ಭಕ್ತರ ಹೃದಯದಲ್ಲಿಯೇ ದೇವರಿದ್ದಾನೆ : ಸಾದ್ವಿ ಮಾತಾನಂದಮಯೀ
ಪಳ್ಳಿ ಅಡಪಾಡಿ ಶ್ರೀಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ; ಮಾತೃಸಂಗಮ
Team Udayavani, Mar 27, 2023, 7:11 PM IST
ಬೆಳ್ಮಣ್: ಶ್ರದ್ಧೆಯಿಂದ ಮಾಡಿದ ಪೂಜೆ , ಸೇವೆಗಳು ಫಲಪ್ರದವಾಗಿರುತ್ತವೆ, ಭಕ್ತರ ಹೃದಯದಲ್ಲಿಯೇ ದೇವರಿದ್ದಾನೆ ಅಲ್ಲದೆ ಅಚಲಭಕ್ತಿಯಿಂದ ಭಗವಂತನನ್ನು ಪ್ರಾರ್ಥಿಸಿದರೆ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಂ ಇಲ್ಲಿನ ಸಾದ್ವಿ ಮಾತಾನಂದಮಯೀ ಹೇಳಿದರು.
ಅವರು ರವಿವಾರ ಶ್ರೀಕ್ಷೇತ್ರ ಅಡಪಾಡಿ ಶ್ರೀಉಮಾಮಹೇಶ್ವರ, ಶ್ರೀದುರ್ಗಾಪರಮೇಶ್ವರೀ ದೇವಳದ ವಾಯುವ್ಯ ಭಾಗದ ಪುರಾತನ ಆಲಡೆ ಸಾನಿಧ್ಯಗಳ ಪ್ರತಿಷ್ಠಾಪನಾಂಗ ಶ್ರೀಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವ ಹಾಗೂ ಸಹಸ್ರ ಚಂಡಿಕಾ ಮಹಾಯಾಗದ ಸಂದರ್ಭ ”ಮಾತೃ ಸಂಗಮ” ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಪ್ರೀತಿ ಇದ್ದಲ್ಲಿ ಭಗವಂತನ ಸಾನಿಧ್ಯವಿರುತ್ತದೆ, ಭಕ್ತಿ ಇದ್ದಾಗ ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ ಎಂದ ಅವರು, ದುಷ್ಟರ ಸಂಹಾರ ಶಿಷ್ಟರ ಏಳಿಗೆಗಾಗಿ ದೇವಿಯ ಅವತಾರ ಆಗಿದ್ದು, ಇಲ್ಲಿ ಮಾತೃ ಸಂಗಮದ ಮೂಲಕ ದೇವಿಯ ಆರಾಧನೆ ನಡೆಯುತ್ತಿದೆ ಎಂದು ಹರ್ಷ ವ್ಯಕ್ತ ಪಡಿಸಿದರು. ಮಾತೆಯಂದಿರಿಗೆ ಗೌರವ ಇದೆಯೋ ಅಲ್ಲಿ ದೇವತೆಗಳು ಇರುತ್ತಾರೆ. ನಮ್ಮ ಪೀಳಿಗೆಗೆ ಭದ್ರವಾದ ತಳಹದಿ ನಿರ್ಮಾಣ ಮಾಡುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ. ನಮ್ಮತನ ಉಳಿಸಿ ಸಂಸ್ಕೃತಿ, ಪರಂಪರೆಯ ಸಂಸ್ಕಾರವನ್ನು ಮಕ್ಕಳಲ್ಲಿ ಮಮತೆಯಿಂದ ಜಾಗ್ರತಿ ಮಾಡುವ ಗುರುತರ ಜವಾಬ್ದಾರಿ ತಾಯಂದಿರ ಮೇಲಿದೆ ಎಂದರು.
ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಕುಂದರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರಖರ ಬಾಲವಾಗ್ಮಿ ಹಾರಿಕಾ ಮಂಜುನಾಥ್ ಬೆಂಗಳೂರು, ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ರೂಪಾ ಎಂ, ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ,ಅಖೀಲಾ ವಾಸುದೇವ, ಕೆ.ಎಂ.ಸಿ ಎಸೋಸಿಯೇಟ್ ಪ್ರೊಫೆಸರ್ ಡಾ.ಅಂಜಲಿ ಸುನಿಲ್, ಡಾ,ರಾಜೇಶ್ವರೀ ಕೊರಡ್ಕಲ್ ಮೂಡುಬೆಳ್ಳೆ, ಡಾ.ಅಂಜಲಿ ಬೋರ್ಕಾರ್ ಮೂಡುಬೆಳ್ಳೆ, ಮಣಿಪಾಲ ಆರ್ಎಸ್ಬಿ ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ಎಸ್.ನಾಯಕ್ ಅಂಬಲಪಾಡಿ, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಲೆ ಬಂಟಕಲ್ಲು, ತಾ.ಪಂ.ಮಾಜಿ ಸದಸ್ಯೆ ವಿದ್ಯಾ ಎಂ.ಸಾಲಿಯಾನ್ ಪಳ್ಳಿ ಮುಖ್ಯ ಅತಿಥಿಗಳಾಗಿದ್ದರು.
ಅಡಪಾಡಿ ಕ್ಷೇತ್ರದ ಸುಮಂಗಲ ಪುಂಡಲೀಕ ನಾಯಕ್ ಅತಿಥಿಗಳನ್ನು ಗೌರವಿಸಿದರು. ಮಲ್ಲಿಕಾ ರೂಪೇಶ್ ಸ್ವಾಗತಿಸಿದರು. ಸಂಗೀತಾ ಕುಲಾಲ್ ನಿರೂಪಿಸಿದರು. ಅಕ್ಷಯಾ ಅರುಣ್ ಧನ್ಯವಾದವಿತ್ತರು.
ಬಾಕ್ಸ್ಗೆ: ಪ್ರಖರ ಬಾಲವಾಗ್ಮಿ ಹಾರಿಕಾ ಮಂಜುನಾಥ್ ಬೆಂಗಳೂರು ಇವರು ಮಾತನಾಡಿ, ನಮ್ಮ ದೇಶ ಮಾತೃ ಸಂಸ್ಕೃತಿಯ ತವರಾಗಿದೆ, ನಮ್ಮ ಸಂಸ್ಕೃತಿ ಹೆಣ್ಣನ್ನು ಅಡುಗೆ ಮನೆಗೆ ಸೀಮಿತಗೊಳಿಸಿಲ್ಲ ಎಂದರಲ್ಲದೆ ಭೂಮಿತಾಯಿ ಲಕ್ಷ್ಮೀ ಸ್ವರೂಪಿ, ಎಲ್ಲಾ ಶಕ್ತಿಸಾನಿಧ್ಯಗಳು ಮಾತೃಶಕ್ತಿಯ ಸ್ವರೂಪವಾಗಿದ್ದು ನಮ್ಮ ಸಂಸ್ಕೃತಿ ಕಾಟಾಚಾರದ ಸೊತ್ತಲ್ಲ. ವೇದಗಳನ್ನು ಕೊಟ್ಟ ಪರಂಪರೆ ನಮ್ಮದು. ದೇಶದ ಧರ್ಮ ಸಂಸ್ಕೃತಿಯ ಮೇಲೆ ಧಾಳಿಯಾದಾಗ ರಕ್ಷಣೆಯ ನೇತೃತ್ವ ವಹಿಸಿ ಹೋರಾಡಿದ ಅಬ್ಬಕ್ಕ, ಚೆನ್ನಮ್ಮ, ಓಬವ್ವ, ಬೆಳವಡಿ ಮಲ್ಲಮ್ಮ ಮೊದಲಾದವರ ಪರಂಪರೆ ನಮ್ಮದು. ತಾಯಂದಿರು ಮಕ್ಕಳ ಜೀವನದಲ್ಲಿ ಧರ್ಮವನ್ನು, ಧಾರ್ಮಿಕತೆಯನ್ನು ಜಾಗ್ರತಿಗೊಳಿಸುವ ಮೂಲಕ ಉತ್ತಮ ಸಂಸ್ಕಾರವನ್ನು ನೀಡುವಲ್ಲಿ ಪ್ರಧಾನ ಪಾತ್ರದಾರಿಗಳು. ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳು, ಲವ್ ಜಿಹಾದ್ ಪ್ರಕರಣಗಳನ್ನು ಮೆಟ್ಟಿನಿಲ್ಲವಂತಹ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಮಾತೃಶಕ್ತಿಯ ಪಾತ್ರ ಮಹತ್ವದ್ದಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು