ಗ್ರಾಮೀಣ ಭಾಗದ ರೈತರಿಗೆ ಕಾಡು ಪ್ರಾಣಿಗಳ ಕಾಟ
ಮುಂಗಾರು ಬೆಳೆ ಕೈಹಿಡಿಯುವ ಲಕ್ಷಣವಿದ್ದರೂ ತಪ್ಪಿಲ್ಲ ಆತಂಕ
Team Udayavani, Oct 20, 2020, 4:00 AM IST
ಬೈಂದೂರು: ಈ ವರ್ಷದ ಮುಂಗಾರು ಬೆಳೆ ಇನ್ನೇನು ಕೆಲವೆ ದಿನದಲ್ಲಿ ಕಟಾವಿಗೆ ಸಿದ್ಧಗೊಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಉತ್ತಮ ಫಸಲು ಬಂದರೂ ಕೂಡ ರೈತರಿಗೆ ಕಾಡು ಪ್ರಾಣಿಗಳಿಂದ ಸಂರಕ್ಷಿಸಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಮುಖ್ಯವಾಗಿ ಬೈಂದೂರು ತಾಲೂಕು ಹಾಗೂ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭತ್ತದ ಬೇಸಾಯ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದೆ. ಮುಂಗಾರು ಬೆಳೆ ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಕಟಾವಿಗೆ ಸಿದ್ಧಗೊಳ್ಳುತ್ತದೆ. ಹವಾಮಾನ ವೈಪರೀತ್ಯ ಒಂದೆಡೆಯಾದರೆ ಈ ಸಮಯದಲ್ಲಿ ಗದ್ದೆಯಲ್ಲಿರುವ ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹರಸಾಹಸಪಡಬೇಕಾಗಿದೆ.
ರಾತ್ರಿ ವೇಳೆ ಹಳ್ಳಿಯಲ್ಲಿ ಕಾವಲು
ಸಾಮಾನ್ಯವಾಗಿ ರಾತ್ರಿ ವೇಳೆ ಹಳ್ಳಿಗಳಲ್ಲಿ ರೈತರು ಅಟ್ಟಣಿಗೆ (ಮನೆ ಹಳ್ಳಿ) ನಿರ್ಮಿಸಿಕೊಂಡು ರಾತ್ರಿಯಿಡೀ ಗದ್ದೆ ಕಾಯುತ್ತಾರೆ. ಕಾಡು ಹಂದಿಯ ಕಾಟ ಈ ವರ್ಷ ಅತ್ಯಧಿಕವಾಗಿದೆ. ನವಿಲು, ಕಡವೆ, ಕಾಡುಕೋಣ, ಹಂದಿ ಕಾಟದಿಂದ ಭತ್ತದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿದೆ. ಪೈರುಗಳು ಬೆಳೆದಿರುವ ಕಾರಣ ಗದ್ದೆಯಲ್ಲಿ ಮೊಳಕೆ ಬರುವ ಪರಿಸ್ಥಿತಿ ಇದೆ ಎನ್ನುವುದು ಕೃಷಿಕ ನಾರಾಯಣ ಮರಾಠಿಯವರ ಅಭಿಪ್ರಾಯವಾಗಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚು
ಕಳೆದ ಕೆಲವು ವರ್ಷಗಳಿಂದ ಪ್ರತಿ ಸಾರಿಯೂ ಭತ್ತದ ಬೆಳೆಗೆ ಕಾಡು ಪ್ರಾಣಿಗಳ ಕಾಟ ಅಧಿಕವಾಗಿದೆ. ಕಾಡು ನಾಶದ ಪರಿಣಾಮ ಒಂದೆಡೆಯಾದರೆ ಮಂಗಗಳು ಕಾಡು ಬಿಟ್ಟು ಊರು ಸೇರಿಕೊಂಡಿವೆ.ಮಾತ್ರವಲ್ಲದೆ ಮನೆಯ ಪಾತ್ರೆಯಲ್ಲಿ ರುವ ಆಹಾರ ಎತ್ತಿಕೊಂಡು ಹೋಗುತ್ತವೆ. ಭತ್ತದ ಗದ್ದೆಗೂ ಕೂಡ ಇವುಗಳ ಕಾಟ ಅಧಿಕವಾಗಿದೆ. ರಾತ್ರಿ ವೇಳೆ ಕಾಡು ಹಂದಿ ಹಗಲು ವೇಳೆ ಮಂಗ,ನವಿಲು ಕಾಯುವುದು ರೈತರಿಗೆ ಸಮಸ್ಯೆಯಾಗತೊಡಗಿದೆ.ಕೂಲಿಯಾಳುಗಳ ಕೊರತೆ ಮತ್ತು ಹಿರಿಯರು ಮಾತ್ರ ಕೃಷಿ ಚಟುವಟಿಕೆ ಮುಂದುವರಿಸಿಕೊಂಡು ಬಂದಿರುವುದರ ನಡುವೆ ಕಾಡು ಪ್ರಾಣಿಗಳ ಹಾವಳಿ, ಹವಾಮಾನ ವೈಪರೀತ್ಯ ಈ ಬಾರಿಯೂ ಕೃಷಿಕರಿಗೆ ಕಂಟಕವಾಗಿ ಪರಿಣಮಿಸಿದೆ.
ಅರ್ಜಿ ನೀಡಿ
ವರ್ಷದಿಂದ ವರ್ಷಕ್ಕೆ ಕಾಡು ಪ್ರಾಣಿಗಳ ಹಾವಳಿ ಅಧಿಕವಾಗಿರುವುದು ನಿಜ. ಆದರೆ ಅತಿಯಾದ ಕಾಡು ನಾಶ ಕೂಡ ಇದಕ್ಕೆ ಮಹತ್ವದ ಕಾರಣವಾಗಿದೆ. ಕಾಡು ಪ್ರಾಣಿಗಳಿಂದ ರೈತರ ಬೆಳೆ ನಾಶವಾದಾಗ ಅದರ ವಿವರದ ಅರ್ಜಿಯನ್ನು ಅರಣ್ಯ ಇಲಾಖೆಗೆ ನೀಡಿದರೆ ಇಲಾಖೆಯಿಂದ ಬೆಳೆ ನಾಶದ ಪರಿಹಾರ ಕೊಡಲಾಗುತ್ತದೆ. ರೈತರು ಇದರ ಉಪಯೋಗ ಪಡೆಯಬಹುದಾಗಿದೆ.
– ಕಿರಣ್ ಬಾಬು, ವಲಯಾರಣ್ಯಧಿಕಾರಿ ಬೈಂದೂರು
ಅರುಣ ಕುಮಾರ್, ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ