ ಹೊಂಡಗಳು.
ಕಾರ್ಕಳ: ಭಾರೀ ಮಳೆಯಿಂದ ನಗರದ ರಸ್ತೆಗಳು ಹಾನಿಗೀಡಾಗಿದ್ದು ಸಾರ್ವಜನಿಕರು ನಿತ್ಯ ಸಂಕಟ ಅನುಭವಿಸುವಂತಾಗಿದೆ. ನಗರದ ವೆಂಕಟ್ರಮಣ ದೇವಸ್ಥಾನದಿಂದ ಬಂಡಿ ಮಠದವರೆಗಿನ ರಸ್ತೆ ತನಕ ಅಲ್ಲಲ್ಲಿ ಹೊಂಡ ನಿರ್ಮಾಣ ವಾಗಿದೆ. ಅವಘಡ ತಪ್ಪಿಸಲು ಸವಾರರಿಗೆ ಹೊಂಡಗಳ ಅರಿವಾಗಲೆಂದು ಸ್ಥಳೀಯರೇ ತರಕಾರಿ ಟ್ರೇ, ಗಿಡಗಳನ್ನು ಅಡ್ಡವಿರಿಸಿ, ಅವಘಡ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಕೆಲವೆಡೆ ಬ್ಯಾರಿಕೇಡ್ ಇರಿಸಿ ಅಪಾಯ ತಪ್ಪಿಸುವ ಪ್ರಯತ್ನವೂ ನಡೆದಿದೆ.
ವೆಂಕಟರಮಣ ದೇವಸ್ಥಾನದಿಂದ ಮೂರು ಮಾರ್ಗದವರೆಗೆ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಇಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣಗೊಂಡಿವೆ. ವಾಹನ ಸವಾರರು, ಪಾದಚಾರಿಗಳು ಹಿಡಿಶಾಪ ಹಾಕಿಕೊಂಡು ಇಲ್ಲಿ ಓಡಾಡುತ್ತಿದ್ದಾರೆ. ಒಳಚರಂಡಿಯ ಅರೆಬರೆ ಕಾಮಗಾರಿಯಿಂದ ರಸ್ತೆಗಳಿಗೆೆ ಹಾನಿಯಾಗಿ ಸಮಸ್ಯೆಯಾಗಿದೆ.
ಕೊಳಚೆ ನೀರಿನ ಸಮಸ್ಯೆ
ಮ್ಯಾನ್ಹೋಲ್ಗಳಿಂದ ಹೊರಬಂದ ಕೊಳಚೆ ನೀರು ರಸ್ತೆಯ ಗುಂಡಿಗಳಿಗೆ ಸೇರುತ್ತಿದೆ. ದ್ವಿಚಕ್ರ ಸವಾರರು, ಹಾಗೂ ಪಾದಚಾರಿಗಳಿಗೆ ಕೊಳಚೆ ನೀರಿನ ಎರಚಾಟವಾಗುತ್ತಿದೆ. ಚರಂಡಿ ಇಲ್ಲದಿರುವುದರಿಂದ ನೀರು ರಸ್ತೆಯಲ್ಲೆ ಹರಿಯುತ್ತಿದೆ.
ಸಾಂಕ್ರಾಮಿಕ ರೋಗದ ಭೀತಿ
ಕೊಳಚೆ ನೀರು ಮಳೆ ನೀರಿಗೆ ಸೇರಿ ಪರಿಸರ ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಬಾಧೆಗೂ ಕಾರಣವಾಗುತ್ತಿದೆ. ಸ್ವತ್ಛತೆಗೆ ಹಿನ್ನಡೆಯಾಗಿದೆ. ಒಂದೆಡೆ ಇಕ್ಕಟ್ಟಾದ ರಸ್ತೆ, ಹೆಚ್ಚುತ್ತಿರುವ ವಾಹನ ಸಂಖ್ಯೆ ಈ ಮಧ್ಯೆ ರಸ್ತೆಗಳು ಈ ಸ್ಥಿತಿಗೆ ತಲುಪಿದ್ದು,, ಕೊಳಚೆ ನೀರಿನಿಂದ ಪರಿಸರ ಕಲುಷಿತಗೊಂಡಿದೆ. ಪೇಟೆಗೆ ಬರುವವರಿಗೆ ರೋಗ ಭೀತಿಯೂ ಕಾರಣವಾಗುತ್ತಿದೆ.
ಪರಿಹಾರಕ್ಕೆ ಮುಂದಾಗಿ!
ಪುರಸಭೆ ವ್ಯಾಪ್ತಿಯ ರಸ್ತೆ, ಚರಂಡಿ ಸಮಸ್ಯೆ ಇತ್ಯಾದಿಗಳ ಕುರಿತು ಇಲ್ಲಿಯ ಯಾವ ಆಡಳಿತಗಳು, ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ
ರಸ್ತೆ ಅವ್ಯವಸ್ಥೆಯಿಂದ ರೋಸಿ ಕೆಲವರು ಮೊಬೆ„ಲ್ಗಳಲ್ಲಿ ವೀಡಿಯೋ ಚಿತ್ರೀಕರಣ ನಡೆಸಿ, ಇಲ್ಲಿನ ರಸ್ತೆಯ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ರಸ್ತೆಯ ಕುರಿತಾಗಿ ವಿಡಂಬಣೆಗಳ ಬರಹದ ಮೂಲಕವೂ ಜನಪ್ರತಿನಿಧಿಗಳ, ಆಡಳಿತ ವ್ಯವಸ್ಥೆಗೆ ಮುಜುಗರ ತರುವ ಪ್ರಯತ್ನ ನಡೆಸಿದ್ದಾರೆ. ಇಷ್ಟಿದ್ದರೂ ಇತ್ತ ಕಡೆ ಗಮನಹರಿಸದೆ ಇರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶೀಘ್ರ ಹೊಂಡ ಮುಚ್ಚುಗಡೆ
ಮೊನ್ನೆ ಸುರಿದ ಭಾರೀ ಮಳೆಯಿಂದ ನಗರದಲ್ಲಿ ಸಮಸ್ಯೆ ಉಂಟಾಗಿದೆ. ಶೀಘ್ರದಲ್ಲೇ ಯುಜಿಡಿ ಕೆಲಸ ಆರಂಭವಾಗುತ್ತದೆ. ಈಗ ರಸ್ತೆಯಲ್ಲಿ ಆಗಿರುವ ದೊಡ್ಡ ಹೊಂಡಗಳನ್ನು ಮುಚ್ಚುವ ಕೆಲಸ ನಡೆಸುತ್ತೇವೆ.
-ರೇಖಾ ಶೆಟ್ಟಿ , ಮುಖ್ಯಾಧಿಕಾರಿ, ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
MUST WATCH
ಹೊಸ ಸೇರ್ಪಡೆ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ