Shirva; ಮಣ್ಣು ಕುಸಿದು ಬಾವಿಗೆ ಬಿದ್ದು ಮಹಿಳೆ ಸಾವು
Team Udayavani, Jul 3, 2023, 7:24 PM IST
ಶಿರ್ವ: ವಿಪರೀತ ಮಳೆ ಬರುತ್ತಿದ್ದ ಸಂದರ್ಭ ಮನೆಯ ಬಳಿಯ ಆವರಣಗೋಡೆ ಇಲ್ಲದ ಬಾವಿಯ ಮಣ್ಣು ಕುಸಿದು ಬಾವಿಗೆ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ಶಿರ್ವ ಠಾಣಾ ವ್ಯಾಪ್ತಿಯ ಪಾದೂರು ಕೂರಾಲು ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಪಾದೂರು ಕೂರಾಲು ನಿವಾಸಿ ಅವಿವಾಹಿತ ಮಹಿಳೆ ಗುಲಾಬಿ(43) ಮೃತಪಟ್ಟವರು. ಸೋಮವಾರ ಬೆಳಿಗ್ಗೆ ತನ್ನ ನಿತ್ಯದ ಕೆಲಸಕ್ಕಾಗಿ ಆವರಣವಿಲ್ಲದ ಬಾವಿಯ ಬಳಿ ಬಿಂದಿಗೆ ತೆಗೆದುಕೊಂಡು ಹೋಗಿದ್ದು,ಸ್ವಲ್ಪ ಸಮಯದಲ್ಲಿ ಜೋರಾಗಿ ಶಬ್ದ ಕೇಳಿ ಬಂದಿತ್ತು. ಮೃತರ ಅಕ್ಕ ಬಾವಿಯ ಬಳಿ ಬಂದು ನೋಡಿದಾಗ ಬಾವಿಯ ಮಣ್ಣು ಕುಸಿದು ಮಣ್ಣು ಸಮೇತ ಆಕೆ ಬಾವಿಗೆ ಬಿದ್ದಿದ್ದರು. ಕೂಡಲೇ ನೆರೆಕರೆಯವರ ಸಹಾಯದಿಂದ ಮೇಲಕ್ಕೆತ್ತಿದಾಗ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದು ಉಸಿರಾಟ ನಿಂತು ಮೃತಪಟ್ಟಿದ್ದಾರೆ. ಸಹೋದರಿ ಪ್ರೇಮಾ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ