ಟ್ರಾಫಿಕ್ ಪೊಲೀಸ್ ಆದ ಶಾಲಾ ವಿದ್ಯಾರ್ಥಿಗಳು!
ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಸಿಗ್ನಲ್ ಪ್ರಾತ್ಯಕ್ಷಿಕೆ
Team Udayavani, Dec 13, 2021, 7:13 PM IST
ಕಾರ್ಕಳ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ರಾಜ್ಯ ಸಂಸ್ಥೆ ಕರ್ನಾಟಕ, ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕಾರ್ಕಳ ಇವುಗ ಳ ವತಿಯಿಂದ ಕಾರ್ಕಳ ತಾಲೂಕಿನ ವಿವಿಧ ಶಾಲೆಯ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಪೊಲೀಸ್ ಸಿಗ್ನಲ್ಗಳ ಅರಿವು ಕಾರ್ಯಕ್ರಮ ನಗರದಲ್ಲಿ ನಡೆಯಿತು.
ರಸ್ತೆ ಸಂಚಾರ ನಿಯಮ, ವಾಹನಗಳು ದಟ್ಟಣೆಯಾಗದಂತೆ ಹೇಗೆ ಟ್ರಾಫಿಕ್ ಸಿಗ್ನಲ್ಗಳನ್ನು ನಿಭಾಯಿಸು ವುದು ಎನ್ನುವುದರ ಅರಿವು ನೀಡುವು ದರ ಮೂಲಕ ವಿದ್ಯಾರ್ಥಿಗಳೇ ಕರ್ತವ್ಯ ಸಾಂದರ್ಭಿಕವಾಗಿ ಹೇಗೆ ನಿರ್ವಹಿಸ ಬಹುದು ಎಂಬುವುದನ್ನು ನಗರ ಠಾಣೆಯ ಕ್ರೈಂ ವಿಭಾಗದ ಅಧಿಕಾರಿ ದಾಮೋದರ, ಹೆಡ್ ಕಾನ್ಸ್ಟೆಬಲ್ ರವೀಂದ್ರ ಮಕ್ಕಳಿಗೆ ತಿಳಿಸಿಕೊಟ್ಟರು.
ಭುವನೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವೃಂದಾ ಶೆಣೈ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಎಸ್ ವಿಟಿ
ಶಾಲಾ ಗೈಡ್ ಶಿಕ್ಷಕಿ ಪ್ರಭಾ, ಭುವನೇಂದ್ರ ಸಂಸ್ಥೆಯ ಪ್ರಾಥಮಿಕ ಶಾಲಾ ಗೈಡ್ ಶಿಕ್ಷಕಿ ಸೀಮಾ ಕಾಮತ್, ಜಿಲ್ಲಾ ಗೈಡ್ ಕಮಿಷನರ್ ಜ್ಯೋತಿ ಜೆ. ಪೈ, ಕಾರ್ಕಳ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಜಗದೀಶ್ ಹೆಗ್ಡೆ, ಉಪಸ್ಥಿತರಿದ್ದರು.
ಇದನ್ನೂ ಓದಿ:ಆದಿವಾಸಿ ಕ್ರೀಡಾಕೂಟವನ್ನು ಪ್ರೋತ್ಸಹಿಸಿ: ಮಧು ಕುಮಾರ್
ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಜಿ. ನಾಯಕ್, ಉಡುಪಿ ಜಿಲ್ಲಾ. ಗೈಡ್ ತರಬೇತಿ ಕಮಿಷನರ್ ಸಾವಿತ್ರಿ ಮನೋಹರ್, ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಕೆ. ವಿಜಯಕುಮಾರ್ ಶುಭ ಹಾರೈಸಿದರು. ಸ್ಥಳಿಯ ಸಂಸ್ಥೆ ಕಾರ್ಯ ದರ್ಶಿ ಭುವನೇಂದ್ರ, ಪ್ರೌಢಶಾಲಾ ಸ್ಕೌಟ್ ಶಿಕ್ಷಕ ಗಣೇಶ್ ಜಾಲೂÕರು ನಿರೂಪಿಸಿದರು. ಭುವನೇಂದ್ರ ಪ್ರೌಢ
ಶಾಲಾ ಗೈಡ್ ಶಿಕ್ಷಕಿ ಇಂದಿರಾ ಪಿ. ನಾಯಕ್ ವಂದಿಸಿದರು. ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಕೆಲವು ಹೊತ್ತು ಸಿಗ್ನಲ್ ಪೊಲೀಸ್ ಆಗುವ ಅನುಭವ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ