ಬಸ್ರೂರು – ಹಟ್ಟಿಕುದ್ರು ಸೇತುವೆ ಕಾಮಗಾರಿ ಶೀಘ್ರ ಆರಂಭ ?

ಕೊರೊನಾ, ಮಳೆಯ ಕಾರಣ ಸ್ಥಗಿತಗೊಂಡ ಕಾಮಗಾರಿ

Team Udayavani, Oct 13, 2020, 4:18 AM IST

ಬಸ್ರೂರು – ಹಟ್ಟಿಕುದ್ರು ಸೇತುವೆ ಕಾಮಗಾರಿ ಶೀಘ್ರ ಆರಂಭ ?

ಬಸ್ರೂರು: ಮಂಡಿಕೇರಿಯ ಕಳುವಿನ ಬಾಗಿಲಿನಿಂದ 330 ಮೀ. ಉದ್ದದ ಹಟ್ಟಿಕುದ್ರುವಿಗೆ ಹೋಗುವ ಸೇತುವೆಗೆ ಶಿಲಾನ್ಯಾಸ ಜನವರಿಯಲ್ಲಾಗಿದ್ದು, ಆದರೆ ಕೋವಿಡ್ ಕಾರಣದಿಂದ ಸ್ಥಗಿತಗೊಂಡ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈಗ ಮಳೆ ಕಡಿಮೆಯಾಗಿದ್ದು, ಕಾಮಗಾರಿ ಶೀಘ್ರ ಆರಂಭಗೊಳ್ಳುವ ನಿರೀಕ್ಷೆಯಿದೆ.

ಕೊರೊನಾ, ಮಳೆಯಿಂದಾಗಿ ಸೇತುವೆ ಕಾಮಗಾರಿಯನ್ನು ಮಾರ್ಚ್‌ನಲ್ಲಿ ಸ್ಥಗಿತಗೊಳಿಸಲಾಗಿತ್ತು. ಅದಲ್ಲದೆ ಒಂಭತ್ತು ಪಿಲ್ಲರ್‌ಗಳ ಮುಂದೆ ನೀರಿದ್ದಲ್ಲಿ ಗಟ್ಟಿ ಮಣ್ಣನ್ನು ತುಂಬಿಸಲಾಗಿತ್ತು. ಆದರೆ ನದಿ ತುಂಬಿ ಹರಿಯುವಾಗ ಇಲ್ಲಿ ಮಣ್ಣಿನ ತಡೆಯಿಂದ ಹಟ್ಟಿಕುದ್ರು ಭಾಗದ ನದಿ ಪ್ರದೇಶದಲ್ಲಿ ಕೊರೆತ ಆರಂಭವಾಗುವ ಅಪಾಯವೂ ಇತ್ತು. ಈ ಕಾರಣದಿಂದ ಅಲ್ಲಿ ತುಂಬಿಸಿದ್ದ ಮಣ್ಣನ್ನು ಮಳೆಗಾಲದಲ್ಲಿ ಕಡಿದು ಕೊಡಲಾಗಿತ್ತು.

ಹಟ್ಟಿಕುದ್ರು ಸೇತುವೆ ಜನರ ಬಹು ಹಿಂದಿನ ಕನಸಾಗಿತ್ತು. ಆದರೆ ಇಲ್ಲಿಯವರೆಗೆ ಕಾಲ ಕೂಡಿ ಬಂದಿರಲಿಲ್ಲ. ವಿಧಾನ ಪರಿಷತ್‌ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ವಾರಾಹಿ ನೀರಾವರಿ ನಿಗಮದಿಂದ ಈ ಸೇತುವೆ ನಿರ್ಮಾಣಕ್ಕೆ 14.59 ಕೋ.ರೂ. ಮಂಜೂರಾಗುವ ಮೂಲಕ ದಶಕಗಳ ಕನಸು ನನಸಾಗಿತ್ತು.

ಇನ್ನೂ 12 ಪಿಲ್ಲರ್‌
ಇಲ್ಲಿ ಇನ್ನೂ 12 ಫಿಲ್ಲರ್‌ ನಿರ್ಮಿಸಬೇಕಾಗಿದ್ದು ಎಷ್ಟು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಒಟ್ಟು 21 ಪಿಲ್ಲರ್‌ಗಳನ್ನು ನಿರ್ಮಿಸಬೇಕಾಗಿದ್ದು ಒಮ್ಮೆ ಕಾಮಗಾರಿ ಆರಂಭವಾದರೆ ಅನಂತರ ಯಾವ ಕಾರಣಕ್ಕೂ ನಿಲ್ಲದು ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಪ್ರಸ್ತುತ ಶಾಲಾ ಕಾಲೇಜು ಇಲ್ಲದಿದ್ದರೂ ವಿದ್ಯಾಗಮ ತರಗತಿ ಮತ್ತಿತರ ಕೆಲಸಗಳಿಗಾಗಿ ವಿದ್ಯಾರ್ಥಿಗಳು, ಜನರು ಇರುವ ಒಂದೇ ದೋಣಿಯಲ್ಲಿ ಸಾಗಬೇಕಾಗಿದೆ.

ಶೀಘ್ರ ಕಾಮಗಾರಿ
ಕೊರೊನಾ, ಮಳೆಗಾಲದ ಕಾರಣದಿಂದ ಸೇತುವೆ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಸದ್ಯ ಮಳೆ ಕಡಿಮೆಯಾಗಿದೆ. ಈ ಬಗ್ಗೆ ಗುತ್ತಿಗೆದಾರರೊಂದಿಗೆ ಮಾತನಾಡಿದ್ದು ಬಿಹಾರ, ಉತ್ತರ ಪ್ರದೇಶ ಮತ್ತು ಒರಿಸ್ಸಾ ಪ್ರದೇಶದ ಕಾರ್ಮಿಕರು ಆಗಮಿಸಲಿದ್ದು ಸೇತುವೆ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.
– ರಾಮ್‌ ಕಿಶನ್‌ ಹೆಗ್ಡೆ ಬಸ್ರೂರು, ಉಪಾಧ್ಯಕ್ಷ, ತಾ.ಪಂ. ಕುಂದಾಪುರ

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura ಮೂರು ಕಡಲಾಮೆ ರಕ್ಷಣೆ

Kundapura ಮೂರು ಕಡಲಾಮೆ ರಕ್ಷಣೆ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Uppunda ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Uppunda ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Kundapura – Byndoor ಹೆದ್ದಾರಿ: ನಾಲ್ಕು ಅಂಡರ್‌ಪಾಸ್‌ಗೆ ಒಪ್ಪಿದ ಗಡ್ಕರಿ

Kundapura – Byndoor ಹೆದ್ದಾರಿ: ನಾಲ್ಕು ಅಂಡರ್‌ಪಾಸ್‌ಗೆ ಒಪ್ಪಿದ ಗಡ್ಕರಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.