ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು
ಪ್ರಕರಣ ಬಳಿಕ ಜೈನ ಬ್ರಿಗೇಡ್ನಿಂದ ಬಿಂಬಕ್ಕೆ ರಕ್ಷಣೆ
Team Udayavani, Sep 20, 2020, 3:08 AM IST
ಕಾರ್ಕಳ: ಜೈನ ಕಾಶಿಯ ಮಂಗಲಪಾದೆಯಲ್ಲಿ ಅನಾಥವಾಗಿದ್ದ ಜಿನಬಿಂಬಕ್ಕೆ ಅಪಚಾರ ಮಾಡಿದ ಪ್ರಕರಣ ಇದೀಗ ವೈರಲ್ ಆಗಿದೆ.
ಇಲ್ಲಿನ ನಿರ್ಜನ ಪ್ರದೇಶದಲ್ಲಿ 15 ಅಡಿಯಷ್ಟು ಎತ್ತರವಿರುವ ವಿಗ್ರಹ 40 ವರ್ಷಗಳ ಹಿಂದಿನದ್ದು ಎನ್ನಲಾಗಿದ್ದು ಇದರ ಮೇಲೆ ಕಿಡಿಗೇಡಿಗಳು ಹತ್ತಿ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ತಹಶೀಲ್ದಾರ್ ಮತ್ತು ಕಾರ್ಕಳ ನಗರ ಪೊಲೀಸ್ ಠಾಣೆಗೆ ಜೈನ ಬ್ರಿಗೇಡ್ ಸದಸ್ಯರು ದೂರು ನೀಡಿದ್ದು, ಕೇಸು ದಾಖಲಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಬಿಂಬದ ಸುತ್ತ ಬಳಿಕ ಸ್ವತ್ಛತೆ ನಡೆಸಲಾಗಿದೆ. ಸ್ಥಳದಲ್ಲಿ ತಂತಿಬೇಲಿಯನ್ನೂ ಅಳವಡಿಸಲಾಗಿದೆ. ದಿಲ್ಲಿಯ ವಾಚ್ ಕಂಪೆನಿಯೊಂದರ ಮಾಲಕರು ಭಗವಾನ್ ಮಹಾವೀರ ಸ್ವಾಮಿಯ ವಿಗ್ರಹವನ್ನು ಕೆತ್ತಿಸಿದ್ದು, ಬಳಿಕ ಸೂಕ್ತ ಶಾಸ್ತ್ರೋಕ್ತವಾಗಿ ಇರದಿದ್ದರಿಂದ ಅದನ್ನು ತೆಗೆದುಕೊಂಡು ಹೋಗದೆ, ಬೇರೆಯದನ್ನು ಕೆತ್ತಿಸಿ ತೆಗೆದುಕೊಂಡು ಹೋಗಿದ್ದರು. ಬಳಿಕ ಈ ವಿಗ್ರಹ ಅನಾಥ ವಾಗಿತ್ತು. ಇದೀಗ ವಿಗ್ರಹಕ್ಕೆ ಅಪಚಾರ ವೆಸಗದಂತೆ ಬಂದೋಬಸ್ತ್ ಮಾಡಲಾಗಿದೆ.
ತಾತ್ಕಾಲಿಕ ಬೇಲಿ
ಪ್ರವಾಸ ನೆಪದಲ್ಲಿ ಹೊರಗಿನಿಂದ ಬರುವ ಕೆಲವು ಕಿಡಿಗೇಡಿಗಳು ಇತ್ತೀಚೆಗೆ ಜಿನಬಿಂಬಕ್ಕೆ ಹಾನಿಯುಂಟು ಮಾಡಿದ್ದರು. ಈ ಬಗ್ಗೆ ದೂರು ನೀಡಿದ್ದೆವು. ಸ್ಥಳದಲ್ಲಿ ತಾತ್ಕಾಲಿಕವಾಗಿ ಬೇಲಿ ನಿರ್ಮಿಸಿ, ರಕ್ಷಣೆ ನೀಡಲಾಗಿದೆ.
-ವಿಖ್ಯಾತ್ ಜೈನ್, ಯುವ ನ್ಯಾಯವಾದಿ, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ