ಕಾಲ್ತೋಡು: ಒಡವೆ ಇದ್ದರೂ ಬಡವಿ; ಪ್ರೌಢಶಾಲೆ ಬರಲಿ, ರಸ್ತೆಗಳು ಅಭಿವೃದ್ಧಿಯಾಗಲಿ


Team Udayavani, Aug 5, 2022, 2:05 PM IST

12

ಬೈಂದೂರು: ಪಶ್ಚಿಮ ಘಟ್ಟದ ಸಹ್ಯಾದ್ರಿ ಶ್ರೇಣಿಗೆ ಹೊಂದಿಕೊಂಡ ಅಪ್ಪಟ ಗ್ರಾಮೀಣ ಸೊಗಡಿನ ಗ್ರಾಮ ಕಾಲ್ತೋಡು. ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕೊಂಡಿಯಿಂದ ಕೊಲ್ಲೂರಿನವರೆಗೆ ಸಂಪರ್ಕ ಹೊಂದಿದೆ. ಆದರೂ ಒಡವೆ ಇದ್ದರೂ ಬಡವಿ ಎನ್ನುವಂತಿದೆ.

ಈ ಮಾತಿಗೆ ಕಾರಣವಿಷ್ಟೇ. ಇಲ್ಲಿನ ಗ್ರಾಮಸ್ಥರ ಮುಖ್ಯ ಕಸುಬು ಕೃಷಿ. ಅಕ್ಕ ಪಕ್ಕದ ಗ್ರಾಮಗಳು ಪ್ರಗತಿಯಾದರೂ ಈ ಗ್ರಾಮ ಇನ್ನೂ ಅಭಿವೃದ್ಧಿಯ ಕನಸು ಕಾಣುತ್ತಿದೆಯಷ್ಟೇ.

ಕಾಲ್ತೋಡು ಗ್ರಾಮವೂ ಸೇರಿದ ಗ್ರಾ.ಪಂ ನಲ್ಲಿ ಕಪ್ಸೆ, ಕೂರ್ಸಿ,ಬೋಳಂಬಳ್ಳಿ, ಮೂರೂರು, ಬ್ಯಾಟಿಯಾಣಿ, ಚಪ್ಪರಕಿ, ಮೆಟ್ಟಿನಹೊಳೆ ಪ್ರದೇಶಗಳು ಬರುತ್ತವೆ. 13 ಜನ ಗ್ರಾ.ಪಂ ಸದಸ್ಯರು, 5 ವಾರ್ಡ್‌ ಗಳಿದ್ದು ಒಟ್ಟು 10 ಸಾವಿರ ಹೆಕ್ಟೇರ್‌ ವಿಸ್ತೀರ್ಣವಿದೆ. ಜನಸಂಖ್ಯೆ 5172.

ಪ್ರೌಢಶಾಲೆ ಬಹುವರ್ಷದ ಬೇಡಿಕೆ

ಕಾಲ್ತೋಡು ಗ್ರಾಮದಲ್ಲಿ 10 ಪ್ರಾಥಮಿಕ ಶಾಲೆಗಳು, 9 ಅಂಗನವಾಡಿ ಕೇಂದ್ರಗಳಿವೆ. ಆದರೆ ಪ್ರೌಢಶಾಲೆಯಿಲ್ಲದೇ ವಿದ್ಯಾರ್ಥಿಗಳು ದೂರದ ಕಂಬದಕೋಣೆ, ಅರೆಶಿರೂರು ಮುಂತಾದೆಡೆಗೆ ತೆರಳಬೇಕಿದೆ. ಯಡೇರಿ, ಕಾಲ್ತೋಡು, ಚಪ್ಪರ, ಒಲ್ದೋಗ್‌, ಬೋಳಂಬಳ್ಳಿ, ಮೆಟ್ಟಿನಹೊಳೆ ಸೇರಿದಂತೆ ಎಲ್ಲ ಭಾಗದ ವಿದ್ಯಾರ್ಥಿಗಳು ಕಾಡುದಾರಿಯಲ್ಲಿ ಹಲವು ಕಿ.ಮೀ. ನಡೆದು ಬರಬೇಕಾದ ಸ್ಥಿತಿಯಿದೆ.

ಮುಕ್ಕಾಲು ಭಾಗ ಅರಣ್ಯ ವ್ಯಾಪ್ತಿ ಹೊಂದಿರುವ ಈ ಗ್ರಾಮದ ಒಂದು ಭಾಗ ಮಾತ್ರ ಕೊಂಚ ಅಭಿವೃದ್ಧಿಗೊಂಡಿದೆ. ಮಳೆಗಾಲದಲ್ಲಿ ಇಲ್ಲಿ ಅಕ್ಷರಶಃ ಸಮಸ್ಯೆಯ ಆಗರ. ನದಿ ತೊರೆಗಳು ತುಂಬಿ ಹರಿಯುತ್ತಿವ ಕಾರಣ ವಿದ್ಯಾರ್ಥಿಗಳು ಕಾಲು ಸಂಕ, ತೂಗು ಸೇತುವೆಗಳನ್ನೇ ದಾಟಿ ಬರಬೇಕು. 10 ಪ್ರಾ. ಶಾಲೆಗಳಿರುವ ಈ ಊರಿಗೆ ಒಂದು ಪ್ರೌಢಶಾಲೆ ಬೇಕೇ ಬೇಕಾಗಿದೆ. ಹಲವು ವರ್ಷ ಗಳಿಂದ ಬೇಡಿಕೆ ಸಲ್ಲಿಸು ತ್ತಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ದೂರು.

ರಸ್ತೆಗಳ ಅಭಿವೃದ್ಧಿಗೂ ಗಮನ ಕೊಡಬೇಕಿದೆ. ಗ್ರಾಮದ ಪ್ರಮುಖ ಸಂಪರ್ಕ ರಸ್ತೆ ಹೊರತುಪಡಿಸಿದರೆ ಒಳ ಭಾಗದಲ್ಲಿ ರಸ್ತೆಗಳೇ ಇಲ್ಲ ಎನ್ನುವುದು ಸ್ಥಳೀಯರ ಅಳಲು. ಮಳೆಗಾಲದಲ್ಲಿ ರಸ್ತೆಯೆಲ್ಲಾ ಕೆಸರುಮಯ. ಮುಖ್ಯವಾಗಿ ಯಡೇರಿ ಬಲ್ಲೋಣ್‌ ಭಾಗಕ್ಕೆ ಸಂಚರಿಸುವುದೇ ದುಸ್ತರ. ಕಾಲೊ¤àಡು, ಬವಳಾಡಿ ಮೂಲಕ ಬೈಂದೂರು ತಲುಪುವುದು ಹತ್ತಿರದ ದಾರಿ. ಆದರೆ ರಸ್ತೆ ನಿರ್ಮಾಣವಾಗದ ಕಾರಣ ತಾಲೂಕು ಕೇಂದ್ರಕ್ಕೆ ಹತ್ತಾರು ಕಿ.ಮೀ ಸುತ್ತಿಬಳಸಿ ತಲುಪಬೇಕಿದೆ. ರಸ್ತೆ ನಿರ್ಮಾಣಕ್ಕೆ ದೊಡ್ಡ ಪ್ರಮಾಣದ ಅನುದಾನ ಅಗತ್ಯವಿದೆ. ಗ್ರಾ.ಪಂ. ಅನುದಾನದಲ್ಲಿ ಸಾಧ್ಯವಿಲ್ಲ ಎನ್ನುವುದು ಪಂಚಾಯತ್‌ ಅಭಿಪ್ರಾಯ. ಹಾಗಾಗಿ ಒಳ ರಸ್ತೆಗಳೆಲ್ಲ ಆದ್ಯತೆ ಮೇರೆಗೆ ಅಭಿವೃದ್ಧಿಯಾಗಬೇಕಿದೆ.

ಆಸ್ಪತ್ರೆ ಇದೆ, ವೈದ್ಯರು ಬೇಕು

ಕೃಷಿ ಈ ಊರಿನ ಪ್ರಮುಖ ಉದ್ಯೋಗವಾಗಿದ್ದು ಕೃಷಿಕರಿಗೆ ಅನುಕೂಲವಾಗುವ ವಾತಾವರಣ ಕಲ್ಪಿಸಬೇಕಿದೆ. ಪ್ರತೀ ಕೆಲಸಕ್ಕೂ ಕಂಬದಕೋಣೆ, ಬೈಂದೂರು, ಉಪ್ಪುಂದಕ್ಕೆ ತೆರಳಬೇಕಿದೆ. ಮುಖ್ಯವಾಗಿ ಹೈನುಗಾರಿಕೆ ಇಲ್ಲಿನವರ ಉದ್ಯೋಗವಾಗಿದ್ದು, ಪಶು ಆಸ್ಪತ್ರೆಯೂ ಇದೆ. ಆದರೆ ಪಶುವೈದ್ಯರು ಮಾತ್ರ ಆಯ್ದ ದಿನಗಳಲ್ಲಿ ಮಾತ್ರ ಲಭ್ಯ. ಜತೆಗೆ ಇಲ್ಲಿಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಇತರೆ ಗ್ರಾಮಗಳ ಹೆಚ್ಚುವರಿ ಹೊಣೆ ಇದ್ದು, ಕೆಲವು ದಿನ ಮಾತ್ರ ಗ್ರಾಮದ ಕೆಲಸಗಳಿಗೆ ಸಿಗುತ್ತಾರೆ. ಇದರಿಂದ ಜನರು ಕಂದಾಯ ಸಂಬಂಧಿ ಕೆಲಸಕ್ಕೆ ದಿನವಿಡೀ ಕಾಯುವುದು , ಹಲವಾರು ಬಾರಿ ಅಲೆದಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಖಾಯಂ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಿಸಬೇಕಿದೆ.

ಸೂಕ್ತ ಸೌಲಭ್ಯ ಕಲ್ಪಿಸಿ: ಮುಖ್ಯವಾಗಿ ರಸ್ತೆ ಮತ್ತು ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕಿದೆ. ಪಂಚಾಯತ್‌ ಅನುದಾನದಲ್ಲಿ ದೊಡ್ಡ ರಸ್ತೆ ನಿರ್ಮಾಣ ಸಾಧ್ಯವಾಗದು. ಒಳ ರಸ್ತೆಗಳ ಅಭಿವೃದ್ಧಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಬೇಕಿದೆ. –ನೇತ್ರಾವತಿ ಆಚಾರ್ಯ, ಅಧ್ಯಕ್ಷರು, ಕಾಲ್ತೋಡು ಗ್ರಾಮ ಪಂಚಾಯತ್‌.

ಅಭಿವೃದ್ಧಿಗೆ ಗಮನಹರಿಸಿ: ಪ್ರತಿದಿನ ಪೇಟೆಗೆ ಬರಲು ಹಲವು ಕಿ.ಮೀ.ನಡೆದು ಬರಬೇಕು. ಯಾವ ಭಾಗಕ್ಕೂ ಸರಿಯಾದ ಬಸ್ಸು ಹಾಗೂ ರಸ್ತೆಗಳಿಲ್ಲ.ಮಳೆಗಾಲದಲ್ಲಿ ಶಾಲೆ ಮಕ್ಕಳು ಮನೆ ಸೇರುವಾಗ ರಾತ್ರಿಯಾಗುತ್ತದೆ. ಮುಖ್ಯ ರಸ್ತೆ ಹೊರತು ಪಡಿಸಿದರೆ ಉಳಿದ ಹಲವು ರಸ್ತೆಗಳು ಇನ್ನೂ ಡಾಮರು ಕಂಡಿಲ್ಲ. ಇವುಗಳ ಅಭಿವೃದ್ಧಿಗೆ ಪಂಚಾಯತ್‌, ಜನಪ್ರತಿನಿಧಿಗಳು ಗಮನಹರಿಸಬೇಕಿದೆ. –ಸುರೇಂದ್ರ ಗೌಡ, ಸ್ಥಳೀಯರು

-ಅರುಣ್‌ ಕುಮಾರ್‌ ಶಿರೂರು

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.