ತಗ್ಗರ್ಸೆ ಕಂಬಳ ಗದ್ದೆ ಸಾಂಪ್ರದಾಯಿಕ ನಾಟಿ
Team Udayavani, Jul 3, 2020, 5:14 AM IST
ಬೈಂದೂರು: ತಗ್ಗರ್ಸೆ ಕಂಠದಮನೆ ಕುಟುಂಬಸ್ಥರ ಕಂಬಳ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ ಗುರುವಾರ ನಡೆಯಿತು.
ಕಂಠದ ಮನೆಯ ಕುಟುಂಬದ ಹಿರಿಯರಾದ ಟಿ. ನಾರಾಯಣ ಹೆಗ್ಡೆ ಮಾರ್ಗದರ್ಶನದಲ್ಲಿ ನೂರಾರು ಮಂದಿ ಕೃಷಿ ಕೈಂಕರ್ಯದಲ್ಲಿ ಪಾಲ್ಗೊಂಡರು. ಸುಮಾರು 5.14 ಎಕರೆ ವಿಸ್ತಿರ್ಣ ದಲ್ಲಿ ಈ ಕಂಬಳಗದ್ದೆಯಿದ್ದು ದೇವರಗದ್ದೆ ಎಂಬ ನಂಬಿಕೆ ಇದೆ.
ಕಂಬಳ ಗದ್ದೆ ಊರಿನ ವಿಶೇಷ
ಹಿಂದೆ ಪ್ರತಿ ಮನೆಯಲ್ಲೂ ಕೃಷಿಕರು ಇರುತ್ತಿದ್ದರು. ಆದರೆ ಈಗ ಕೃಷಿ ಮಾಡುವವರ ಸಂಖ್ಯೆ ಹಾಗೂ ಕೂಲಿಯವರ ಕೊರತೆಯಿಂದ ಬೇಸಾಯ ಮಾಡುವುದು ಕಷ್ಟ. ತಗ್ಗರ್ಸೆ ಕಂಬಳ ಗದ್ದೆಯಲ್ಲಿ ಮಾತ್ರ ಪ್ರತಿವರ್ಷವೂ ಸಾರ್ವಜನಿಕರು ಭಕ್ತಿಯಿಂದ ನಾಟಿ ಕಾರ್ಯದಲ್ಲಿ ಭಾಗವಹಿಸುತ್ತಾರೆ. ಈ ಗದ್ದೆಯಲ್ಲಿ ವೀರಗಲ್ಲು ಶಾಸನಗಳು ಇದ್ದು, ಅತ್ಯಂತ ಪುರಾತನವಾಗಿರುವುದಕ್ಕೆ ಸಾಕ್ಷಿಯಾಗಿವೆ.
ಸಂಪೂರ್ಣ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ ಮಾಡಬೇಕೆಂಬ ಸಂಪ್ರದಾಯವಿದ್ದು, ಇಂದಿಗೂ ಕೂಡ ಅದನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಈ ಸಂದರ್ಭ ಜಿ.ಪಂ. ಸದಸ್ಯ ಬಾಬು ಶೆಟ್ಟಿ, ಗ್ರಾ.ಪಂ. ಸದಸ್ಯ ಬಾಲಕೃಷ್ಣ ಹೆಗ್ಡೆ ಕಂಠದಮನೆ, ಸುಭಾಶ್ಚಂದ್ರ ಶೆಟ್ಟಿ ಕಂಠದಮನೆ, ವೆಂಕಟ ಪೂಜಾರಿ ಸಸಿಹಿತ್ಲು, ರಾಜು ಹುದಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ