ಉಡುಪಿ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ , ಅಂಗವಿಕಲರ ಮತದಾನಕ್ಕೆ ಉತ್ತಮ ಸ್ಪಂದನೆ


Team Udayavani, May 8, 2023, 7:30 AM IST

ಉಡುಪಿ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ , ಅಂಗವಿಕಲರ ಮತದಾನಕ್ಕೆ ಉತ್ತಮ ಸ್ಪಂದನೆ

ಉಡುಪಿ: ಜಿಲ್ಲಾದ್ಯಂತ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರ ಮತದಾನ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಒಟ್ಟು ಶೇ.97 ಮಂದಿ ಮತಚಲಾಯಿಸಿದ್ದಾರೆ. ಬೈಂದೂರು, ಕುಂದಾಪುರ ಹಾಗೂ ಕಾರ್ಕಳದಲ್ಲಿ ಶೇ.98 ಮತದಾನವಾದರೆ ಉಡುಪಿ ಹಾಗೂ ಕಾಪುವಿನಲ್ಲಿ ಶೇ.97 ಮತದಾನವಾಗಿದೆ. ಬೈಂದೂರಿನಲ್ಲಿ 1209 ಮತದಾರರ ಪೈಕಿ 1179, ಕುಂದಾಪುರದಲ್ಲಿ 991 ಮಂದಿಯ ಪೈಕಿ 968, ಉಡುಪಿಯಲ್ಲಿ 902 ಮಂದಿಯ ಪೈಕಿ 874, ಕಾಪುವಿನಲ್ಲಿ 606 ಮಂದಿಯ ಪೈಕಿ 588, ಕಾರ್ಕಳದಲ್ಲಿ 1108 ಮಂದಿಯ ಪೈಕಿ 1083 ಸಹಿತ ಒಟ್ಟು 4816 ಮಂದಿ ಮತದಾರರ ಪೈಕಿ 4692 ಮಂದಿ ಮತಚಲಾಯಿಸಿದ್ದಾರೆ.

ವಿವಿಧ ಕಾರಣ
ಚಲಾವಣೆಯಾಗದ 124 ಮತಗಳ ಪೈಕಿ 55 ಮಂದಿ ನಿಧನ ಹೊಂದಿದವರಾಗಿದ್ದು, ಇನ್ನೂ ಮತ ಪಟ್ಟಿಯಿಂದ ಹೆಸರು ತೆಗೆದಿಲ್ಲ. 66 ಮಂದಿಯ ಮನೆಗೆ ಎರಡು ಬಾರಿ ಭೇಟಿ ನೀಡಿದರೂ ಅವರು ಲಭ್ಯವಿಲ್ಲದ ಕಾರಣ ಮತದಾನ ಸಾಧ್ಯವಾಗಿರಲಿಲ್ಲ. 3 ಮಂದಿಯ ಮನೆಗೆ ಹೋದರೂ ಅವರು ಮತಚಲಾಯಿಸಲು ಒಪ್ಪದ ಕಾರಣ ಬಾಕಿ ಉಳಿಸಲಾಗಿದೆ. ಬೈಂದೂರಿನಲ್ಲಿ 30, ಕುಂದಾಪುರ 23, ಉಡುಪಿ 28, ಕಾಪು 18, ಕಾರ್ಕಳದಲ್ಲಿ 25 ಮಂದಿ ಮತಚಲಾಯಿಸಿಲ್ಲ.

80 ವರ್ಷ ಮೇಲ್ಪಟ್ಟವರಿಂದ ಶೇ. 97 ಮತದಾನ
80 ವರ್ಷ ಮೇಲ್ಪಟ್ಟವರ ಪೈಕಿ 63 ಮಂದಿಯ ಮನೆಗೆ ಎರಡು ಬಾರಿ ಭೇಟಿ ನೀಡಿದರೂ ಅವರು ಲಭ್ಯರಿಲ್ಲದ ಕಾರಣ ಮತದಾನ ಸಾಧ್ಯವಾಗಲಿಲ್ಲ. 52 ಮಂದಿ ನಿಧನ ಹೊಂದಿದ್ದರು. ಬೈಂದೂರು, ಉಡುಪಿ ಹಾಗೂ ಕಾರ್ಕಳದಲ್ಲಿ ತಲಾ ಒಬ್ಬರು ಮತದಾನ ಮಾಡಲು ನಿರಾ ಕರಿಸಿದ್ದಾರೆ. ಇದರಿಂದಾಗಿ ಒಟ್ಟಾರೆ 118 ಮಂದಿ ಮತ ಚಲಾಯಿಸಿಲ್ಲ. 4,060 ಮಂದಿಯ ಪೈಕಿ 3,942 ಮಂದಿಯಷ್ಟೇ ಮತಚಲಾಯಿಸಿದ್ದಾರೆ.

ಅಂಗವಿಕಲರ ಮತದಾನ ಶೇ.99
ಅಂಗವಿಕಲರ ಮತದಾನದಲ್ಲಿ ಉಡುಪಿ ಹಾಗೂ ಕಾರ್ಕಳದಲ್ಲಿ ಶೇ.100 ಮತದಾನ ವಾಗಿದೆ. ಬೈಂದೂರಿನಲ್ಲಿ ಇಬ್ಬರು ಅಂಗವಿಕಲರು ಸಾವನ್ನಪ್ಪಿರುವ ಕಾರಣ 202 ಮಂದಿಯ ಪೈಕಿ 200 ಮಂದಿ ಮತ ಚಲಾಯಿಸಿ ಶೇ.99 ಮತಚಲಾವಣೆಯಾಗಿದೆ. ಕಾಪುವಿನಲ್ಲಿ ಮನೆ ಭೇಟಿ ವೇಳೆ ಯಾರೂ ಇಲ್ಲದ ಕಾರಣ ಒಬ್ಬರು ಮತಚಲಾಯಿಸಿಲ್ಲ. ಇಲ್ಲಿ ಚಲಾವಣೆಯಾದ ಒಟ್ಟು ಮತಗಳು ಶೇ.99. ಉಳಿದಂತೆ ಕುಂದಾಪುರದಲ್ಲಿ ಶೇ.98 ಮತದಾನವಾಗಿದೆ. ಜಿಲ್ಲೆಯಲ್ಲಿ ಅಂಗವಿಕಲರಿಂದ ನಡೆದ ಒಟ್ಟು ಮತದಾನ ಶೇ.99.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.